ದೀರ್ಘ ಕಾಲದಿಂದ ರೈಲಿನಲ್ಲಿ ಟಿಕೆಟ್ ದರದಲ್ಲಿ ರಿಯಾಯಿತಿ ನೀಡುವಂತೆ ಒತ್ತಾಯಿಸುತ್ತಿದ್ದ ಹಿರಿಯ ನಾಗರಿಕರಿಗೆ ಇಲ್ಲಿ ಒಂದು ದೊಡ್ಡ ಅಪ್ಡೇಟ್ ಇದೆ. ಭಾರತೀಯ ರೈಲ್ವೇಯು ಪೂರ್ವ ಕೋವಿಡ್ ಸಂದರ್ಭದಲ್ಲಿದ್ದ ಟಿಕೆಟ್ ದರದ ರಿಯಾಯಿತಿಯನ್ನು ಮತ್ತೆ ಆರಂಭಿಸುತ್ತದೆಯೇ?
ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಪ್ರತಿ ಪ್ರಯಾಣಿಕರು ರೈಲು ಪ್ರಯಾಣದಲ್ಲಿ ಶೇಕಡ 55 ರಷ್ಟು ರಿಯಾಯಿತಿಯನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ. ಹಿರಿಯ ನಾಗರಿಕರು ಮತ್ತು ಮಾಧ್ಯಮದವರಿಗೆ ಕೋವಿಡ್ ಪೂರ್ವದ ಪ್ರಯಾಣ ದರದ ರಿಯಾಯಿತಿಗಳನ್ನು ಮತ್ತೆ ಆರಂಭಿಸುವ ಬೇಡಿಕೆಗಳ ಕುರಿತು ಮಾತನಾಡಿದರು.

ಟಿಕೆಟ್ ದರದಲ್ಲಿ ಕಡಿತ ಮತ್ತೆ ಆರಂಭಿಸಲಾಗುತ್ತಾ?
ರಿಯಾಯಿತಿಗಳನ್ನು ಮತ್ತೆ ಆರಂಭ ಮಾಡುವ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಯಾವುದೇ ನೇರ ಉತ್ತರವನ್ನು ನೀಡದೆ ವೈಷ್ಣವ್, "ಭಾರತೀಯ ರೈಲ್ವೆ ಈಗಾಗಲೇ ಪ್ರತಿ ರೈಲು ಪ್ರಯಾಣಿಕರಿಗೆ ರೈಲು ದರದಲ್ಲಿ ಶೇಕಡ 55 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ," ಎಂದು ಹೇಳಿದರು.
ಅಹಮದಾಬಾದ್ನಲ್ಲಿ ನಡೆಯುತ್ತಿರುವ ಬುಲೆಟ್ ರೈಲು ಯೋಜನೆಯ ಪ್ರಗತಿಯನ್ನು ಪರಿಶೀಲಿಸಲು ಬಂದ ವೈಷ್ಣವ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಈ ಮೇಲಿನ ಹೇಳಿಕೆ ನೀಡಿದ್ದಾರೆ.
ಭಾರತೀಯ ರೈಲ್ವೆಯು ಕೋವಿಡ್ ಸಂದರ್ಭದಲ್ಲಿ 50% ರಿಯಾಯಿತಿಯನ್ನು ನೀಡಿದೆ. ಮಾರ್ಚ್ 2020 ರಲ್ಲಿ ವಿಧಿಸಲಾದ ಕೋವಿಡ್ ಲಾಕ್ಡೌನ್ಗೆ ಮೊದಲು, ರೈಲ್ವೆಯು ಹಿರಿಯ ನಾಗರಿಕರು ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ರೈಲು ದರಗಳಲ್ಲಿ ಶೇಕಡ 50 ರಷ್ಟು ರಿಯಾಯಿತಿಯನ್ನು ನೀಡಿತು.
ಲಾಕ್ಡೌನ್ ಸಮಯದಲ್ಲಿ ರೈಲ್ವೇ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ ಜೂನ್ 2022 ರಲ್ಲಿ ಪೂರ್ಣ ಪ್ರಮಾಣದ ಪುನರಾರಂಭವಾದಾಗ, ರೈಲ್ವೆ ಸಚಿವಾಲಯವು ಈ ರಿಯಾಯಿತಿಗಳನ್ನು ಮತ್ತೆ ಸ್ಥಾಪಿಸಿಲ್ಲ. ಅಂದಿನಿಂದ ಸಂಸತ್ತಿನ ಉಭಯ ಸದನಗಳು ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಈ ಸಮಸ್ಯೆಯನ್ನು ಎತ್ತಲಾಗಿದೆ.
ಆದರೆ ಅನೇಕ ಸಹ ಸಂಸದರು ಪ್ರಶ್ನಿಸಿದಾಗ ರೈಲ್ವೆ ಸಚಿವರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿವಿಧ ಸಂದರ್ಭಗಳಲ್ಲಿ ಇದೇ ನಿಲುವನ್ನು ಸಚಿವರು ಉಳಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು, ಮಧ್ಯಪ್ರದೇಶ ಮೂಲದ ಚಂದ್ರಶೇಖರ್ ಗೌರ್ ಅವರು ಸಲ್ಲಿಸಿದ ಆರ್ಟಿಐ ಅರ್ಜಿಗೆ ಪ್ರತಿಕ್ರಿಯಿಸಿದ ಭಾರತೀಯ ರೈಲ್ವೇ 2022-23ರ ಹಣಕಾಸು ವರ್ಷದಲ್ಲಿ ಸರಿಸುಮಾರು 15 ಕೋಟಿ ಹಿರಿಯ ನಾಗರಿಕರಿಂದ ಸುಮಾರು 2,242 ಕೋಟಿ ರೂಪಾಯಿ ಗಳಿಸಿದೆ ಎಂದು ಹೇಳಿದೆ.


Click it and Unblock the Notifications