ಪೇಟಿಎಂನ ಮಾತೃಸಂಸ್ಥೆಯಾದ One 97 ಕಮ್ಯುನಿಕೇಷನ್ಸ್ 2019- 20ನೇ ಸಾಲಿಗೆ ನಷ್ಟವನ್ನು 28% ಕಡಿತ ಮಾಡಿಕೊಂಡು, 2833 ಕೋಟಿ ರುಪಾಯಿ ತಲುಪಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ನೋಯ್ಡಾ ಮೂಲದ One 97 ಕಮ್ಯುನಿಕೇಷನ್ಸ್ ವೆಚ್ಚ 20% ಕಡಿಮೆಯಾಗಿ, 5,861 ಕೋಟಿ ರುಪಾಯಿಯನ್ನು ಮುಟ್ಟಿದೆ. FY19ರಲ್ಲಿ 7,254 ಕೋಟಿ ರುಪಾಯಿ ವೆಚ್ಚವಾಗಿತ್ತು ಎಂಬ ಮಾಹಿತಿ ನೀಡಲಾಗಿದೆ.
ಇನ್ನು ಇದೇ ವೇಳೆ ಕಂಪೆನಿಯ ಆದಾಯದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಆಗಿದೆ. ಅಂದರೆ, 1% ಕುಸಿದು, 3350 ಕೋಟಿ ರುಪಾಯಿಯನ್ನು ಮುಟ್ಟಿದೆ. 2019- 20ರ ಹಣಕಾಸು ವರ್ಷದಲ್ಲಿ ಕಾರ್ಯ ನಿರ್ವಹಣ್ ಮೂಲಕ 3115 ಕೋಟಿ ರು. ಆದಾಯ ಬಂದಿದ್ದರೆ, FY19ರಲ್ಲಿ 3049 ಕೋಟಿ ರು. ಬಂದಿತ್ತು. 2019- 20ರಲ್ಲಿ ಬಹುತೇಕ ವೆಚ್ಚಗಳನ್ನು "ಇತರ ಖರ್ಚುಗಳು" ಎಂಬ ವಿಭಾಗದಲ್ಲಿ ಸೇರಿಸಿದ್ದು, ಅದು ಒಟ್ಟು ರು. 5861 ಕೋಟಿ ರು. ವರದಿ ಆಗಿದೆ.
ಸತತ ಏಳನೇ ಹಣಕಾಸು ವರ್ಷ ನಷ್ಟ
One 97 ಕಮ್ಯುನಿಕೇಷನ್ಸ್ ಸತತ ಏಳನೇ ಹಣಕಾಸು ವರ್ಷ ನಷ್ಟ ಕಾಣುತ್ತಿದೆ. FY22ರ ಹೊತ್ತಿಗೆ ಕಂಪೆನಿ ಲಾಭದಾಯಕ ಆಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಲಾಗಿದೆ. ಸಾಲ ವಿತರಣೆ, ಇನ್ಷೂರೆನ್ಸ್, ವೆಲ್ತ್ ಮ್ಯಾನೇಜ್ ಮೆಂಟ್, ವಾಣಿಜ್ಯ ಮತ್ತು ಗೇಮಿಂಗ್ ಸೇರಿ ಇತರ ಹಣಕಾಸು ಸೇವೆಗಳನ್ನು ಆರಂಭಿಸಲಿರುವ ಹಿನ್ನೆಲೆಯಲ್ಲಿ ಕಂಪೆನಿಗೆ ಲಾಭ ಆಗಬಹುದು ಎಂಬ ನಿರೀಕ್ಷೆಯಿದೆ.
ಇತರ ಪ್ಲಾಟ್ ಫಾರ್ಮ್ ಗಳ ಜತೆ ಪೇಟಿಎಂ ಸ್ಪರ್ಧೆ
ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ (UPI) ಮತ್ತು ಇ ವ್ಯಾಲೆಟ್ ನಲ್ಲಿ ಪೇಟಿಎಂನೊಂದಿಗೆ ಗೂಗಲ್ ಪೇ, ವಾಲ್ ಮಾರ್ಟ್ ನವರ ಫೋನ್ ಪೇ, ಮೊಬಿಕ್ವಿಕ್, ಭಾರತ್ ಪೇ ಮತ್ತು ಅಮೆಜಾನ್ ಪೇ ಸ್ಪರ್ಧಿಸುತ್ತಿವೆ. ಪೇಟಿಎಂಗೆ 1.7 ಕೋಟಿಗೂ ಹೆಚ್ಚು ವರ್ತಕರು ಹಾಗೂ ಸಕ್ರಿಯ ಸಣ್ಣ ಉದ್ಯಮಿಗಳು ಅದರ ಪ್ಲಾಟ್ ಫಾರ್ಮ್ ನಲ್ಲಿ ಇದ್ದಾರೆ.
ಗಣನೀಯವಾಗಿ ವೆಚ್ಚ ಇಳಿಕೆ
FY20ರ ಸೆಪ್ಟೆಂಬರ್ ತ್ರೈಮಾಸಿಕವೊಂದರಲ್ಲೇ ಪೇಟಿಎಂ ನಷ್ಟವು 37% ಇಳಿಕೆಯಾಗಿ, 2597 ಕೋಟಿ ರುಪಾಯಿ ಮುಟ್ಟಿದೆ ಎಂದು ವರದಿ ಆಗಿತ್ತು. ವೆಚ್ಚವನ್ನು ಗಣನೀಯವಾಗಿ ಇಳಿಕೆ ಮಾಡಿದ್ದು, FY22ರ ಹೊತ್ತಿಗೆ ಕಂಪೆನಿಯು ಲಾಭದಾಯಕವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications