ಬೆಂಗಳೂರು, ಆಗಸ್ಟ್ 30: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧುರೈ-ಬೆಂಗಳೂರು ನಗರಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹೊಸ ಮಧುರೈ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ಹೈಸ್ಪೀಡ್ ರೈಲಿಗೆ ಆಗಸ್ಟ್ 31 ಶನಿವಾರದಂದು ಚಾಲನೆ ನೀಡಲಿದ್ದಾರೆ.
ವಂದೇ ಭಾರತ್ ಎಕ್ಸ್ಪ್ರೆಸ್ ಮಧುರೈ- ಬೆಂಗಳೂರು ಮಾರ್ಗದಲ್ಲಿ ದಿಂಡುಗಲ್, ತಿರುಚ್ಚಿರಾಪಳ್ಳಿ, ಕರೂರ್, ನಾಮಕ್ಕಲ್, ಸೇಲಂ, ಕೃಷ್ಣರಾಜಪುರಂ ಮತ್ತು ಬೆಂಗಳೂರು ಕಂಟೋನ್ಮೆಂಟ್ ಸೇರಿದಂತೆ ಹಲವಾರು ಪ್ರಮುಖ ನಿಲ್ದಾಣಗಳನ್ನು ಮಾಡುತ್ತದೆ. ಇದು ಮಧುರೈನಿಂದ ಬೆಳಿಗ್ಗೆ 5:15 ಕ್ಕೆ ಹೊರಡಲಿದ್ದು, ಮಧ್ಯಾಹ್ನ 1:00 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ಗೆ ಆಗಮಿಸಲಿದೆ. ಹಿಂದಿರುಗುವ ಪ್ರಯಾಣದಲ್ಲಿ ರೈಲು ಬೆಂಗಳೂರಿನ ಕಂಟೋನ್ಮೆಂಟ್ನಿಂದ ಮಧ್ಯಾಹ್ನ 1:30 ಕ್ಕೆ ಹೊರಟು ರಾತ್ರಿ 9:45 ಕ್ಕೆ ಮಧುರೈ ತಲುಪುತ್ತದೆ ಎಂದು ವರದಿ ತಿಳಿಸಿದೆ. ರೈಲು ತಿರುಚ್ಚಿರಾಪಳ್ಳಿ ಮತ್ತು ಸೇಲಂನಲ್ಲಿ ದೀರ್ಘವಾಗಿ ನಿಲ್ಲುತ್ತದೆ, ಅಲ್ಲಿ ಐದು ನಿಮಿಷಗಳ ಕಾಲ ನಿಲ್ಲುತ್ತದೆ.

ವಿವಿಧ ನಿಲ್ದಾಣಗಳಲ್ಲಿ ಆಗಮನದ ಸಮಯದೊಂದಿಗೆ ರೈಲಿನ ವೇಳಾಪಟ್ಟಿ ಇಲ್ಲಿದೆ:
ಮಧುರೈನಿಂದ ಬೆಂಗಳೂರಿಗೆ:
- 5:15 ಬೆಳಗ್ಗೆ: ಮಧುರೈ
- 5:59 ಬೆಳಗ್ಗೆ: ದಿಂಡಿಗಲ್
- 6:50 ಬೆಳಗ್ಗೆ: ತಿರುಚ್ಚಿರಾಪಳ್ಳಿ
- 8:08 ಬೆಳಗ್ಗೆ: ಕರೂರ್
- 8:32 ಬೆಳಗ್ಗೆ: ನಾಮಕ್ಕಲ್
- 9:15 ಬೆಳಗ್ಗೆ: ಸೇಲಂ
- 12:50 ಮಧ್ಯಾಹ್ನ: ಕೃಷ್ಣರಾಜಪುರಂ
- 1:00 ಮಧ್ಯಾಹ್ನ : ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತದೆ.
ಬೆಂಗಳೂರಿನಿಂದ ಮಧುರೈಗೆ:
- 1:30 ಮಧ್ಯಾಹ್ನ: ಬೆಂಗಳೂರು ಕಂಟೋನ್ಮೆಂಟ್
- 1:55 ಮಧ್ಯಾಹ್ನ: ಕೃಷ್ಣರಾಜಪುರಂ
- 4:50 ಮಧ್ಯಾಹ್ನ: ಸೇಲಂ
- 5:40 ಸಂಜೆ : ನಾಮಕ್ಕಲ್
- 6:00 ಸಂಜೆ : ಕರೂರ್
- 7:25 ಸಂಜೆ : ತಿರುಚ್ಚಿರಾಪಳ್ಳಿ
- 9:08 ರಾತ್ರಿ : ದಿಂಡಿಗಲ್
- 9:45 ರಾತ್ರಿ : ಮಧುರೈಗೆ ಬಂದು ಸೇರುತ್ತದೆ.
ರೈಲು ಪ್ರಯಾಣದ ದರಗಳು:
ಎರಡು ನಗರಗಳ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ನ ಟಿಕೆಟ್ ದರಗಳು ಚೇರ್ ಕಾರ್ಗಳಿಗೆ ₹ 1,200 ರಿಂದ ₹ 1,300 ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಸೀಟುಗಳಿಗೆ ₹ 1,800 ರಿಂದ ₹ 2,000 ರ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಹೊಸ ಸೇವೆಯು ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ದಕ್ಷಿಣ ಭಾರತದಲ್ಲಿ ಸಂಪರ್ಕವನ್ನು ಸುಧಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications