ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ) ಕಾರ್ಯಗತಗೊಳಿಸಲಾಗುತ್ತಿದೆ. 148 ಕಿ. ಮೀ. ಉದ್ದದ ಈ ಯೋಜನೆಯು 4 ಕಾರಿಡಾರ್ಗಳನ್ನು ಒಳಗೊಂಡಿದೆ. ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ರಾಜ್ಯ ಸರ್ಕಾರ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಈ ಬೆಂಗಳೂರು ಉಪನಗರ ರೈಲು ಯೋಜನೆಯು ಮಹತ್ವದ ಯೋಜನೆಗೆ ಸಿದ್ಧವಾಗಿದೆ. 2 ನೇ ಹಂತದ ಅಡಿಯಲ್ಲಿ 146 ಕಿಮೀ ವಿಸ್ತರಣೆಯನ್ನು ವಿಸ್ತರಿಸಲು ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ಹೌದು, ಉಪ ನಗರದ 2 ನೇ ಹಂತದ ಅಡಿಯಲ್ಲಿ 146 ಕಿಮೀ ವಿಸ್ತರಣೆಯ ಯೋಜನೆಗಳು ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತಿದೆ . ಸುತ್ತಲಿನ ಪ್ರಸ್ತಾವಿತ ವೃತ್ತಾಕಾರದ ರೈಲು ಜಾಲದೊಂದಿಗೆ ಸಂಪರ್ಕಿಸುತ್ತಿದೆ. ಉಪನಗರ ರೈಲು ವ್ಯವಸ್ಥೆಯ ಅನುಷ್ಠಾನ ಸಂಸ್ಥೆಯಾದ ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ (ಕೆ-ರೈಡ್) ಪ್ರಸ್ತಾವಿತ ವಿಸ್ತರಣೆಗಳನ್ನು ವಿವರಿಸಿದೆ.

ಉಪ ನಗರದ 2 ನೇ ಹಂತ ಹೊಸ ನೆಟ್ವರ್ಕ್ ರೈಲುಗಳು ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ (18 ಕಿಮೀ), ಚಿಕ್ಕಬಾಣಾವರದಿಂದ ಕುಣಿಗಲ್ (50 ಕಿಮೀ), ಚಿಕ್ಕಬಾಣಾವರದಿಂದ ದಾಬಸ್ಪೇಟೆ (36 ಕಿಮೀ), ಕೆಂಗೇರಿಯಿಂದ ಹೆಜ್ಜಾಲ (11 ಕಿಮೀ), ಹೀಲಲಿಗೆಯಿಂದ ಆನೇಕಲ್ ರಸ್ತೆ (11 ಕಿಮೀ), ಮತ್ತು ರಾಜಾನುಕುಂಟೆಯಿಂದ ಓಡೇರಹಳ್ಳಿಗೆ (20 ಕಿ.ಮೀ)ರವರಿಗೆ ಸಂಪರ್ಕವನ್ನು ತಲುಪಲಿದೆ.
ಮಾಹಿತಿಯ ಪ್ರಕಾರ ಉಪನಗರ ರೈಲು ಯೋಜನೆಯ 1 ನೇ ಹಂತವು ಈಗಾಗಲೇ ಪ್ರಗತಿಯಲ್ಲಿ ಇದೆ. ಒಟ್ಟು 148 ಕಿಮೀ ಉದ್ದದ ನಾಲ್ಕು ಕಾರಿಡಾರ್ಗಳನ್ನು ಒಳಗೊಂಡಿದೆ. ಇವುಗಳಲ್ಲಿ 41.4 ಕಿಮೀ ಸಂಪಿಗೆ ಲೈನ್, ಬೆಂಗಳೂರು ನಗರವನ್ನು ವಿಮಾನ ನಿಲ್ದಾಣ ಮತ್ತು ದೇವನಹಳ್ಳಿಗೆ ಸಂಪರ್ಕಿಸುತ್ತದೆ.
ಬೆನ್ನಿಗಾನಹಳ್ಳಿ ಮತ್ತು ಚಿಕ್ಕಬಾಣಾವರ ನಡುವಿನ 25 ಕಿಮೀ ಮಲ್ಲಿಗೆ ಮಾರ್ಗ ಕೆಂಗೇರಿಯಿಂದ ವೈಟ್ಫೀಲ್ಡ್ಗೆ ಸಂಪರ್ಕಿಸುವ 35.5 ಕಿಮೀರವರೆಗೆ ಇದೆ. ಇನ್ನೂ ಪಾರಿಜಾತ ಮಾರ್ಗದಲ್ಲಿ ಹೀಲಲಿಗೆಯಿಂದ ರಾಜಾನುಕುಂಟೆವರೆಗಿನ 46.25 ಕಿ.ಮೀ ಸಂಪರ್ಕದ ಮಾರ್ಗವನ್ನು ತಲುಪಲಿದೆ.
ಕೇಂದ್ರ ರೈಲ್ವೆ ಸಚಿವಾಲಯವು ಬೆಂಗಳೂರಿಗೆ 287 ಕಿಮೀ ವೃತ್ತಾಕಾರದ ರೈಲು ಜಾಲವನ್ನು ಪ್ರಸ್ತಾಪಿಸಿದೆ. ಈ ಹೊಸ ರೈಲು ವ್ಯವಸ್ಥೆಯು ನಿಡವಂಡ, ದೊಡ್ಡಬಳ್ಳಾಪುರ, ದೇವನಹಳ್ಳಿ, ಮಾಲೂರು, ಹೀಲಲಿಗೆ, ಹೆಜ್ಜಾಲ, ಮತ್ತು ಸೋಲೂರು ಸೇರಿದಂತೆ ಪ್ರಮುಖ ಹಬ್ಗಳನ್ನು ಹಲವಾರು ಪ್ರಮುಖ ಮಾರ್ಗಗಳ ಮೂಲಕ ಸಂಪರ್ಕಿಸುವ ನಿರೀಕ್ಷೆ ಇದೆ. ಇನ್ನೂ ವೃತ್ತಾಕಾರದ ರೈಲು ಜಾಲಕ್ಕಾಗಿ ವಿವರವಾದ ಯೋಜನಾ ವರದಿ (ಡಿಪಿಆರ್) ಪ್ರಸ್ತುತ ಸಿದ್ಧ ಹಂತದಲ್ಲಿದೆ.
K-RIDE ಪ್ರತಿನಿಧಿಯೊಬ್ಬರು ಉಪನಗರ ರೈಲು ವಿಸ್ತರಣೆಯನ್ನು ವೃತ್ತಾಕಾರದ ನೆಟ್ವರ್ಕ್ನೊಂದಿಗೆ ಸಂಯೋಜಿಸಲು ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸಲು ಕೇಂದ್ರ ರೈಲ್ವೆ ಸಚಿವಾಲಯದಿಂದ ಅನುಮೋದನೆ ಕೋರಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಉಪನಗರ ರೈಲು ವಿಸ್ತರಣೆಯನ್ನು ಹಿಂದಿನ ಪ್ರಸ್ತಾವನೆಗಳಲ್ಲಿ, K-RIDE ಹತ್ತಿರದ ನಗರಗಳು ಮತ್ತು ಮೈಸೂರು, ತುಮಕೂರು, ಹೊಸೂರು ಮತ್ತು ಕೋಲಾರದಂತಹ ಪಟ್ಟಣಗಳೊಂದಿಗೆ ಬೆಂಗಳೂರನ್ನು ಸಂಪರ್ಕಿಸಲು ಉಪನಗರ ರೈಲು ವ್ಯವಸ್ಥೆಯನ್ನು 452 ಕಿಮೀ ವಿಸ್ತರಿಸಲು ಸೂಚಿಸಲಾಗಿತು.ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು 2023 ರಲ್ಲಿ ನೈಋತ್ಯ ರೈಲ್ವೆಯು ಹೊಸ ಸಮೀಕ್ಷೆಗಳಿಗೆ ವಲಯ ರೈಲ್ವೆ ಅನುಮೋದನೆಯ ಅಗತ್ಯವಿರುವ ಕಾರ್ಯವಿಧಾನದ ನಿರ್ಬಂಧಗಳಿಂದ ನಿರಾಕರಿತು.
More From GoodReturns

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!



Click it and Unblock the Notifications