ವಾಹನ ಉದ್ಯಮದಿಂದ ಕೇಳಿಬರುತ್ತಿದ್ದ ಬಹುಕಾಲದ ಬೇಡಿಕೆ ಈಡೇರಿಸುವ ಸಾಧ್ಯತೆ ಬಗ್ಗೆ ಜಿಎಸ್ ಟಿ ಸಮಿತಿಯು ಆಲೋಚಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ. ದ್ವಿಚಕ್ರ ವಾಹನಗಳ ಮೇಲೆ ಜಿಎಸ್ ಟಿ ದರ ಕಡಿಮೆ ಮಾಡಬೇಕು ಎಂಬುದು ಆ ಉದ್ಯಮದ ಬೇಡಿಕೆ ಆಗಿದೆ. ಸದ್ಯಕ್ಕೆ 28% ಸ್ಲ್ಯಾಬ್ ನಲ್ಲಿ ತೆರಿಗೆ ಹಾಕಲಾಗುತ್ತಿದೆ.
ಕಾನ್ಫಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಸದಸ್ಯರ ಜತೆಗೆ ಸಂವಾದ ನಡೆಸುವ ವೇಳೆ ನಿರ್ಮಲಾ ಈ ಮಾತನ್ನು ಹೇಳಿದ್ದಾರೆ. ದ್ವಿಚಕ್ರ ವಾಹನ ವಿಲಾಸಿಯೂ ಅಲ್ಲ, ಪಾಪದ ಉತ್ಪನ್ನವೂ (ಸಿಗರೇಟ್, ಮದ್ಯ ಮುಂತಾದವನ್ನು ಸಿನ್ ಪ್ರಾಡಕ್ಟ್ ಎನ್ನಲಾಗುತ್ತದೆ) ಅಲ್ಲ. ಆದ್ದರಿಂದ ದರ ಪರಿಷ್ಕರಣೆಗೆ ಅವಕಾಶ ಇದೆ. ಇದನ್ನು ಜಿಎಸ್ ಟಿ ಸಮಿತಿ ಮುಂದೆ ಇಡಲಾಗುವುದು ಎಂದು ಕೇಂದ್ರ ಸಚಿವೆ ತಿಳಿಸಿರುವುದಾಗಿ ಸಿಐಐ ಮಾಹಿತಿ ನೀಡಿದೆ.
ಸೆಪ್ಟೆಂಬರ್ 17ನೇ ತಾರೀಕು ಜಿಎಸ್ ಟಿ ಸಭೆ
ಜಿಎಸ್ ಟಿ ಸಮಿತಿಯು ಗುರುವಾರ (ಆಗಸ್ಟ್ 27, 2020) ಸಭೆ ಸೇರಲಿದೆ. ರಾಜ್ಯಗಳ ಪರಿಹಾರದ ಬಗ್ಗೆ ಚರ್ಚಿಸುವುದು ಈ ಸಭೆಯ ಒಂದಂಶದ ಕಾರ್ಯ ಸೂಚಿ ಆಗಿದೆ. ಮೂಲಗಳು ತಿಳಿಸುವ ಪ್ರಕಾರ, ಸೆಪ್ಟೆಂಬರ್ 17ನೇ ತಾರೀಕು ನಡೆಯುವ ಸಭೆಯಲ್ಲಿ ದ್ವಿಚಕ್ರ ವಾಹನದ ವಿಚಾರ ಕೈಗೆತ್ತಿಕೊಳ್ಳಲಾಗುವುದು. ಹಬ್ಬದ ಸೀಸನ್ ನಲ್ಲಿ ಮಾರಾಟ ಹೆಚ್ಚಳಕ್ಕೆ ಅನುಕೂಲ ಆಗುವಂತೆ ಜಿಎಸ್ ಟಿ ದರದ ಸಮಸ್ಯೆ ನಿವಾರಿಸಲಾಗುವುದು.
ಹಂತ ಹಂತವಾಗಿ ತೆರಿಗೆ ಕಡಿಮೆ ಮಾಡುವಂತೆ ಬೇಡಿಕೆ
ಆಟೋಮೊಬೈಲ್ ಗಳ ಮೇಲಿನ ಜಿಎಸ್ ಟಿ ದರವನ್ನು ಹಂತಹಂತವಾಗಿ ಕಡಿಮೆ ಮಾಡುವಂತೆ ಪ್ರಯಾಣಿಕರ ವಾಹನಗಳ ಉದ್ಯಮದಿಂದ ಬೇಡಿಕೆ ಬಂದಿದೆ. ಮೊದಲ ಹಂತದಲ್ಲಿ ದ್ವಿಚಕ್ರ ವಾಹನಗಳ ಮೇಲೆ ದರ ಕಡಿತ ಮಾಡುವಂತೆ ಕೇಳಲಾಗಿದೆ. ನಂತರದ ಹಂತದಲ್ಲಿ ಕಾರು ಮುಂತಾದವುಗಳ ಮೇಲಿನ ತೆರಿಗೆ ಮುಂದೂಡುವಂತೆ ಕೇಳಿಕೊಳ್ಳಲಾಗಿದೆ.
ಎರಡು ಕೋಟಿಯಷ್ಟು ಜನರಿಗೆ ಅನುಕೂಲ
ಈ ನಿರ್ಧಾರಗಳಿಂದ ಸರ್ಕಾರಕ್ಕೆ ಆಗುತ್ತಿರುವ ಆದಾಯ ನಷ್ಟವನ್ನು ತಡೆಯಬಹುದು. ಅದೇ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳನ್ನು ಖರೀದಿ ಮಾಡಬೇಕು ಎಂದಿರುವ ಅಂದಾಜು ಎರಡು ಕೋಟಿಯಷ್ಟು ಜನರಿಗೂ ಅನುಕೂಲ ಆಗುತ್ತದೆ ಎಂದು ಮನವರಿಕೆ ಮಾಡಿಕೊಡಲಾಗಿದೆ. ಈ ಮಧ್ಯೆ ಎಂಎಸ್ ಎಂಇಗೆ ಸಾಲ ಒದಗಿಸಲು ಘೋಷಿಸಿದ್ದ ಮೂರು ಲಕ್ಷ ಕೋಟಿ ರುಪಾಯಿ ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ಅನ್ನು ಇನ್ನಷ್ಟು ವಿಸ್ತರಿಸಲು ಸರ್ಕಾರ ಆಲೋಚಿಸುತ್ತಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications