ವಿಮಾನಗಳಿಗೆ ಬಳಸುತ್ತಾರಲ್ಲ ಆ ತೈಲ ವಿಪರೀತ ದುಬಾರಿ. ಆದರೆ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದರವು ಅಗ್ಗವಾಗಿದೆ. ಸಾಮಾನ್ಯವಾಗಿ ಸೀಮೆ ಎಣ್ಣೆಯನ್ನು ಪರಿಷ್ಕರಣೆ ಮಾಡಿದ ಮೇಲೆ ವಿಮಾನ ತೈಲವಾಗುತ್ತದೆ. ಅದನ್ನೇ ಮತ್ತಷ್ಟು ಕಡಿಮೆ ಪ್ರಮಾಣದ ಸಲ್ಫರ್ ತೈಲವಾಗಿ ಹಡಗುಗಳಿಗೆ ಬಳಸಲಾಗುತ್ತದೆ. ಅಂದಹಾಗೆ ವಿಮಾನ ಯಾನಕ್ಕೆ ತೈಲ ಬಳಕೆ ತುಂಬ ಕಡಿಮೆ ಆಗುತ್ತಿರುವ ಸಂದರ್ಭ ಇದು.
ಸಾಮಾನ್ಯವಾಗಿ ಬಳಸುವುದಕ್ಕಿಂತ ಹೆಚ್ಚಿನ ಡೀಸೆಲ್ ಹಾಗೂ ವ್ಯಾಕ್ಯೂಮ್ ಗ್ಯಾಸ್ ಆಯಿಲ್ ಕೂಡ ಹಡಗುಗಳಿಗೆ ಬಳಸಲಾಗುತ್ತದೆ. ಕೇವಲ ಒಂದು ವರ್ಷದ ಹಿಂದೆ ಈ ಬದಲಾವಣೆಯನ್ನು ಯೋಚಿಸುವುದಕ್ಕೆ ಕೂಡ ಸಾಧ್ಯವಾಗುತ್ತಿರಲಿಲ್ಲ. ಆದರೆ ಕೊರೊನಾ ಬಿಕ್ಕಟ್ಟಿನಿಂದ ವಿಮಾನ ಯಾನಕ್ಕೆ ಪೆಟ್ಟು ಬಿತ್ತು. ಇನ್ನು ಅಂತರರಾಷ್ಟ್ರೀಯ ವಿಮಾನ ಯಾನ ಒಕ್ಕೂಟ, ಇನ್ನು ನಾಲ್ಕು ವರ್ಷಗಳ ಕಾಲ ವಿಮಾನ ಯಾನ ವ್ಯವಹಾರ ಕೊರೊನಾದ ಹಿಂದಿನ ಸ್ಥಿತಿಗೆ ಮರಳುವುದು ಕಷ್ಟ ಎನ್ನುತ್ತಿದೆ.
ಬೆಲೆಯ ದೃಷ್ಟಿಯಿಂದ ಇದು ದುಬಾರಿ ಆಗಬಹುದು ಎಂಬ ಕಾರಣಕ್ಕೆ ಪ್ರೀಮಿಯಂನಿಂದ VLSFO (very-low sulfur fuel oil)ಗೆ ತರಲು ವಿಮಾನ ತೈಲದ ಕಾಂಪೊನೆಂಟ್ ಗಳನ್ನು ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸಿಂಗಪೂರದಲ್ಲಿ ಬೆರೆಸಲಾಗಿದೆ ಎಂದು ತಜ್ಞರು ಹೇಳಿದ್ದಾರೆ. ಯಾವಾಗ ವಿಮಾನದ ತೈಲವು ಅಗ್ಗವಾಯಿತೋ ಆಗ ಮತ್ತೆ ಆ ಬದಲಾವಣೆ ವೇಗ ಪಡೆಯಿತು ಎನ್ನುತ್ತಾರೆ.

ಆರ್ಥಿಕತೆಯು ಸಂಪೂರ್ಣ ಛಿಧ್ರವಾದ ಸ್ಥಿತಿಯಲ್ಲಿದ್ದಾಗ ನಾವು ಸಾಮಾನ್ಯವಾಗಿ ಹೆಚ್ಚು ದುಬಾರಿ ಪದಾರ್ಥಗಳನ್ನು ಒಗ್ಗೂಡಿಸಿ VLSFO ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಜನವರಿಯಲ್ಲಿ ಸಿಂಗಪೂರದಲ್ಲಿ ವಿಮಾನ ತೈಲ ದರವು $ 70 ಇದ್ದದ್ದು, ಮೇ ಆರಂಭದ ಹೊತ್ತಿಗೆ $ 20 ತಲುಪಿ, ಆ ನಂತರ $ 41ಗೆ ಚೇತರಿಕೆ ಕಂಡಿತು.
ಕಳೆದ ವರ್ಷಕ್ಕೆ ಹೋಲಿಸಿದಲ್ಲಿ VLSFO ದರವು 54% ಕಡಿಮೆ ದರ ಇದೆ. ವಿಮಾನ ಹಾಗೂ ರಸ್ತೆ ಸಾರಿಗೆ ತೈಲಕ್ಕೆ ಬೇಡಿಕೆ ಕಡಿಮೆ ಆಗಿದ್ದು, ಹಡಗು ತೈಲದ ಪದಾರ್ಥಗಳು ದೊರೆಯುವುದಕ್ಕೆ ಕಾರಣವಾಗಿದೆ ಎಂದು ಅಂತರರಾಷ್ಟ್ರೀಯ ಬಂಕರ್ ಇಂಡಸ್ಟ್ರಿ ಅಸೋಸಿಯೇಷನ್ ನಿರ್ದೇಶಕ ಉನ್ನಿ ಐನೆಮೊ ಹೇಳಿದ್ದಾರೆ.
ವಿಮಾನ ತೈಲ ದರವು ಕಡಿಮೆ ಆಗಿರುವುದರಿಂದ ಹಡಗು ಉದ್ಯಮಕ್ಕೆ ಬೇಕಾದ ತೈಲ ದರ ತಗ್ಗಲು ಕಾರಣವಾಗಿದೆ. ಆದರೆ ಆ ಸಮಿಶ್ರಣವು ಸಮಸ್ಯೆಗೆ ಕಾರಣವಾಗುತ್ತದೆ. ಟ್ರೇಡಿಂಗ್ ಹೌಸ್ ಗಳು ಮತ್ತು ರೀಫೈನರ್ ಗಳು ವಿವಿಧ ಬಗೆಯ ತೈಲಗಳನ್ನು ಖರೀದಿಸಿ, ಎರಡು ವಿಭಿನ್ನ ತೈಲಗಳನ್ನು ಮಿಶ್ರಣಕ್ಕಾಗಿ ಡಿಸ್ಟಿಲರಿಗಳಿ ಕಳುಹಿಸಿ, ಹಡಗುಗಳಿಗೆ ಬಳಸಲಾಗುತ್ತದೆ. ಇನ್ನು ನೇರವಾಗಿ ಸೀಮೆ ಎಣ್ಣೆ ಬಳಸಿದಲ್ಲಿ ಅಗ್ನಿ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!



Click it and Unblock the Notifications