ದಕ್ಷಿಣ ಭಾರತದ ಪ್ರಮುಖ ಸಂಬಾರ ಪದಾರ್ಥಗಳ ಉತ್ಪಾದಕ ಈಸ್ಟರ್ನ್ ಕಾಂಡಿಮೆಂಟ್ಸ್ ನಲ್ಲಿ ಷೇರಿನ ಪಾಲು ಖರೀದಿ ಬಗ್ಗೆ ನಾರ್ವೆ ಮೂಲದ ಓರ್ಕ್ಲಾದಿಂದ ಘೋಷಣೆ ಮಾಡಲಾಗಿದೆ. ಕೇರಳ ಮೂಲದ ಈಸ್ಟರ್ನ್ ಕಾಂಡಿಮೆಂಟ್ಸ್ ಅನ್ನು 2000 ಕೋಟಿ ರುಪಾಯಿಗೆ ಮೌಲ್ಯಮಾಪನ ಮಾಡಲಾಗಿದೆ. ಓರ್ಕ್ಲಾ ಕಂಪೆನಿಯು 68% ಷೇರು ಖರೀದಿ ಮಾಡಲಿದೆ. ಅದು ಓರ್ಕ್ಲಾದ ಸಂಪೂರ್ಣ ಮಾಲೀಕತ್ವ ಹೊಂದಿರುವ MTR ಫುಡ್ಸ್ ಮೂಲಕ.
ಅಂದ ಹಾಗೆ 2007ರಲ್ಲಿ ಓರ್ಕ್ಲಾದಿಂದ MTR ಫುಡ್ಸ್ ಖರೀದಿ ಮಾಡಲಾಗಿದೆ. ಈಗಿನ ವ್ಯವಹಾರದ ಭಾಗವಾಗಿ ಎಂಟಿಆರ್ ನಿಂದ ಈಸ್ಟರ್ನ್ ಬ್ರ್ಯಾಂಡ್ ನಲ್ಲಿ 41.8% ಹಾಗೂ ಮೆಕ್ ಕಾರ್ಮಿಕ್ ಇಂಗ್ರೆಡಿಯೆಂಟ್ಸ್ ನಿಂದ ಈಸ್ಟರ್ನ್ ಕಾಂಡಿಮೆಂಟ್ಸ್ ನಲ್ಲಿ ಹೊಂದಿರುವ ಸಂಪೂರ್ಣ 26% ಷೇರು ಖರೀದಿ ಮಾಡಲಾಗುತ್ತದೆ.
ಭಾರತದ ಸ್ಪರ್ಧಾತ್ಮಕ ಆಯೋಗವು ಒಪ್ಪಿಗೆ ನೀಡಬೇಕು
ಮೊದಲ ಹಂತದ ನಂತರ ಈಸ್ಟರ್ನ್ ಕಾಂಡಿಮೆಂಟ್ಸ್ ವಿಲೀನಕ್ಕೆ ಎಂಟಿಆರ್ ನಿಂದ ಅರ್ಜಿ ಹಾಕಲಾಗುತ್ತದೆ. ಆ ನಂತರ ವಿಲೀನವಾದ ಸಂಸ್ಥೆಯನ್ನು ಓರ್ಕ್ಲಾ ಮತ್ತು ಈಸ್ಟರ್ನ್ ಕಾಂಡಿಮೆಂಟ್ಸ್ ಮಾಲೀಕರು ಫಿರೋಜ್ ಹಾಗೂ ನವಸ್ ಮೀರನ್ ಕ್ರಮವಾಗಿ 90.01%, 9.99% ಪಾಲಿನ ಮಾಲೀಕರರಾಗಿರುತ್ತಾರೆ. ಈ ವ್ಯವಹಾರಕ್ಕೆ ಭಾರತದ ಸ್ಪರ್ಧಾತ್ಮಕ ಆಯೋಗವು ಒಪ್ಪಿಗೆ ನೀಡಬೇಕಿದೆ. ಆ ನಂತರವೇ ಇದು ಅಂತಿಮವಾಗುತ್ತದೆ.
ಈಸ್ಟರ್ನ್ ಕಾಂಡಿಮೆಂಟ್ಸ್ 1983ರಲ್ಲಿ ಸ್ಥಾಪನೆ
ಈಸ್ಟರ್ನ್ ಕಾಂಡಿಮೆಂಟ್ಸ್ ಸ್ಥಾಪನೆಯಾದದ್ದು 1983ರಲ್ಲಿ. ಎಂ.ಇ. ಮೀರನ್ ಇದರ ಸ್ಥಾಪಕರು. 2020ರ ಜೂನ್ 30ಕ್ಕೆ ಕೊನೆಯಾದ ಅವಧಿಯ ಹಿಂದಿನ 12 ತಿಂಗಳಲ್ಲಿ ಈಸ್ಟರ್ನ್ ಕಾಂಡಿಮೆಂಟ್ಸ್ ವಹಿವಾಟು 900 ಕೋಟಿ ರುಪಾಯಿ ಇತ್ತು. ಕಂಪೆನಿಯ ಒಟ್ಟು ವಹಿವಾಟಿನಲ್ಲಿ ಅರ್ಧದಷ್ಟು ಕೇರಳದಿಂದಲೇ ಬಂದಿದೆ. ಇನ್ನರ್ಧ ಭಾರತದ ಉಳಿದ ಭಾಗ ಹಾಗೂ ರಫ್ತಿನ ಮೂಲಕ ಬಂದಿದೆ.
ಓಸ್ಲೋದಲ್ಲಿ ಮುಖ್ಯ ಕಚೇರಿ
ಈಸ್ಟರ್ನ್ ನಿಂದ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಸಂಬಾರ ಪದಾರ್ಥಗಳ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಇನ್ನು ಎಂಟಿಆರ್ ನಿಂದ ಶುದ್ಧ ಶಾಕಾಹಾರಿ ಸಂಬಾರ ಪದಾರ್ಥಗಳನ್ನು ಮಾತ್ರ ಮಾಡಲಾಗುತ್ತದೆ. ಇದೀಗ ಈಸ್ಟರ್ನ್ ಹಾಗೂ ಎಂಟಿಆರ್ ಎರಡೂ ಒಂದೇ ಕಂಪೆನಿ ಅಡಿಯಲ್ಲಿ ಬರುವುದರಿಂದ ಉತ್ಪನ್ನಗಳ ಪೋರ್ಟ್ ಫೋಲಿಯೋ ಹಾಗೂ ಭೌಗೋಳಿಕ ವೈವಿದ್ಯದಿಂದಲೂ ಸಾಮರ್ಥ್ಯ ಹೆಚ್ಚಾಗಲಿದೆ. ಓಸ್ಲೋದಲ್ಲಿ ಮುಖ್ಯ ಕಚೇರಿ ಇರುವ ಓರ್ಕ್ಲಾವು ಗ್ರಾಹಕ ವಸ್ತುಗಳ ಪೂರೈಕೆ ಮಾಡುವ ಪ್ರಮುಖ ಕಂಪೆನಿ. ನಾರ್ಡಿಕ್ಸ್, ಬಾಲ್ಟಿಕ್ಸ್ ಮತ್ತು ಕೇಂದ್ರ ಯುರೋಪ್ ಹಾಗೂ ಭಾರತದ ಆಯ್ದ ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನು ಪೂರೈಸುತ್ತದೆ.
More From GoodReturns

KOMUL Milk Price: ಕೋಲಾರ ರೈತರಿಗೆ ಯುಗಾದಿ ಗಿಫ್ಟ್; ಕೋಮುಲ್ ಹಾಲು ದರ 39.85 ರೂ.ಗೆ ಏರಿಕೆ

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Karnataka By Election: ಪಂಚ ರಾಜ್ಯ ಚುನಾವಣೆ ಜೊತೆ ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಉಪಚುನಾವಣೆ; ದಿನಾಂಕ ತಿಳಿಯಿರಿ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Ugadi Special Buses: ಯುಗಾದಿ ಹಬ್ಬಕ್ಕೆ ಊರಿಗೆ ಹೋಗೋರಿಗೆ ಗುಡ್ನ್ಯೂಸ್…KSRTC 2,000 ಹೆಚ್ಚುವರಿ ಬಸ್ಗಳ ವ್ಯವಸ್ಥೆ

Karnataka 2nd PUC: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಾಕ್…ಪಾಸಾಗಲು ಕೇವಲ 2 ವರ್ಷ ಮಾತ್ರ ಅವಕಾಶ

Karnataka Ration Card: ಪಡಿತರ ಚೀಟಿ ಪಡೆಯಲು ದೊಡ್ಡ ಬದಲಾವಣೆ.. ಆದಾಯ ಮಿತಿ 3 ಲಕ್ಷಕ್ಕೆ ಹೆಚ್ಚುವ ಸಾಧ್ಯತೆ

Indane cylinder: ಇಂಡೇನ್ ಸಿಲಿಂಡರ್ ಬುಕಿಂಗ್ ಈಗ ಸುಲಭ; ವಾಟ್ಸಾಪ್ ಮೂಲಕ ಬುಕ್ ಮಾಡೋದೇಗೆ ತಿಳಿಯಿರಿ

Karnataka Weather: ಅಯ್ಯೋ, ಎಂಥಾ ಬಿಸಿಲು? ಜನರೇ ಹೊರಹೋಗುವ ಮುನ್ನ ಎಚ್ಚರ

LPG-Bengaluru: ಎಲ್ಪಿಜಿ ಕೊರತೆ ಬೆನ್ನಲ್ಲೇ, ಬೆಂಗಳೂರಲ್ಲಿ ಸಿಲಿಂಡರನ್ನೇ ಕಳ್ಳತನ ಮಾಡಿದ ಖದೀಮ! ವಿಡಿಯೋ ವೈರಲ್

Bengaluru Traffic: ಬೆಂಗಳೂರಿಗರೇ ಇಲ್ಲಿ ಗಮನಿಸಿ; ಇಂದು ಇಲ್ಲೆಲ್ಲಾ ಸಂಚಾರ ಬಂದ್!



Click it and Unblock the Notifications