ಕರ್ನಾಟಕಕ್ಕೆ ಭರ್ಜರಿ ನ್ಯೂಸ್ ನೀಡಿದೆ ರೈಲ್ವೆ ಇಲಾಖೆ. ಅದೇನೆಂದರೆ ಕರ್ನಾಟಕದ ಸಂಚಾರ ವ್ಯವಸ್ಥೆಯನ್ನು ಬಲಪಡಿಸುವ ಮೂರು ಪ್ರಮುಖ ರೈಲು ಮಾರ್ಗಗಳು ಈಗ ಅಂತಿಮ ಹಂತಕ್ಕೆ ಬಂದಿವೆ. ಕೇಂದ್ರದ ರಾಜ್ ರೈಲ್ವೆ ಸಚಿವ ವಿ. ಸೋಮಣ್ಣ ಅವರು ಕೊಂಕಣ ರೈಲು ಪ್ರದೇಶದಲ್ಲಿ ಪರಿಶೀಲನೆ ನಡೆಸಿದ ನಂತರ ಈ ಮಾಹಿತಿಯನ್ನು ಹಂಚಿಕೊಂಡರು. ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಈ ರೈಲು ಮಾರ್ಗಗಳು ಮುಂದಿನ ವರ್ಷಗಳಲ್ಲಿ ರಾಜ್ಯದ ಸಾರಿಗೆ ಅಭಿವೃದ್ಧಿಗೆ ದೊಡ್ಡ ಬದಲಾವಣೆ ತರಲಿವೆ.

ಮೂರು ಪ್ರಸ್ತಾವಿತ ರೈಲು ಮಾರ್ಗಗಳ ಪಟ್ಟಿ:
ತಾಳಗುಪ್ಪ - ಶಿರಸಿ - ಹುಬ್ಬಳ್ಳಿ
ಅಂಕೋಲಾ - ಹುಬ್ಬಳ್ಳಿ
ತಾಳಗುಪ್ಪ - ಹೊನ್ನಾವರ
ಈ ಮೂರು ಮಾರ್ಗಗಳು ಸಂಬಂಧಿಸಿದ ಜಿಲ್ಲೆಯ ಜನರಿಗೆ ದಿನನಿತ್ಯದ ಪ್ರಯಾಣ, ಉದ್ಯೋಗ ಅವಕಾಶಗಳು ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲಿವೆ.
ತಾಳಗುಪ್ಪ - ಶಿರಸಿ - ಹುಬ್ಬಳ್ಳಿ ಮಾರ್ಗಕ್ಕೆ DPR ಅಂತಿಮ ಹಂತ:
ಈ ಮಾರ್ಗಕ್ಕೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ (DPR) ಮತ್ತೂ ಆರು ತಿಂಗಳೊಳಗೆ ಸಿದ್ಧವಾಗಲಿದೆ. ಅದಾದ ನಂತರ ಭೂಸ್ವಾಧೀನ ಪ್ರಕ್ರಿಯೆ ತಕ್ಷಣ ಪ್ರಾರಂಭವಾಗುತ್ತದೆ. ರೈಲ್ವೆ ಮಂಡಳಿ ಈಗಾಗಲೇ ಅನುಮೋದನೆ ನೀಡಿರುವುದರಿಂದ ಕೆಲಸದ ಗತಿ ಹೆಚ್ಚುವ ನಿರೀಕ್ಷೆ ಇದೆ. ಸುಮಾರು 167 ಕಿ.ಮೀ ಉದ್ದದ ಈ ಮಾರ್ಗಕ್ಕೆ 3,000 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಮಲೆನಾಡಿನ ಸಂಚಾರ ತೊಂದರೆಗಳನ್ನು ಕಡಿಮೆ ಮಾಡಲು ಇದು ದೊಡ್ಡ ನೆರವಾಗಲಿದೆ.
ಮಲೆನಾಡಿನ ಆರ್ಥಿಕ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಹಂತ:
ತಾಳಗುಪ್ಪ - ಶಿರಸಿ - ಹುಬ್ಬಳ್ಳಿ ಮಾರ್ಗ 2030ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಶಿರಸಿ, ಸಿದ್ದಾಪುರ, ಮುಂಡಗೋಡ ಭಾಗಗಳ ಜನರು ಹೊಸ ರೈಲು ಮಾರ್ಗದ ಮೂಲಕ ಸುಲಭವಾಗಿ ಹುಬ್ಬಳ್ಳಿ ಮತ್ತು ಶಿವಮೊಗ್ಗ ಕಡೆ ತಲುಪಬಹುದು. ಇದು ಕೃಷಿ ಉತ್ಪನ್ನಗಳ ಸಾಗಣೆಗೂ ಸಹಕಾರಿ. ಮಲೆನಾಡು-ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ನೀಡುವ ಸಾಮರ್ಥ್ಯ ಈ ಯೋಜನೆಯಲ್ಲಿ ಅಡಕವಾಗಿದೆ.
21 ಸಾವಿರ ಕೋಟಿ ರೂ. ಮೌಲ್ಯದ ಒಟ್ಟು ಯೋಜನೆ:
ಹುಬ್ಬಳ್ಳಿ-ತಾಳಗುಪ್ಪ ಹಾಗೂ ತಾಳಗುಪ್ಪ-ಹೊನ್ನಾವರ ಮಾರ್ಗಗಳ ನಿರ್ಮಾಣ ಸೇರಿ ಒಟ್ಟು ವೆಚ್ಚ 21 ಸಾವಿರ ಕೋಟಿ ರೂ. ಆಗಲಿದೆ. ಈಗಾಗಲೇ ಹಲವಾರು ನಿಲ್ದಾಣಗಳ ಸುಧಾರಣೆ ಕಾರ್ಯ ನಡೆಯುತ್ತಿದೆ. ಕೊಂಕಣ ರೈಲು ವಿಲೀನದ ಚರ್ಚೆಯೂ ಮುಂದುವರಿದಿದ್ದು, ಭವಿಷ್ಯದಲ್ಲಿ ಸಂಚಾರ ವ್ಯವಸ್ಥೆ ಇನ್ನಷ್ಟು ಸರಳವಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಹುಬ್ಬಳ್ಳಿ - ಅಂಕೋಲಾ ರೈಲು ಮಾರ್ಗಕ್ಕೆ ಪರಿಸರ ವಿರೋಧ:
ಹುಬ್ಬಳ್ಳಿ - ಅಂಕೋಲಾ ಮಾರ್ಗ 108 ಕಿ.ಮೀ ಪಶ್ಚಿಮ ಘಟ್ಟದ ದಟ್ಟ ಅರಣ್ಯವನ್ನು ಹಾದುಹೋಗುವ ಕಾರಣ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಯೋಜನೆಯ ವಿನ್ಯಾಸ ಬದಲಿಸಿ ವಿದ್ಯುದ್ದೀಕರಣದ ಜೋಡಿ ಹಳಿ ನಿರ್ಮಿಸಲು ನಿರ್ಧರಿಸಲಾಗಿದೆ. ಇದರಿಂದ ಪರಿಸರಕ್ಕೆ ಆಗುವ ಹಾನಿ ಕಡಿಮೆಯಾಗುತ್ತದೆ ಎಂದು ರೈಲ್ವೆ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ. ಈ ಮಾರ್ಗಕ್ಕೆ 16,435 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.
ನಾಲ್ಕು ಜಿಲ್ಲೆಗಳ ಪ್ರಯಾಣಿಕರಿಗೆ ನೇರ ಪ್ರಯೋಜನ:
ಈ ಮೂರು ಹೊಸ ರೈಲು ಮಾರ್ಗಗಳು ಪೂರ್ಣಗೊಂಡ ನಂತರ ಉತ್ತರ ಕನ್ನಡ, ಧಾರವಾಡ, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ಜನರಿಗೆ ದೀರ್ಘ ಪ್ರಯಾಣ ಸುಲಭವಾಗುತ್ತದೆ. ಶೀಘ್ರ ಪ್ರಯಾಣ, ಕಡಿಮೆ ವೆಚ್ಚ, ಸರಕು ಸಾಗಣೆಗೆ ಅನುಕೂಲ ಇನ್ನಷ್ಟು ಹೆಚ್ಚಾಗಲಿದೆ. ಮಲೆನಾಡು-ಕರಾವಳಿ-ಉತ್ತರ ಕರ್ನಾಟಕದ ಹೊಸ ಸಂಚಾರ ಜಾಲ ರೂಪುಗೊಳ್ಳಲಿದೆ.
ಮೂರು ರೈಲು ಮಾರ್ಗಗಳ ಈ ಮಹತ್ವಾಕಾಂಕ್ಷಿ ಯೋಜನೆ ಮುಂದಿನ ವರ್ಷಗಳಲ್ಲಿ ಕರ್ನಾಟಕದ ಸಂಚಾರ ವ್ಯವಸ್ಥೆಗೆ ಹೊಸ ಬಲ ನೀಡಲಿದೆ. ಮಲೆನಾಡು ಪ್ರದೇಶಕ್ಕೆ ಸುಲಭ ಸಂಪರ್ಕ, ಕರಾವಳಿ ವ್ಯಾಪಾರಕ್ಕೆ ಗತಿ ಮತ್ತು ಉತ್ತರ ಕರ್ನಾಟಕಕ್ಕೆ ಹೊಸ ಆರ್ಥಿಕ ಅವಕಾಶಗಳನ್ನು ಒದಗಿಸುವ ಸಾಮರ್ಥ್ಯ ಈ ಮಾರ್ಗಗಳಲ್ಲಿ ಇದೆ.
More From GoodReturns

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Karnataka Rain: ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆಯಾರ್ಭಟ ಫಿಕ್ಸ್; ಜನರೇ ಎಚ್ಚರ!

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ



Click it and Unblock the Notifications