ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿ ಇರುವ ಯು.ಬಿ. ಸಿಟಿ ಟವರ್ಸ್ ನಿಂದ ಬಾಡಿಗೆ ಕಚೇರಿಯನ್ನು ಖಾಲಿ ಮಾಡಿಕೊಂಡು, ಸದ್ದಿಲ್ಲದೆ ಹೊರಬಂದಿದ್ದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್, ಇದೀಗ ತನ್ನ ಮಾರ್ಕೆಟಿಂಗ್ ತಂಡವನ್ನು ಪ್ರಮುಖ ಮೆಟ್ರೋ ನಗರಗಳಲ್ಲಿ ಕಡಿಮೆ ಬಾಡಿಗೆ ಕಚೇರಿಗೆ ಸ್ಥಳಾಂತರ ಮಾಡುತ್ತಿದೆ.
ವಾಹನಗಳ ಮಾರಾಟವೇ ಕುಸಿದಿರುವುದರಿಂದ ಬಾಡಿಗೆ ಮತ್ತೊಂದಕ್ಕೆ ಹೆಚ್ಚಿನ ವೆಚ್ಚ ಮಾಡುವುದು ಬೇಡ ಎಂದು ಕಂಪೆನಿ ತೀರ್ಮಾನಿಸಿದೆ. ಕೊರೊನಾ ನಂತರವಂತೂ ಪರಿಸ್ಥಿತಿ ಮತ್ತೂ ಗಂಭೀರವಾಗಿದೆ. "ಈ ವರ್ಷ ಬಾಡಿಗೆ ಖರ್ಚಿನಲ್ಲಿ ಕಂಪೆನಿಗೆ ಕೆಲವು ಕೋಟಿ ರುಪಾಯಿ ಉಳಿಸುವುದು ನಮ್ಮ ಉದ್ದೇಶ" ಎಂದು ಟೊಯೊಟಾ ಮೋಟಾರ್ಸ್ ಉಪಾಧ್ಯಕ್ಷ ಶೇಖರ್ ವಿಶ್ವನಾಥನ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಫೀಲ್ಡ್ ನಲ್ಲಿ ಕೆಲಸ ಮಾಡಲು ನೇಮಕ
ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿನ ದುಬಾರಿ ಬಾಡಿಗೆಯ ಕಚೇರಿಗಳನ್ನು ಖಾಲಿ ಮಾಡಿ, ಸಣ್ಣ ಕಚೇರಿಗಳಿಗೆ ಮಾರ್ಕೆಟಿಂಗ್ ತಂಡವನ್ನು ಸ್ಥಳಾಂತರ ಮಾಡಲಾಗುತ್ತದೆ. ಆ ಮೂಲಕ ವೆಚ್ಚ ಕಡಿತ ಮಾಡಲಾಗುತ್ತದೆ. ಇದರ ಜತೆಗೆ ಫೀಲ್ಡ್ ನಲ್ಲಿ ಹೆಚ್ಚು ಕೆಲಸ ಮಾಡುವುದಕ್ಕೆ ನೇಮಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
14 ವರ್ಷಗಳ ಹಿಂದೆ ಯುಬಿ ಸಿಟಿಯಲ್ಲಿ ಬಾಡಿಗೆಗೆ
6200 ಉದ್ಯೋಗಿಗಳಿರುವ ಕಂಪೆನಿಯು 14 ವರ್ಷಗಳ ಹಿಂದೆ ಯುಬಿ ಸಿಟಿಯಲ್ಲಿ ಬಾಡಿಗೆಗೆ ಕಟ್ಟಡ ಪಡೆದಿತ್ತು. ಎರಡು ಅಂತಸ್ತಿನ ತಲಾ 25 ಸಾವಿರ ಚದರಡಿಯ ಜಾಗ ಬಾಡಿಗೆಗೆ ಪಡೆಯಲಾಗಿತ್ತು. ಆದರೆ ಕೆಲ ವರ್ಷದ ಹಿಂದೆ ಒಂದು ಅಂತಸ್ತು ಖಾಲಿ ಮಾಡಿತ್ತು. ಇನ್ನು ಮುಂದೆ ಕೊರೊನಾ ಲಾಕ್ ಡೌನ್ ನಿರ್ಬಂಧ ಸಡಿಲವಾದ ಮೇಲೆ ಬಿಡದಿ ಕೈಗಾರಿಕೆ ಪ್ರದೇಶದಲ್ಲೇ ಎಚ್ ಆರ್, ಫೈನಾನ್ಸ್, ಕಾನೂನು ವಿಭಾಗ ಸೇರಿ ಕಾರ್ಪೊರೇಟ್ ತಂಡ ಕೆಲಸ ಮಾಡಲಿದೆ.
ಸರ್ಕಾರದ ತೆರಿಗೆ ನೀತಿಯಿಂದ ಸಂಕಷ್ಟ
ಸರ್ಕಾರ ವಿಧಿಸಿದ ಗಡುವಿಗೂ ಮುಂಚೆಯೇ ಬಿಎಸ್ 6 ವಾಹನಗಳ ಉತ್ಪಾದನೆ ಆರಂಭಿಸಿದ ಕಂಪೆನಿ ಟೊಯೊಟಾ ಕಿರ್ಲೋಸ್ಕರ್. ಆದರೆ ಹೈಬ್ರಿಡ್ ಕಾರುಗಳ ಮೇಲೆ ಜಿಎಸ್ ಟಿ ಹಾಗೂ ಸೆಸ್ ಸೇರಿ 43 ಪರ್ಸೆಂಟ್ ಹಾಕಲು ಶುರು ಮಾಡಿದ ಮೇಲೆ ಕ್ಯಾಮ್ರಿ ಕಾರಿನ ಮಾರಾಟಕ್ಕೆ ಹೊಡೆತ ಬಿತ್ತು. ಆ ಕಾರಣಕ್ಕೆ ಇತರ ಹೈಬ್ರಿಡ್ ಮಾಡೆಲ್ ಗಳನ್ನು ಸಹ ಅಮಾನತು ಮಾಡಲಾಯಿತು.
ಮೂರು ತಿಂಗಳ ಹಿಂದೆ ತೆಗೆದುಕೊಂಡ ನಿರ್ಧಾರ
ಕೊರೊನಾಗೂ ಮುಂಚೆಯೇ ಯು.ಬಿ. ಸಿಟಿ ಕಚೇರಿ ಖಾಲಿ ಮಾಡುವುದಕ್ಕೆ ನಿರ್ಧಾರ ಮಾಡಿದ್ದೆವು. ನಮ್ಮ ಕಾರ್ಪೊರೇಟ್ ಕಚೇರಿಯನ್ನು ಬಿಡದಿಗೆ ಸ್ಥಳಾಂತರ ಮಾಡುವುದಕ್ಕೆ ಮೂರು ತಿಂಗಳು ಸಮಯ ಹಿಡಿಯಿತು. ನಮ್ಮ ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರಿನ ಮಾರ್ಕೆಟಿಂಗ್ ತಂಡಗಳು ಸಣ್ಣ ಕಚೇರಿಗೆ, ಒಟ್ಟಾಗಿ ಕೆಲಸ ಮಾಡುವಂಥ ಸ್ಥಳಗಳಿಗೆ ಶೀಘ್ರವೇ ಬದಲಾಗಲಿದ್ದಾರೆ ಎಂದು ಶೇಖರ್ ವಿಶ್ವನಾಥನ್ ತಿಳಿಸಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications