ನವದೆಹಲಿ, ಅ. 20: ಬೆಲೆ ಏರಿಕೆಯಾಗುವುದನ್ನು ತಡೆಯಲು ಸತತವಾಗಿ ಬಡ್ಡಿ ದರಗಳನ್ನು ಏರಿಸುವುದು ಅಗತ್ಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸದಸ್ಯೆ ಆಶಿಮಾ ಗೋಯಲ್ ಹೇಳಿದ್ದಾರೆ. ಅವರ ಪ್ರಕಾರ ಹಣ ಹಣದುಬ್ಬರ ಮುಂದಿನ ವರ್ಷದಲ್ಲಿ ಶೇ. 6ಕ್ಕಿಂತ ಕಡಿಮೆಗೆ ಇಳಿಯುವ ಸಾಧ್ಯತೆ ಇದೆ.
ಸದ್ಯ ಭಾರತದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂಪಿಐ) ಆಧಾರಿತ ಹಣದುಬ್ಬರದ ವಾರ್ಷಿಕ ದರ ಶೇ. 10.7 ಇದೆ. ಇನ್ನು, ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ದರ ಶೇ. 7.41 ಇದೆ.
ಆಶಿಮಾ ಗೋಯಲ್ ಅವರು ಸಿಪಿಐ ಆಧಾರಿತ ಹಣದುಬ್ಬರದ ಬಗ್ಗೆ ಮಾತನಾಡಿದ್ದು. ಈ ದರ ಶೇ. 6 ಅನ್ನು ದಾಟಿ ಹೋಗಬಾರದು ಎಂಬುದು ಆರ್ಬಿಐ ಇಟ್ಟಿದ್ದ ಗುರಿ. ಆದರೆ, ಹಲವು ತಿಂಗಳ ಕಾಲ ಸತತವಾಗಿ ಭಾರತದಲ್ಲಿ ಹಣದುಬ್ಬರ ಈ ಮಿತಿಯನ್ನು ಮೀರಿ ಹೋಗಿದೆ. ಆಹಾರ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ ಇತ್ಯಾದಿ ಬಹು ಕಾರಣಗಳಿಂದ ಹಣದುಬ್ಬರ ಹೆಚ್ಚಾಗಿದೆ.
ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಇಡೀ ದೇಶ ಸ್ತಬ್ಧಗೊಂಡು, ಆರ್ಥಿಕವಾಗಿ ಜರ್ಝರಿತವಾದಾಗ, ಪುಷ್ಟಿ ನೀಡಲು ಆರ್ಬಿಐ ಸತತವಾಗಿ ಬಡ್ಡಿದರಗಳನ್ನು ಇಳಿಸುತ್ತಾ ಬಂದಿತ್ತು. ಆರ್ಥಿಕ ಚೇತರಿಕೆ ಆಗುತ್ತಿರುವಂತೆಯೇ ಆರ್ಬಿಐ ಮತ್ತೆ ಬಡ್ಡಿ ದರ ಹೆಚ್ಚಿಸುವ ನಿರ್ಧಾರ ಮಾಡಿತು. ಹಣದುಬ್ಬರ ಏರುತ್ತಿರುವಂತೆಯೇ ಆರ್ಬಿಐ ಸತತವಾಗಿ ಬಡ್ಡಿ ದರ ಹೆಚ್ಚಿಸುತ್ತಾ ಬಂದಿದೆ. ಈಗ ಸತತ ಮೂರು ಬಾರಿ ದರ ಹೆಚ್ಚಿಸಿದೆ.
ಬಡ್ಡಿ ದರ ಸಮರ್ಥನೆ
ಮಾನಿಟರಿ ಪಾಲಿಸಿ ಕಮಿಟಿ ಸದಸ್ಯೆ ಆಶಿಮಾ ಗೋಯಲ್ ಅವರು ಆರ್ಬಿಐನಿಂದ ಸತತವಾಗಿ ಬಡ್ಡಿ ದರ ಏರಿಕೆ ಮಾಡಿದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಆರ್ಥಿಕ ಪ್ರಗತಿಗೆ ಧಕ್ಕೆ ತರುವ ಮಟ್ಟಕ್ಕೆ ನೈಜ ಬಡ್ಡಿ ದರ (ರಿಯಲ್ ಇಂಟರೆಸ್ಟ್ ರೇಟ್) ಹೆಚ್ಚಿಲ್ಲ ಎಂದು ಅವರು ಹೇಳಿದ್ದಾರೆ. ಅಂದರೆ ಆರ್ಬಿಐ ಬಡ್ಡಿ ದರಗಳನ್ನು ಇನ್ನಷ್ಟು ಏರಿಸಲು ಅವಕಾಶ ಇದೆ ಎಂಬುದು ಅವರ ವಾದ.
ರಿಯಲ್ ಇಂಟರೆಸ್ಟ್ ರೇಟ್ ಎಂಬುದು ಹಣದುಬ್ಬರದ ಅಂಶವನ್ನೂ ಸೇರಿಸಿ ಲೆಕ್ಕ ಮಾಡುವ ಬಡ್ಡಿ ದರ. ಒಂದು ಸರಕನ್ನು ಕೊಳ್ಳುವವ ತೆರವು ನಿಜವಾದ ಬೆಲೆ ಹಾಗೂ ಅದನ್ನು ಮಾರುವವನಿಗೆ ಸಿಗುವ ನಿಜವಾದ ಲಾಭ, ಇದರ ಆಧಾರದ ಮೇಲೆ ನೈಜ ಬಡ್ಡಿ ದರ ಇದೆ.
"ನೈಜ ದರಗಳು ಹೆಚ್ಚಿದಾಗ ಆರ್ಥಿಕತೆಯಲ್ಲಿ ಬೇಡಿಕೆ ಕಡಿಮೆ ಆಗುತ್ತದೆ" ಎನ್ನುವ ಆಶಿಮಾ ಗೋಯಲ್, "ಅಂತಾರಾಷ್ಟ್ರೀಯ ವಸ್ತುಗಳ ಬೆಲೆ ಕಡಿಮೆ ಆಗುತ್ತದೆ. ಸರಬರಾಜು ಸರಪಳಿಯ ಅಡಚಣೆಗಳು ಕಡಿಮೆ ಆಗಿವೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಉತ್ಪಾದನಾ ವೆಚ್ಚ
"ಭಾರತ ಸರ್ಕಾರ ಸಪ್ಲೈ ಸೈಡ್ ಹಣದುಬ್ಬರವನ್ನು ಕಡಿಮೆಗೊಳಿಸಲು ಕ್ರಮ ಕೈಗೊಳ್ಳುತ್ತಿದೆ. ಸದ್ಯದ ಅಂದಾಜುಗಳ ಪ್ರಕಾರ ಮುಂದಿನ ವರ್ಷ ಹಣದುಬ್ಬರ ಶೇ. 6ಕ್ಕಿಂತ ಕಡಿಮೆಗೆ ಇಳಿಯುವ ಸಾಧ್ಯತೆ ಇದೆ" ಎಂದು ಆಶಿಮಾ ಗೋಯಲ್ ಹೇಳಿದ್ದಾರೆ.
ಇಲ್ಲಿ ಸಪ್ಲೈ ಸೈಡ್ ಇನ್ಫ್ಲೇಷನ್ ಎಂದರೆ ಸರಬರಾಜು ಹಂತದ ಹಣದುಬ್ಬರ. ಅಂದರೆ, ಒಂದು ಉತ್ಪನ್ನದ ತಯಾರಿಕೆಯ ವೆಚ್ಚ ಹೆಚ್ಚಾಗಿ ಅದರ ಬೆಲೆ ಏರಿಕೆ ಆಗುವುದಕ್ಕೆ ಸಬ್ಲೈ ಸೈಡ್ ಹಣದುಬ್ಬರವೆನ್ನುತ್ತಾರೆ.
ಈಗ ಉತ್ಪಾದನಾ ವೆಚ್ಚದಿಂದ ಆಗುವ ಹಣದುಬ್ಬರವನ್ನು ಕಡಿಮೆ ಮಾಡಲು ಸರಕಾರ ಕ್ರಮ ಕೈಗೊಳ್ಳುತ್ತಿದೆ. ಈ ಸಮಯದಲ್ಲಿ ನೈಜ ಬಡ್ಡಿದರದಲ್ಲಿ ತುಸು ಹೆಚ್ಚಳ ಮಾಡಿದರೆ, ಆರ್ಥಿಕ ಪ್ರಗತಿ ಸ್ವಲ್ಪಮಟ್ಟಿಗೆ ಕುಂಠಿತಗೊಳ್ಳಬಹುದು. ಆದರೆ ಹಣದುಬ್ಬರವನ್ನು ತಗ್ಗಿಸಲು ಸಾಧ್ಯವಿದೆ ಎಂದು ಆರ್ಬಿಐನ ಎಂಪಿಸಿ ಸದಸ್ಯೆ ಹೇಳಿದ್ದಾರೆ.
ರುಪಾಯಿ ಕುಸಿತದ ಬಗ್ಗೆ
ಡಾಲರ್ ಎದುರು ರೂಪಾಯಿ ಮೌಲ್ಯ 83 ಮಟ್ಟಕ್ಕಿಂತ ಆಚೆ ಕುಸಿದಿದೆ. ಇದು ಸಾರ್ವಕಾಲಿಕ ಕಳಪೆ ರೂಪಾಯಿ ಮೌಲ್ಯ ಎನಿಸಿದೆ. ರೂಪಾಯಿ ಈ ಮಟ್ಟಕ್ಕೆ ಮೌಲ್ಯ ಕಳೆದುಕೊಳ್ಳುತ್ತಿರುವುದರ ಬಗ್ಗೆ ಆಶಿಮಾ ಗೋಯಲ್ ಪ್ರತಿಕ್ರಿಯಿಸಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅನಿಸಿಕೆಯನ್ನೇ ಪುನರುಚ್ಚರಿಸಿದ್ದಾರೆ.
ರೂಪಾಯಿ ಮೌಲ್ಯ ಕಡಿಮೆ ಆದರೆ ಸರಕುಗಳ ಆಮದು ವೆಚ್ಚ ಹೆಚ್ಚಾಗುತ್ತದೆ. ರೂಪಾಯಿ ಮೌಲ್ಯ ಮಾರುಕಟ್ಟೆ ನಿರ್ಧಾರಿತವಾಗಿರುತ್ತದೆ. ಬೇರೆ ದೇಶಗಳ ಕರೆನ್ಸಿಗೆ ಹೋಲಿಸಿದರೆ ರೂಪಾಯಿ ಮೌಲ್ಯ ಕುಸಿತ ತೀರಾ ಹೆಚ್ಚು ಎನಿಸುವುದಿಲ್ಲ. ಅಂದರೆ ಭಾರತದ ಬಗ್ಗೆ ಸಕಾರಾತ್ಮಕ ಧೋರಣೆಗಳಿವೆ ಎಂದಾಯಿತು. ಇನ್ನು ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈಕ್ವಿಟಿ ಬೆಲೆಗಳ ಕುಸಿತ ತೀರಾ ಹೆಚ್ಚಿಲ್ಲ. ಇವೆಲ್ಲವೂ ಭಾರತದ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಭಾವನೆಗಳಿರುವುದನ್ನು ತೋರಿಸುತ್ತದೆ ಎಂದು ಆಶಿಮಾ ಗೋಯಲ್ ತಿಳಿಸಿದ್ಧಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications