ಹೊಸ ವರ್ಷದ ಪರ್ವಕಾಲದಲ್ಲಿ ಹಳೆಯ ಕಹಿಯನ್ನೆಲ್ಲ ಮರೆತು ಹೊಸ ಸಂಗತಿಗಳಿಗೆ ಮನಸ್ಸನ್ನು ತೆರೆದುಕೊಂಡು ಮುನ್ನಡೆಯುವುದಕ್ಕಿಂತ ಉತ್ತಮ ಸಂಗತಿ ಬೇರೊಂದಿಲ್ಲ.
ಹೊಸ ವರ್ಷದ ಪರ್ವಕಾಲದಲ್ಲಿ ಹಳೆಯ ಕಹಿಯನ್ನೆಲ್ಲ ಮರೆತು ಹೊಸ ಸಂಗತಿಗಳಿಗೆ ಮನಸ್ಸನ್ನು ತೆರೆದುಕೊಂಡು ಮುನ್ನಡೆಯುವುದಕ್ಕಿಂತ ಉತ್ತಮ ಸಂಗತಿ ಬೇರೊಂದಿಲ್ಲ. ಹೊಸ ವರ್ಷಕ್ಕೆ ಹೊಸದೇನನ್ನಾದರೂ ಸಾಧಿಸಬೇಕೆಂಬ ಹಂಬಲ ಹೊಂದಿರುವವರು ನೀವಾಗಿದ್ದಲ್ಲಿ ಅದನ್ನು ಸಾಧಿಸಲು ಏನು ಮಾಡಬೇಕು ಎಂಬುದನ್ನು ನಾವು ಹೇಳಿ ಕೊಡುತ್ತೇವೆ. ಈ ಅಂಕಣದಲ್ಲಿ ತಿಳಿಸಲಾದ ಕ್ರಮಗಳನ್ನು ಅನುಸರಿಸಿ ಜೀವನದಲ್ಲಿ ಬದಲಾವಣೆ ಕಾಣಲು ನೀವೂ ಯತ್ನಿಸಿ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದಿರಾ?
1. ಪ್ಲೇಸಮೆಂಟ್ ಕನ್ಸಲ್ಟನ್ಸಿಗಳ ಸಾಮರ್ಥ್ಯ
ಹಲವಾರು ಪ್ಲೇಸಮೆಂಟ್ ಏಜೆನ್ಸಿಗಳಿಗೆ ನಿಮ್ಮ ರೆಸ್ಯೂಮ್ ನೀಡುವುದರಿಂದ ಬೇಗನೆ ಸೂಕ್ತ ನೌಕರಿ ದೊರಕುತ್ತದೆ ಎಂಬುದು ತಪ್ಪು ಕಲ್ಪನೆ. ಏಜೆನ್ಸಿಗಳು ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಆಧರಿಸಿ ಹಾಗೂ ಹೆಚ್ಚಾಗಿ ಕಂಪನಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತವೆ. ನಿಮಗಾಗಿಯೇ ಯಾವುದೇ ನಿರ್ದಿಷ್ಟ ಕೆಲಸವನ್ನು ಅವರು ಹುಡುಕಲಾರರು ಎಂಬುದು ಗೊತ್ತಿರಲಿ. ಅವರ ಬಳಿ ಈಗಾಗಲೇ ಇರುವ ಸಾವಿರಾರು ರೆಸ್ಯೂಮ್ಗಳಲ್ಲಿ ನಿಮ್ಮದೂ ಸೇರಿಕೊಂಡಿರುತ್ತದೆ. ಹೀಗಾಗಿ ಆದಷ್ಟೂ ನಿಮ್ಮ ಸ್ವಸಾಮರ್ಥ್ಯದಿಂದ ಕೆಲಸ ಗಿಟ್ಟಿಸಲು ಯತ್ನಿಸಿ.
2. ನೂರಾರು ಕಡೆ ಅರ್ಜಿ ಹಾಕುವಿಕೆ
ಸಿಕ್ಕ ಸಿಕ್ಕ ಕಡೆಗೆಲ್ಲ ರೆಸ್ಯೂಮ್ ಹಾಕಿ ನೌಕರಿಗೆ ಯತ್ನಿಸುವುದು ಜಾಣತನವಲ್ಲ. ಇದರಿಂದ ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಂಡಂತಾಗುತ್ತದೆ. ಇದರಿಂದ ನಿಮಗೆ ಸರಿಹೊಂದದ ಕೆಲಸಗಳಿಗಾಗಿ ಸಮಯ ಹಾಗೂ ಶ್ರಮಗಳನ್ನು ವ್ಯರ್ಥ ಮಾಡಿಕೊಳ್ಳುವಂತಾಗುತ್ತದೆ. ಇದರ ಬದಲು ನಿಮಗೆ ಬೇಕಾದ ರೀತಿಯ ಹುದ್ದೆ ಹಾಗೂ ಕಂಪನಿಗಳತ್ತ ದೃಷ್ಟಿ ಇಟ್ಟು ಅದರ ಬಗ್ಗೆ ಪರಿಶ್ರಮ ಪಡುವುದು ಸರಿಯಾದ ಮಾರ್ಗವಾಗಿದೆ.
3. ಲಕ್ ಹಾಗೂ ಅವಕಾಶಗಳ ನಿರೀಕ್ಷೆ
ನಾನು ಅದೃಷ್ಟವಂತನಾಗಿದ್ದೇನೆ, ನನಗೆ ಬೇಕಾದ ನೌಕರಿ ಸಿಕ್ಕೇ ಸಿಗುತ್ತದೆ ಎಂಬ ದೃಷ್ಟಿಕೋನದಿಂದ ನೌಕರಿ ಹುಡುಕುವುದು ಸರಿಯಲ್ಲ. ಬರೀ ಲಕ್ ಹಾಗೂ ನಿರೀಕ್ಷೆಗಳಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ಇದರ ಬದಲು ಸರಿಯಾದ ತಯಾರಿ ನಡೆಸಲು ಶ್ರಮ ಪಟ್ಟರೆ ಉದ್ದೇಶಿತ ಗುರಿಯನ್ನು ಮುಟ್ಟಲು ಸಾಧ್ಯ.
4. ಮನೆಯಲ್ಲೇ ಕುಳಿತರೆ ಏನೂ ಸಾಧಿಸಲಾಗದು
ಹೊಲದಲ್ಲಿ ಒಂದು ಬಾರಿ ಬೀಜ ಬಿತ್ತಿ ಇನ್ನೇನು ಸಮೃದ್ಧ ಫಸಲು ಬರುತ್ತದೆ ಎಂದು ಮನೆಯಲ್ಲಿ ಕುಳಿತ ರೈತನಿಗೆ ಏನೂ ಸಿಗಲಾರದು. ಹಾಗೆಯೇ ಕೇವಲ ರೆಸ್ಯೂಮ್ ಕಳುಹಿಸುವುದರಿಂದ ಯಾವುದೇ ಉಪಯೋಗವಿಲ್ಲ. ಸಂಬಂಧಿಸಿದ ವ್ಯಕ್ತಿಗಳನ್ನು ಭೇಟಿ ಮಾಡುವುದು, ಕಂಪನಿಗಳಲ್ಲಿ ನಿರ್ಣಾಯಕ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಕಾಫಿ ನೆಪದಲ್ಲಿ ಭೇಟಿ ಮಾಡಿ ಅವರೊಂದಿಗೆ ಚರ್ಚಿಸುವುದು ಸಾಕಷ್ಟು ಉತ್ತಮ ಫಲ ನೀಡುತ್ತವೆ.
5. ನಿಮಗೇನು ಬೇಕು ಎಂಬುದು ಮಾತ್ರ ಮುಖ್ಯವಾಗಲಾರದು
ನಿಮ್ಮ ಮಹತ್ವಾಕಾಂಕ್ಷೆಗಳು ಎಲ್ಲ ಸಂದರ್ಭಗಳಲ್ಲಿಯೂ ಕೆಲಸ ಮಾಡಲಾರವು. ಹಲವಾರು ಹೊಸಬರು ಹಾಗೂ ಅನುಭವಿಕರು ತಮ್ಮ ಕನಸುಗಳಿಗೆ ತಕ್ಕಂತೆ ಜಗತ್ತು ಸ್ಪಂದಿಸುತ್ತದೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಕಂಪನಿಗಳಿಗೆ ಅದಾವುದೂ ಮುಖ್ಯವಲ್ಲ. ಅವರ ಅವಶ್ಯಕತೆಗಳಿಗೆ ತಕ್ಕಂತೆ ನಿಮ್ಮಲ್ಲಿ ಯಾವ ಕೌಶಲಗಳಿವೆ ಹಾಗೂ ಅದಕ್ಕಾಗಿ ಎಷ್ಟು ಸಂಬಳ ನೀಡಬಹುದು ಎಂಬುದು ಮಾತ್ರವೇ ಅವರಿಗೆ ಮುಖ್ಯವಾಗಿರುತ್ತದೆ. ಸಂಬಳದ ಬಗ್ಗೆ ಮಾತನಾಡುವ ಮೊದಲು ಹೊರಗಡೆ ಆ ಕೆಲಸಕ್ಕೆ ಸರಾಸರಿ ಎಷ್ಟು ಸಂಬಳ ಸಿಗುತ್ತಿದೆ ಎಂಬ ಬಗ್ಗೆ ಜ್ಞಾನವಿರುವುದು ಅವಶ್ಯಕ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications