ನೀವು ಮಕ್ಕಳ ಶಿಕ್ಷಣಕ್ಕಾಗಿ ಉಳಿತಾಯ ಮಾಡುತ್ತಿಲ್ಲವೆ?
ಪ್ರತಿಯೊಬ್ಬ ಪಾಲಕರು ತಮ್ಮ ಮಕಕ್ಕಳ ಭವಿಷ್ಯ ಉಜ್ವಲವಾಗಿರಬೇಕು, ಅದಕ್ಕಾಗಿ ಅತ್ಯುತ್ತಮ ಶಿಕ್ಷಣ ಕೊಡಿಸಬೇಕು ಎಂಬ ಬಹುದೊಡ್ಡ ಕನಸು ಹೊತ್ತಿರುತ್ತಾರೆ. ಹಾಗಿದ್ದರೆ ಈ ನಿಟ್ಟಿನಲ್ಲಿ ಪೋಷಕರ ಪಾತ್ರವೇನು?
ಪ್ರತಿಯೊಬ್ಬ ಪಾಲಕರು ತಮ್ಮ ಮಕಕ್ಕಳ ಭವಿಷ್ಯ ಉಜ್ವಲವಾಗಿರಬೇಕು, ಅದಕ್ಕಾಗಿ ಅತ್ಯುತ್ತಮ ಶಿಕ್ಷಣ ಕೊಡಿಸಬೇಕು ಎಂಬ ಬಹುದೊಡ್ಡ ಕನಸು ಹೊತ್ತಿರುತ್ತಾರೆ. ಹಾಗಿದ್ದರೆ ಈ ನಿಟ್ಟಿನಲ್ಲಿ ಪೋಷಕರ ಪಾತ್ರವೇನು? ನಿವೇನು ಮಾಡಬೇಕು ಎಂಬುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ಮಕ್ಕಳ ಮುಂದಿನ ಭವಿಷ್ಯತ್ತಿಗಾಗಿ ಹಣ ತುಂಬಾನೇ ಮುಖ್ಯ ಅಲ್ಲವಾ? ಹಾಗಾಗಿ ಸರಿಯಾದ ವಿಧಾನಗಳಲ್ಲಿ ಉಳಿತಾಯ ಮತ್ತು ಹೂಡಿಕೆ ಮಾಡುವುದು ಅಷ್ಟೇ ಮುಖ್ಯ.
ಮಕ್ಕಳ ಯೋಜನೆಗಳಿಗೆ ಸಂಬಂಧಿಸಿದಂತೆ ಅನೇಕ ವಿಮಾ ಕಂಪನಿಗಳು ಬಗೆ ಬಗೆಯ ಸ್ಕೀಮ್ ಗಳನ್ನು ಪರಿಚಯಿಸಿವೆ. ಅನೇಕ ವಿಧದ ವಿಮೆಗಳ ಮೇಲೆ ಹೂಡಿಕೆ ಮಾಡಬಹುದಾಗಿದೆ. ಲಭ್ಯವಿರುವ ಇರುವಂತಹ ಅನೇಕ ವಿಮಾ ಯೋಜನೆಗಳಲ್ಲಿ ಯಾವುದು ಉತ್ತಮ? ಯಾವುದರ ಮೇಲೆ ಹೂಡಿಕೆ ಮಾಡಬೇಕು? ಯಾವುದು ಹೆಚ್ಚು ಲಾಭದಾಯಕ? ಹೀಗೆ ಹಲವಾರು ಗೊಂದಲಗಳು, ಯಾವುದನ್ನು ಆಯ್ಕೆ ಮಾಡುವುದು, ಎಷ್ಟು ಹೂಡಿಕೆ ಮಾಡುವುದು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರುತ್ತದೆ.
ಮೊದಲಿಗೆ ನಿಮ್ಮಲ್ಲಿ ಒಂದು ಸ್ಪಷ್ಟ ಗುರಿಯ ಅಗತ್ಯವಿದೆ. ಎಂಬಿಎ ಮತ್ತು ಇಂಜಿನೀಯರಿಂಗ್ ಪದವಿ ಪಡೆಯಲು ಹೆಚ್ಚುಕಡಿಮೆ 10 ಲಕ್ಷ ಬೇಕಾಗುತ್ತದೆ. ಇದು ಇಂದಿನ ಸಾಮಾನ್ಯ ವೆಚ್ಚವಾಗಿದೆ ಎನ್ನಬಹುದು. ಹಣದ ಅವಶ್ಯಕತೆಯ ಆಧಾರದ ಮೇಲೆ ನೀವು ಇದನ್ನು ಯೋಜನೆ ಮಾಡಬೇಕು. ಅಂದರೆ ೧೦-೧೫ ವರ್ಷಗಳ ನಂತರ ಹಣದ ಅಗತ್ಯವಿದ್ದಲ್ಲಿ ನಿಮ್ಮ ದಿನನಿತ್ಯ ವೆಚ್ಚ ಆಧರಿಸಿ ಉಳಿತಾಯ ಮಾಡಲು ಆರಂಭಿಸಿ.
ಇವತ್ತು ರೂ. ೫ ಲಕ್ಷ ಇದ್ದರೆ ಮುಂದಿನ 15 ವರ್ಷಗಳ ನಂತರ ಶೇ. ೮ರ ಹಣದುಬ್ಬರದ ದರದಲ್ಲಿ ಇದು ರೂ. ೪೬ ಲಕ್ಷಕ್ಕೆ ಸಮವಾಗಿರುತ್ತದೆ. ಹೂಡಿಕೆ ಮಾಡುವ ಮುನ್ನ ತೊಂದರೆಗಳು ಮತ್ತು ಸಮಯಾವಕಾಶ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೆಕು. ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವ ಮುನ್ನ ಇಲ್ಲೊಮ್ಮೆ ನೋಡಿ..
ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ಉತ್ತಮ ಶಿಕ್ಷಣಕ್ಕಾಗಿ ಉಳಿತಾಯ ಮಾಡಲು ಹೂಡಿಕೆ ಮಾಡಬಹುದಾದ ಅನೇಕ ಉತ್ತಮ ವಿಧಾನಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
ಪಿಪಿಎಫ್
ಯಾರಿಗೆ ಹೆಣ್ಣು ಮಗು ಇಲ್ಲವೋ ಅವರು ಫಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಉತ್ತಮ. ಸುಕನ್ಯಾ ಸಮೃದ್ಧಿ ಯೋಜನೆಯಂತೆ ಇದರಲ್ಲೂ ತೆರಿಗೆ ಲಾಭಗಳನ್ನು ಪಡೆಯಬಹುದು. ಸರ್ಕಾರ ಪ್ರತಿ ತ್ರೈಮಾಸಿಕಕ್ಕೆ ಅನುಗುಣವಾಗಿ ಬಡ್ಡಿದರವನ್ನು ಪರಿಷ್ಕರಿಸುತ್ತದೆ. ಅದರ ಪ್ರಕಾರ ಪಿಪಿಎಫ್ ಬಡ್ಡಿದರವು ಬ್ಯಾಂಕುಗಳ ಬಡ್ಡಿದರಗಳಿಗಿಂತ ಹೆಚ್ಚಿರುವುದು ಖಚಿತವಾಗಿದೆ. ಬ್ಯಾಂಕುಗಳು ಪ್ರಸ್ತುತ ಶೇ.6-7ರ ಮಿತಿಯಲ್ಲಿ ಬಡ್ಡಿದರ ನೀಡುತ್ತಿವೆ. ಆದರೆ ಪಿಪಿಎಪ್ ಹೂಡಿಕೆ ಮೇಲೆ ನೀವು ಶೇ. 8 ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ಪಿಪಿಎಫ್ ನಲ್ಲಿ ಹೂಡಿಕೆ ಮಾಡಲು 10 ಕಾರಣ
ಡೆಬ್ಟ್ ಮ್ಯೂಚುವಲ್ ಫಂಡ್
ತೆರಿಗೆ ಲಾಭದ ದೃಷ್ಟಿಯಿಂದ ಸ್ಥಿರ ಠೇವಣಿಗಳಿಗೆ ಪರ್ಯಾಯವಾಗಿ ಇದನ್ನು ಆಯ್ಕೆ ಮಾಡಬಹುದು. ಡೆಬ್ಟ್ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದರಿಂದ ಹಣದುಬ್ಬರ ವೆಚ್ಚ, ತೆರಿಗೆ ಕಡಿತದ ಪರಿಣಾಮಗಳನ್ನು ಸರಿಪಡಿಸಿ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.
ಸುಕನ್ಯಾ ಸಮೃದ್ಧಿ ಯೋಜನೆ
ಇದು ಸಂಪ್ರದಾಯಶೀಲ ಹೂಡಿಕೆದಾರರಿಗೆ ಉತ್ತಮ ಆಯ್ಕೆ ಎಂದೇ ಹೇಳಬಹುದು. ಈ ಖಾತೆಯನ್ನು ತೆರೆಯಲು ಹುಡುಗಿಗೆ ಗರಿಷ್ಠ 10 ವರ್ಷ ವಯಸ್ಸಾಗಿರಬೇಕು. ಈ ಹೂಡಿಕೆಯ ೮೦ಸಿ ಸೆಕ್ಷನ್ ಅಡಿಯಲ್ಲಿ ಒಂದು ವರ್ಷದಲ್ಲಿ ರೂ. 1.5 ಲಕ್ಷದವರೆಗೆ ನೀವು ಮೊತ್ತವನ್ನು ಪಡೆಯಬಹುದಾಗಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಂತೆಯೇ ಸುಕನ್ಯಾ ಸಮೃದ್ಧಿ ಯೋಜನೆ ಸಹ ತೆರಿಗೆ ಮುಕ್ತವಾಗಿದ್ದು, ಹೆಚ್ಚು ಲಾಭಗಳನ್ನು ಪಡೆಯಬಹುದು. ಈ ಯೋಜನೆ ಅಡಿಯಲ್ಲಿ ವಾರ್ಷಿಕವಾಗಿ 8.1%ರಷ್ಟು ಬಡ್ಡಿಯನ್ನು ಘೋಷಿಸಲಾಗಿದ್ದು, ಸರ್ಕಾರವೇ ಇದರ ಬಡ್ಡಿದರದ ಪ್ರಮಾಣವನ್ನು ನಿರ್ಣಯಿಸುತ್ತದೆ. ಮೇಲಿನ ಬಡ್ಡಿದರದಂತೆ ನೀವು ವರ್ಷಕ್ಕೆ ರೂ. ೧.೫ ಲಕ್ಷ ಹೂಡಿಕೆ ಮಾಡಿದರೆ ೧೮ ವರ್ಷಗಳ ಸಂದರ್ಭದಲ್ಲಿ ನಿಮಗೆ ರೂ. ೫೭ ಲಕ್ಷ ಸಿಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಮಗುವಿನ ಉನ್ನತ ಶಿಕ್ಷಣದ ಸಂದರ್ಭದಲ್ಲಿ ಇದರ ಪ್ರಯೋಜನ ಪಡೆಯಲು ಸಾಧ್ಯ. ಸುಕನ್ಯಾ ಸಮೃದ್ಧಿ ಯೋಜನೆ: ಸರ್ಕಾರದ 8 ಹೊಸ ನಿಯಮಗಳು ಅನ್ವಯ
ಈಕ್ವಿಟಿ ಮ್ಯೂಚುವಲ್ ಫಂಡ್
ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದು ತೊಂದರೆದಾಯಕ ಆಗಿದ್ದರೂ ಇದು ಹಣದುಬ್ಬರವನ್ನು ನಿಗ್ರಹಿಸಿ ಅತ್ಯುತ್ತಮವಾದ ಆದಾಯವನ್ನೇ ತಂದುಕೊಡುತ್ತದೆ. ಜುಲೈ ೧೭, ೨೦೧೬ಕ್ಕೆ ಹತ್ತು ವರ್ಷಗಳ ಮುಕ್ತಾಯಕ್ಕೆ ವಾರ್ಷಿಕ ರಿಟರ್ನ್ ಶೇ. ೧೧ರಷ್ಟಿದೆ ಎಂದು ಸೆನ್ಸೆಕ್ಸ್ ಹೇಳಿದೆ. ಈಕ್ವಿಟಿ ಮೇಲಿನ ಆದಾಯ ತೆರಿಗೆ ಮುಕ್ತವಾಗಿದ್ದು, ಸ್ಥಿರ ಠೇವಣಿಗಳಿಗಿಂತಲೂ ಉತ್ತಮವಾಗಿದೆ. ಸ್ಥಿರ ಠೇವಣಿಗಳ ಮೇಲೆ ಪ್ರಸ್ತುತ ಶೇ.೭.೭ರಷ್ಟು ವಾರ್ಷಿಕ ಬಡ್ಡದರ ಇದೆ. ಹೀಗಾಗಿ ಈಕ್ವಿಟಿ ಮೇಲೆ ಹೂಡಿಕೆ ಮಾಡಲು ಬಯಸಿದ್ದಲ್ಲಿ ತಡ ಮಾಡದೆ ಮಾಡುವುದು ಉತ್ತಮ. ಇದರಿಂದ ಉತ್ತಮ ಲಾಭ ಸಿಗುವುದಂತು ಗ್ಯಾರಂಟಿ.
ಸಮತೋಲಿತ ನಿಧಿ
ಇವು ಮ್ಯೂಚುವಲ್ ಫಂಡ್ ಗಳಾಗಿದ್ದು 65%ರಷ್ಟು ಆಸ್ತಿ ಮೇಲೆ ಮತ್ತು ಇನ್ನುಳಿದವನ್ನು ಸಾಲ ಪತ್ರಗಳ ಮೇಲೆ ಈಕ್ವಿಟಿ ಹೂಡಿಕೆ ಮಾಡಬಹುದಾಗಿದೆ. ಮುಖ್ಯವಾಗಿ ತೆರಿಗೆ ಉದ್ದೇಶಗಳಿಗಾಗಿ ಈಕ್ವಿಟಿ ಫಂಡ್ ಗಳನ್ನು ನಿರ್ಧರಿಸಲಾಗುತ್ತದೆ. ಇವುಗಳಿಗೆ ಸ್ವಲ್ಪ ಕಡಿಮೆ ಪ್ರಾಮುಖ್ಯತೆ ಇದ್ದರೂ ಸಂಪ್ರದಾಯಸ್ಥರಿಗೆ ಇದು ಅತ್ಯುತ್ತಮ ಹೂಡಿಕೆಯ ಆಯ್ಕೆಯಾಗಿದೆ.
ವಿಮೆ/ಇನ್ಸೂರೆನ್ಸ್
ದಂಪತಿಗಳು ತಮ್ಮ ಹೆಸರಿನಲ್ಲಿ ಪ್ರತ್ಯೇಕ ಅವಧಿಯ ವಿಮೆಗಳನ್ನು ಹೊಂದಿರಬೇಕು. ಅಲ್ಲದೆ ಎಲ್ಐಸಿ ವಿಮೆ ಮಾಡಿಸಿಕೊಳ್ಳುವುದರಿಂದ ಅಗತ್ಯ ಸಂದರ್ಭದಲ್ಲಿ ಆಪತ್ ಬಾಂಧವನಾಗಿ ಸಹಾಯಕ್ಕೆ ಬರುತ್ತದೆ. ದಂಪತಿಗಳಿಗಾಗಿಯೇ ಅನೇಕ ಕಂಪನಿಗಳು ವಿಭಿನ್ನ ಅವಧಿಯ ವಿಮೆಗಳನ್ನು ಪ್ರಾರಂಭಿಸಿದ್ದು ಇವುಗಳನ್ನು ಮಾಡಿಸುವುದರಿಂದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ತುಂಬಾ ಉಪಯೋಗಕಾರಿ ಅಗಬಲ್ಲದು.
ಬಂಗಾರ ಖರೀದಿ
ಮಕ್ಕಳ ಭವಿಷ್ಯಕ್ಕಾಗಿ ಪಾಲಕರು ಮುಂಜಾಗ್ರತಾ ಕ್ರಮ ವಹಿಸುವುದು ತುಂಬಾ ಮುಖ್ಯ. ಅದರಲ್ಲೂ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು ಹಣ ತಗಲುವುದರಿಂದ ಪ್ರತ್ಯೇಕವಾಗಿ ಹಣ ತೆಗೆದಿಡುವುದು ಮುಂಜಾಗ್ರತೆ ದೃಷ್ಟಿಯಿಂದ ಒಳ್ಳೆಯದು. ಇದರಿಂದಾಗಿ ಬಂಗಾರವನ್ನು ಮಕ್ಕಳ ಹೆಸರಲಿ ಖರೀದಿ ಮಾಡಿಡುವುದರಿಂದ ಕಷ್ಟಕರ ಸಂದರ್ಭದಲ್ಲಿ ಅನುಕೂಲಕ್ಕೆ ಬರುತ್ತದೆ.
ಇದರಿಂದಾಗಿ ನಂತರದ ಹಂತಗಳಲ್ಲಿ ಭರಿಸಬೇಕಾಗಿ ಬರುವ ಭಾರಿ ಮೊತ್ತಗಳಿಂದ ತಪ್ಪಿಸಿಕೊಳ್ಳಬಹುದು.