ಅನಿವಾಸಿ ಭಾರತೀಯರು (ಎನ್ ಆರ್ ಐ) ಏರ್ ಇಂಡಿಯಾದ ಶೇಕಡಾ ನೂರರಷ್ಟು ಪಾಲನ್ನು ಖರೀದಿ ಮಾಡಬಹುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ಘೋಷಣೆ ಮಾಡಿದರು.
"ಎಫ್ ಡಿಐ (ವಿದೇಶ ನೇರ ಬಂಡವಾಳ) ನೀತಿಯಲ್ಲಿ ತಿದ್ದುಪಡಿ ತಂದಿದ್ದು, ಭಾರತೀಯ ಮೂಲದ ಅನಿವಾಸಿ ಭಾರತೀಯರು ಏರ್ ಇಂಡಿಯಾದ ಶೇಕಡಾ 100ರಷ್ಟು ಪಾಲನ್ನು ಖರೀದಿ ಮಾಡಬಹುದು. ಈ ಹಿಂದೆ ಎನ್ ಆರ್ ಐಗಳಾದವರಿಗೆ ಏರ್ ಇಂಡಿಯಾದಲ್ಲಿ ಷೇರು ಖರೀದಿ ಮಾಡುವುದಕ್ಕೆ ಸಾಧ್ಯವಿದ್ದದ್ದು ಶೇಕಡಾ 49ರಷ್ಟು ಮಾತ್ರ. ಆದರೆ ಈಗ 100 ಪರ್ಸೆಂಟ್ ಖರೀದಿಸಬಹುದು" ಎಂದು ಸಂಪುಟ ಸಭೆಯ ನಂತರ ಅವರು ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ನೂರರಷ್ಟು ಪಾಲನ್ನೂ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವುದರ ಹಿನ್ನೆಲೆಯಲ್ಲಿ ಈ ನಿರ್ಧಾರ ಬಂದಿದೆ. ಈಗ ಅನಿವಾಸಿ ಭಾರತೀಯರಿಗೆ ಏರ್ ಇಂಡಿಯಾದ ಶೇಕಡಾ ನೂರರಷ್ಟು ಪಾಲನ್ನು ಖರೀದಿಗೆ ಅವಕಾಶ ಮಾಡಿಕೊಟ್ಟಿರುವುದು SOEC ನಿಯಮಗಳ ಉಲ್ಲಂಘನೆಯಾಗುವುದಿಲ್ಲ.

ಅನಿವಾಸಿ ಭಾರತೀಯರ ಹೂಡಿಕೆಯನ್ನು ದೇಶೀಯ ಹೂಡಿಕೆಯೆಂದು ಪರಿಗಣಿಸಲಾಗುತ್ತದೆ. ಸಬ್ ಸ್ಟ್ಯಾನ್ಷಿಯಲ್ ಓನರ್ ಷಿಪ್ ಅಂಡ್ ಎಫೆಕ್ಟಿವ್ ಕಂಟ್ರೋಲ್ (SOEC) ನಿಯಮಾವಳಿ ಅಡಿಯಲ್ಲಿ ಇದು ಬರುತ್ತದೆ. ಜಾಗತಿಕ ಮಟ್ಟದಲ್ಲಿ ಎಲ್ಲ ವಿಮಾನಯಾನ ಸಂಸ್ಥೆಗಳು ಇದನ್ನು ಪಾಲಿಸುತ್ತವೆ. ಒಂದು ದೇಶದ ವಿಮಾನಯಾನ ಸಂಸ್ಥೆಯ ವಿಮಾನ ಬೇರೆ ದೇಶದಲ್ಲೂ ಹಾರಾಟ ನಡೆಸುತ್ತಿದ್ದರೆ ಒಂದೋ ಆ ಸಂಸ್ಥೆಯಲ್ಲಿ ದೇಶದ ಸರ್ಕಾರ ಅಥವಾ ಆ ದೇಶದ ನಾಗರಿಕರು ಪಾಲನ್ನು ಹೊಂದಿರಬೇಕು.
ಸದ್ಯಕ್ಕೆ ಇರುವ ನಿಯಮಾವಳಿ ಪ್ರಕಾರ, ಅನಿವಾಸಿ ಭಾರತೀಯರು ಏರ್ ಇಂಡಿಯಾದಲ್ಲಿ 49ರಷ್ಟು ಪಾಲನ್ನು ಹೊಂದಿರಬಹುದು. ಸರ್ಕಾರದ ಒಪ್ಪಿಗೆ ಮಾರ್ಗದ ಮೂಲಕ ಕೂಡ 49 ಪರ್ಸೆಂಟ್ ಪಾಲನ್ನು ಮಾತ್ರ ಹೊಂದಿರಬಹುದು.
ಹೊಸ ಬಂಡವಾಳ ಹಿಂತೆಗೆತ ಯೋಜನೆ ಪ್ರಕಾರ, ಏರ್ ಇಂಡಿಯಾಗೆ ಬಿಡ್ ಸಲ್ಲಿಸಿದವರು 23,685.5 ಕೋಟಿ ರುಪಾಯಿ ಸಾಲವನ್ನು ವಹಿಸಿಕೊಂಡರೆ ಆಯಿತು. ಆದರೂ ಸದ್ಯದ ಆಸ್ತಿ ಪ್ರಮಾಣವನ್ನು ಲೆಕ್ಕ ಹಾಕಿಕೊಂಡು, ವ್ಯವಹಾರ ಚುಕ್ತಾ ಮಾಡುವ ವೇಳೆಗೆ ಎಷ್ಟಿರುತ್ತದೆ ಎಂಬುದನ್ನೆಲ್ಲ ಗಣನೆಗೆ ತೆಗೆದುಕೊಂಡು ಅಂತಿಮವಾಗಿ ಸಾಲದ ಬಗ್ಗೆ ತೀರ್ಮಾನ ಮಾಡಲಾಗುತ್ತದೆ.
ಏರ್ ಇಂಡಿಯಾದಿಂದ ಬಂಡವಾಳ ಹಿಂತೆಗೆತಕ್ಕೆ ಇದು ಎರಡನೇ ಬಾರಿಗೆ ಸರ್ಕಾರದಿಂದ ಪ್ರಯತ್ನ ನಡೆಯುತ್ತಿದೆ. ಬಹಳ ಸಮಯದಿಂದ ಇದು ಸಾಧ್ಯವಾಗುತ್ತಿಲ್ಲ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications