ಕೊರೊನಾ ವೈರಾಣು ಆತಂಕದಿಂದಲೇ ಹಲವಾರು ಕಂಪೆನಿಗಳು ವರ್ಕ್ ಫ್ರಮ್ ಹೋಮ್ ಮಾಡುವಂತೆ ಉದ್ಯೋಗಿಗಳಿಗೆ ಸೂಚನೆ ನೀಡಿದೆ. ಆದರೆ ಇಂಥದ್ದೊಂದು ಅನಿವಾರ್ಯ ಸೃಷ್ಟಿ ಆಗಬಹುದು ಎಂಬ ಅಂದಾಜು ಇಲ್ಲದ ಕಾರಣಕ್ಕೆ ಕೆಲವು ಉದ್ಯೋಗಿಗಳು ಸಮಸ್ಯೆಗೆ ಸಿಲುಕಿದ್ದಾರೆ. ಏನು ಆ ಸಮಸ್ಯೆಗಳು ಎಂಬುದರ ಸಣ್ಣ ಝಲಕ್ ಇಲ್ಲಿದೆ.
* ಕೆಲವು ಕಂಪೆನಿಗಳವರು ಉದ್ಯೋಗಿಗಳಿಗೆ ತಕ್ಷಣಕ್ಕೆ ಲ್ಯಾಪ್ ಟಾಪ್ ಒದಗಿಸಲು ಸಾಧ್ಯವಾಗದೆ ಡೆಸ್ಕ್ ಟಾಪ್ ನೀಡಿದ್ದು, ಪಿ.ಜಿ. (ಪೇಯಿಂಗ್ ಗೆಸ್ಟ್)ಗಳಲ್ಲಿ ವಾಸ್ತವ್ಯ ಹೂಡಿರುವವರಿಗೆ ಪೀಕಲಾಟಕ್ಕೆ ಸಿಲುಕಿಕೊಂಡಿದೆ. ಪಿ.ಜಿ.ಗಳಲ್ಲಿ ಮಲಗಲು ಮಂಚದ ವ್ಯವಸ್ಥೆ ಇರುತ್ತದೆಯೇ ವಿನಾ ಅಲ್ಲಿ ಟೇಬಲ್ ಹಾಕಿ ಡೆಸ್ಕ್ ಟಾಪ್ ಇಡುವುದು ಅಸಾಧ್ಯದ ಮಾತು. ಹಾಗಂತ ಒಂದೆರಡು ದಿನಕ್ಕೆ ಅಂತ ಕೆಲಸಕ್ಕೆ ರಜಾ ಹಾಕುವಂತೆಯೂ ಇಲ್ಲ. ಏಕೆಂದರೆ ಇದು ಎಷ್ಟು ಸಮಯ ಹೀಗೇ ಮುಂದುವರಿಯಬಹುದು ಎಂಬ ಅಂದಾಜು ಯಾರಿಗೂ ಇಲ್ಲ. ಲ್ಯಾಪ್ ಟಾಪ್ ನಾದರೂ ಒದಗಿಸಿದ್ದರೆ ಕೆಲಸ ಮಾಡಬಹುದಿತ್ತು ಎಂಬುದು ಅವರ ಅಳಲು.

* ಇನ್ನು ಬೆಂಗಳೂರಿನಂಥ ನಗರಗಳಲ್ಲಿ ಹಲವೆಡೆ ಹಾಟ್ ಸ್ಪಾಟ್ ಕೆಲಸ ಮಾಡುವುದೇ ಇಲ್ಲ. ಇಂಟರ್ ನೆಟ್ ಸಂಪರ್ಕ ಇಲ್ಲದೆ ಕೆಲಸ ಮಾಡುವುದಾದರೂ ಹೇಗೆ? ಬ್ರ್ಯಾಡ್ ಬ್ಯಾಂಡ್ ಕೆಲಸ ಮಾಡುತ್ತದೆ. ಆದರೆ ಎಷ್ಟು ದಿನಗಳ ಕಾಲ ವರ್ಕ್ ಫ್ರಮ್ ಅನ್ನೋದು ಗೊತ್ತಿಲ್ಲ. ತಾತ್ಕಾಲಿಕ ಅಗತ್ಯಕ್ಕೆ ಶಾಶ್ವತವಾದ ಖರ್ಚು ಅಂಟಿಹಾಕಿಕೊಂಡಂತೆ ಆಗುತ್ತದೆ ಎಂಬುದು ಮತ್ತೊಂದು ಸಮಸ್ಯೆ.
* ಮನೆಯಲ್ಲಿ ಮಕ್ಕಳಿಗೆ ಶಾಲೆಗೆ ರಜಾ ಇದೆ. ಅವರನ್ನು ಹೊರಗೆ ಆಟ ಆಡುವುದಕ್ಕೆ ಕಳುಹಿಸುವುದು ಕೂಡ ಸಮಸ್ಯೆ. ಟೀವಿ ಹಾಕಿಕೊಳ್ಳುತ್ತಾರೆ. ನನಗೆ ಆಗಾಗ ಆಫೀಸಿನಿಂದ ಕಾಲ್ ಬಂದು, ಏನಾದರೂ ವಿಚಾರಿಸುತ್ತಾ ಇರುತ್ತಾರೆ. ನಾನು ಮನೆಯಲ್ಲಿ ಇರುವುದು ಮಕ್ಕಳಿಗೆ ಖುಷಿಯ ವಿಚಾರವಾಗಿ, ಆಟ ಆಡೋಣ ಬಾ ಅಂತ ಬಹಳ ಹಿಂಸಿಸುತ್ತಾರೆ. ಏಕಾಗ್ರತೆಯೇ ಕಷ್ಟವಾಗಿದೆ ಎಂಬುದು ಇನ್ನೊಂದು ಬಗೆಯ ಅಹವಾಲು.
* ಮನೆಯಲ್ಲಿ ವಯಸ್ಸಾದವರು ಇದ್ದವರಿಗೆ, ಸಂಬಂಧಿಕರ ಮನೆಗಳಲ್ಲಿ ಉಳಿದುಕೊಂಡವರಿಗೆ, ಪಿ.ಜಿ.ಗಳು- ಸ್ನೇಹಿತರ ಜತೆಗೆ ರೂಮ್ ಶೇರಿಂಗ್ ಮಾಡಿಕೊಂಡವರಿಗೆ ಹೀಗೆ ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ಸಂಕಟಗಳಿವೆ.
* ಇನ್ನೂ ಕೆಲವರಿಗೆ ಕಂಪೆನಿಗಳಲ್ಲಿ ವರ್ಕ್ ಫ್ರಮ್ ಹೋಮ್ ಎಂಬುದನ್ನು ಈಗ ಪೈಲಟ್ ಸ್ಕೀಮ್ ಥರ ಮಾಡಿ, ಆ ನಂತರ ಅದನ್ನೇ ಶಾಶ್ವತವಾಗಿ ಮಾಡಿಬಿಟ್ಟರೆ ಹೇಗೆ? ಇದರಿಂದ ಕಂಪೆನಿಗಳಿಗೆ ವೆಚ್ಚ ಉಳಿತಾಯವಾಗುತ್ತದೆ. ಆದರೆ ನಮಗೆ ಬಹಳ ಸಮಸ್ಯೆಗಳು ಕಾಡುತ್ತವೆ ಎಂಬ ಚಿಂತೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications