ಸುಜನ್ ಯೋಜನೆಗೆ ಅರ್ಜಿ ಸಲ್ಲಿಸಿ, 10 ಲಕ್ಷ ಸಾಲ ಪಡೆಯಿರಿ..
ರಾಜ್ಯ ಸರ್ಕಾರ ಕೂಡ ಕಾಯಕ ಯೋಜನೆ, ಮುಖ್ಯಮಂತ್ರಿ ವಸತಿ ಯೋಜನೆ, ಮುಖ್ಯಮಂತ್ರಿ ಸ್ವಉದ್ಯೋಗ ಯೋಜನೆ, ಸಮೃದ್ಧಿ ಯೋಜನೆ, ಮಾತೃಶ್ರೀ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ.
ರಾಜ್ಯ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿ ತರುತ್ತಿದೆ. ಕಾಯಕ ಯೋಜನೆ, ಮುಖ್ಯಮಂತ್ರಿ ವಸತಿ ಯೋಜನೆ, ಮುಖ್ಯಮಂತ್ರಿ ಸ್ವಉದ್ಯೋಗ ಯೋಜನೆ, ಸಮೃದ್ಧಿ ಯೋಜನೆ, ಮಾತೃಶ್ರೀ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ.
ಇದೀಗ ಸ್ವಯಂ ಉದ್ಯೋಗ ನಿರ್ಮಾಣಕ್ಕಾಗಿ ಸುಜನ್ ಯೋಜನೆ ಪರಿಚಯಿಸಿದೆ. ಇದು ನಿರುದ್ಯೋಗಿ ಯುವಕರಿಗೆ ಖುಷಿಯ ಸಂಗತಿಯಾಗಿದ್ದು, ಅದರ ವಿವರ ಇಲ್ಲಿದೆ ನೋಡಿ.. ಮುಖ್ಯಮಂತ್ರಿ ಸ್ವ ಉದ್ಯೋಗ ಯೋಜನೆಗೆ (CMEGP) ನೋಂದಣಿ, ಅರ್ಜಿ ಸಲ್ಲಿಸುವುದು ಹೇಗೆ?
ಸುಜನ್ ಯೋಜನೆ?
ಸುಜನ್ ಯೋಜನೆಯಡಿ ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಎಸ್ಸಿ, ಎಸ್ಟಿ, ಒಬಿಸಿ, ಸಾಮಾನ್ಯ ಹೀಗೆ ಎಲ್ಲಾ ವರ್ಗದವರು ಈ ಯೋಜನೆ ಅಡಿಯಲ್ಲಿ ಸಾಲ ಪಡೆಯಬಹುದು. ಯುವಕರನ್ನು ಉದ್ಯಮಶೀಲತೆಯ ಕ್ಷೇತ್ರದಲ್ಲಿ ಸಬಲೀಕರಣ ಮಾಡುವುದು ಸಮೃದ್ಧಿ ಯೋಜನೆಯ ಧ್ಯೇಯವಾಗಿದೆ. ಆದರೆ ಸಮೃದ್ಧಿ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಯುವಕರನ್ನು ಉದ್ಯಮಶೀಲತೆಯ ಕ್ಷೇತ್ರದಲ್ಲಿ ಸಬಲೀಕರಣ ಮಾಡುವುದು ಸಮೃದ್ಧಿ ಯೋಜನೆಯ ಧ್ಯೇಯವಾಗಿದೆ. ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?
10 ಲಕ್ಷದವರೆಗೆ ಸಾಲ
ಸುಜನ್ ಯೋಜನೆಯಡಿ ಸುಮಾರು ರೂ. 10 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುವುದು. ಇಲ್ಲಿ ಎಲ್ಲಾ ವರ್ಗದವರು ಸ್ವಂತ ಉದ್ಯೋಗ ಅಥವಾ ಸಣ್ಣ ಕೈಗಾರಿಕೆ ಆರಂಭಿಸಲು ಸುಜನ್ ಯೋಜನೆಯಡಿಯಲ್ಲಿ ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ರೂ. 10 ಲಕ್ಷದವರೆಗೆ ಸಾಲ ನೀಡಲಾಗುತ್ತದೆ.
ಸುಜನ್ ಯೋಜನೆ ಉದ್ದೇಶ
- ಎಸ್ಸಿ, ಎಸ್ಟಿ, ಒಬಿಸಿ, ಸಾಮಾನ್ಯ ಎಲ್ಲಾ ವರ್ಗದ ಯುವಕರ ಸಬಲೀಕರಣ
- ಸ್ವಯಂ ಉದ್ಯೋಗಕ್ಕೆ ಅವಕಾಶ ಸೃಷ್ಟಿ
- ರಾಜ್ಯದಲ್ಲಿ ಉದ್ಯೋಗ ಹೆಚ್ಚಿಸುವುದು
- ರಾಜ್ಯದ ಆರ್ಥಿಕತೆಗೆ ವೇಗ ನೀಡುವುದು
ಸುಜನ್ ಯೋಜನೆಗೆ ಅರ್ಹತೆ?
- ಕರ್ನಾಟಕ ರಾಜ್ಯದವರಿಗೆ ಮಾತ್ರ ಅನ್ವಯವಾಗುತ್ತದೆ
- ಎಸ್ಸಿ, ಎಸ್ಟಿ, ಒಬಿಸಿ, ಸಾಮಾನ್ಯ ಎಲ್ಲಾ ವರ್ಗದವರು ಅರ್ಜಿ ಸಲ್ಲಿಸಬಹುದು.
- BPL ಅಥವಾ APL ಕಾರ್ಡ್ ನ ಅವಶ್ಯಕತೆ ಇಲ್ಲ
- ವಾರ್ಷಿಕ ಆದಾಯದ ಅಗತ್ಯವಿಲ್ಲ
- ಜಾತಿ ಪ್ರಮಾನ ಪತ್ರ ಬೇಕಿಲ್ಲ.
- 8ನೇ ತರಗತಿ ಪಾಸಾಗಿರಬೇಕು.
- ವಯಸ್ಸು 18 - 35ರ ಒಳಗಿರಬೇಕು.
ವೆಬ್ಸೈಟ್ ಗೆ ಭೇಟಿ ನೀಡಿ
ಈ ಯೋಜನೆಯ ಲಾಭ ಪಡೆಯು ಇಚ್ಚಿಸುವವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ, ನವೆಂಬರ್ 13 ರ ಅರ್ಜಿ ಸಲ್ಲಿಸಿ. ಇದನ್ನ ನಿಮ್ಮ ಸ್ನೇಹಿತರಿಗೂ ಶೇರ್ ಮಾಡುವ ಮುಕಾಂತರ ಹಂಚಿಕೊಳ್ಳಿ.
ಯೋಜನೆಯ ಆಶಯ
ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಇದರ ಮೂಲಕ ನಿರುದ್ಯೋಗಿಗಳಿಗೆ ಸ್ವಂತ ವ್ಯವಹಾರ ಮಾಡಲು ಸಾಲ ಸೌಲಭ್ಯ ಒದಗಿಸುವುದಾಗಿದೆ. ಸರ್ಕಾರದ ಈ ಯೋಜನೆಯನ್ನು ಸದುಪಯೋಗಪಡಿಸಿ ಯುವಕ ಯುವತಿಯರೆಲ್ಲ ತಮ್ಮ ಆಸೆಯಂತೆ ಸ್ವಂತ ಉದ್ಯೋಗ/ಸಣ್ಣ ಕೈಗಾರಿಕೆ ಪ್ರಾರಂಭಿಸಿ ಜೀವನದಲ್ಲಿ ಯಶಸ್ವಿಯಾಗಿ. ಕರ್ನಾಟಕ ಸರ್ಕಾರದ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?