ಸಾಲ ಮಾಡೋದು ದೊಡ್ಡ ವಿಷಯವೇನಲ್ಲ. ಈಗಂತೂ ಸಾಲ ನೀಡಲು ಬ್ಯಾಂಕ್ಗಳು ತುದಿಗಾಲಲ್ಲಿ ನಿಂತಿರುತ್ತವೆ. ಆದ್ರೆ ಸಾಲ ತೆಗೆದುಕೊಳ್ಳೋ ಮುನ್ನ ಹಾಗೂ ತೀರಿಸೋ ವಿಚಾರದಲ್ಲಿ ಒಂದಿಷ್ಟು ಯೋಜನೆ ರೂಪಿಸಿಕೊಳ್ಳೋದು ಅಗತ್ಯ. ಅಷ್ಟಿಲ್ಲದೆ ಹಾಸಿಗೆಯಿದ್ದಷ್ಟೇ ಕಾಲು ಚಾಚಬೇಕು ಎಂದು ಹಿರಿಯರು ಹೇಳಿಲ್ಲ.
ಈ ಮಾತನ್ನು ಖರ್ಚು ಮಾಡೋವಾಗ ಮಾತ್ರವಲ್ಲ, ಸಾಲ ಮಾಡೋವಾಗಲೂ ನೆನಪಿಟ್ಟುಕೊಳ್ಳಬೇಕು. ಸುಖಾಸುಮ್ಮನೆ ಸಾಲ ಮಾಡಿ ತೊಂದರೆಗೆ ಸಿಲುಕಿಕೊಳ್ಳಬೇಡಿ. ಆದ್ರೆ ಕೆಲವೊಂದು ಸಂದರ್ಭಗಳಲ್ಲಿ ಸಾಲ ಮಾಡಲೇಬೇಕಾಗುತ್ತೆ.ಉದಾಹರಣೆಗೆ ಮನೆ ಖರೀದಿಸೋವಾಗ,ಕಾರು ಕೊಳ್ಳೋವಾಗ.ಇಂಥ ಸಂದರ್ಭಗಳಲ್ಲಿ ಸಾಲವನ್ನು ಹೊರೆಯಾಗದಂತೆ ನಿರ್ವಹಿಸಲು ಯೋಜನೆ ಹಾಕಿಕೊಳ್ಳೋದು ಅಗತ್ಯವಾಗಿದೆ.

ಸಾಲವನ್ನು ಹೊರೆಯಾಗದಂತೆ ಯೋಚಿಸಿ ಕೈಗೊಳ್ಳಲಿದ್ದರೆ ಜನರು ಮನೆ, ಆಸ್ತಿಗಳನ್ನ ಕಳೆದುಕೊಳ್ಳಬೇಕಾಗುತ್ತದೆ. ದೇಶಗಳ ನಡುವಿನ ಯುದ್ಧಕ್ಕೆ ಕಾರಣವಾಗಬಹುದು. ಅನೇಕರ ಸಾವಿಗೆ ಕಾರಣವೂ ಆಗಬಹುದು.
ದುಡಿದ ಹಣದಿಂದ ಬಂದ ಲಾಭದಿಂದ ಖರೀದಿಸಿದರೆ ಅದು ನಿಮಗೆ ಒಳಿತಾಗಬಹುದು. ಆದರೆ ಅದೇ ಬ್ಯಾಂಕ್ ಸಾಲದಿಂದ ಲೆಕ್ಕಾಚಾರ ಮಾಡದೇ ಖರೀದಿಸುವುದು , ಮರುಪಾವತಿಸಲಾಗದೆ ಆಸ್ತಿ ಹರಾಜಿಗೂ ಎಡೆ ಮಾಡಿಕೊಡಬಹುದು.
ಇದು ವ್ಯಕ್ತಿಗೆ ಹೇಗೆ ಅನುಗುಣವಾಗಿದೆಯೋ , ಅದೇ ರೀತಿ ಬ್ಯಾಂಕ್, ರಾಷ್ಟ್ರಗಳಿಗೂ ಅನ್ವಯವಾಗುತ್ತದೆ. ಬ್ಯಾಂಕ್ಗಳು ಹೇಗೆ ಬೇಗೆ ಹಾಗೆ ಸಾಲ ನೀಡಿದರೆ ಎನ್ಪಿಎ ಹೆಚ್ಚಾಗಿ ಮುಚ್ಚಬೇಕಾದ ಪರಿಸ್ಥಿತಿ ಎದುರಿಸುತ್ತವೆ. ಹಾಗೆಯೇ ರಾಷ್ಟ್ರಗಳೂ ಸಾಲ ಹೆಚ್ಚಾದರೆ ಆರ್ಥಿಕತೆ ಮೇಲೆ ಪರಿಣಾಮ ಬೀರುವುದಲ್ಲದೆ ಸಾಲ ಪಡೆದ ರಾಷ್ಟ್ರದ ಗುಲಾಮಗಿರಿಗೆ ಬಲಿಯಾಗುತ್ತದೆ.
ದೇಶದ ಸಾಲದ ಪ್ರಮಾಣವು ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 60ಕ್ಕಿಂತಲೂ ಕಡಿಮೆ ಇರಬೇಕು. ಆದರೆ ಅನೇಕ ರಾಷ್ಟ್ರಗಳಲ್ಲಿ ಇದರ ಪ್ರಮಾಣವು ಅಂದಾಜಿಗಿಂತ ಹೆಚ್ಚಾಗಿದೆ. ಇದರಿಂದ ಹೆಚ್ಚಿನ ಬಡ್ಡಿಯನ್ನು ತೆರಬೇಕಾಗುತ್ತದೆ.
ಸಾಲವು ಸಕಾರಾತ್ಮಕವಾಗಿಯು ಕಾರ್ಯ ನಿರ್ವಹಿಸುತ್ತದೆ. ರಸ್ತೆ, ಶಾಲೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಭವಿಷ್ಯದ ಯೋಜನೆಗಳ ಹೂಡಿಕೆಗೆ ಬಳಸುವುದರಿಂದ ಉದ್ಯೋಗ ಸೃಷ್ಟಿಯಾಗಿ ತಿರುಗಿ ಹಣ ಸರ್ಕಾರದ ಬೊಕ್ಕಸಕ್ಕೆ ತಲುಪುತ್ತದೆ.
ಆದರೆ ಕಳೆದು ಒಂದು ಶತಮಾತನದಲ್ಲಿ ಸಾಲದ ಪ್ರಮಾಣವು ಎರಡು ಪಟ್ಟು ಹೆಚ್ಚಾಗಿದೆ. ಜಗತ್ತಿನ ಒಟ್ಟು ಜಿಡಿಪಿ ಪ್ರಮಾಣದ ಮೂರು ಪಟ್ಟು ಸಾಲವೇ ತುಂಬಿದೆ. ಹೀಗಿರುವಾಗ ಇದನ್ನು ಹಿಂದಿರುಗಿಸುವವರು ಯಾರು? ಎಂಬುದು ಪ್ರಶ್ನೆಯಾಗಿದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications