ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಜನವರಿ 22 ರಂದು ಮಹಾಮಸ್ತಕಾಭಿಷೇಕ ನಡೆಯಲಿದೆ. ಈ ದಿನದ ವಿಮಾನಯಾನ ಟಿಕೆಟ್ಗಳು ಈಗಲೇ ಫುಲ್ ಸೇಲ್ ಆಗಿದೆ. ಐಟಿ ಹಬ್ನಿಂದ ಸಾವಿರಾರು ಭಕ್ತರು ಅಯೋಧ್ಯೆಗೆ ಭೇಟಿ ನೀಡುವ ನಿರೀಕ್ಷೆಯಿದೆ.
ಈ ನಡುವೆ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೌದು, ಜನವರಿ 20 ರಂದು ಬೆಂಗಳೂರಿನಿಂದ ಅಯೋಧ್ಯೆಗೆ ಏಕಮುಖ ವಿಮಾನಕ್ಕೆ ಅಗ್ಗದ ಟಿಕೆಟ್ ದರ 24,000 ರೂಪಾಯಿ ಆಗಿದೆ. ಇದು ಕಡಿಮೆಯೇ ಇದಕ್ಕಿಂತಲೂ ಭಾರೀ ದರ ಏರಿಕೆಯಾಗಿದೆ. ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಆ ವಾರಾಂತ್ಯದ ಬಹುತೇಕ ವಿಮಾನ ಟಿಕೆಟ್ಗಳು ಬಹುತೇಕ ಮಾರಾಟವಾಗಿದೆ. ಈ ಲೇಖನ ಪ್ರಕಟವಾಗುವ ಸಮಯದಲ್ಲಿ ಬೆರಳೆಣಿಕೆಯ ಸೀಟುಗಳು ಮಾತ್ರ ಲಭ್ಯವಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಜನವರಿ 20 ರಂದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಡುವ ಮತ್ತು ಅಹಮದಾಬಾದ್ನಲ್ಲಿ ಐದು ಗಂಟೆಗಳ ರೆಸ್ಟ್ ಟೈಮ್ ನಂತರ ರಾತ್ರಿ 11 ಗಂಟೆಗೆ ಅಯೋಧ್ಯೆಗೆ ತಲುಪುವ ವಿಮಾನಕ್ಕೆ ಟಿಕೆಟ್ ದರವು ಶೇಕಡ 395 ರಷ್ಟು ಹೆಚ್ಚಳವಾಗಿ, ಬೆಲೆಯು 29,700 ರೂಪಾಯಿಗೆ ತಲುಪಿದೆ. ಅಂದರೆ 30 ಸಾವಿರಕ್ಕೆ ಬರೀ 300 ರೂಪಾಯಿ ಕಡಿಮೆಯಷ್ಟೆ!
ಈ ಮಹಾಮಸ್ತಕಾಭಿಷೇಕವು ಕೇವಲ ಆಹ್ವಾನಿತರನ್ನು ಒಳಗೊಂಡಿರುವ ಸಮಾರಂಭವಾಗಿದ್ದರೂ ಸಹ, ಸಾಮಾನ್ಯ ಜನರು ತಮ್ಮ ಅಯೋಧ್ಯೆ ಪ್ರವಾಸವನ್ನು ಸವಿಯಲು ಎಲ್ಲ ಪ್ಲ್ಯಾನ್ ಮಾಡಿಕೊಂಡು, ಈಗಾಗಲೇ ಅಯೋಧ್ಯೆಗೆ ಧಾವಿಸುತ್ತಿದ್ದಾರೆ.
ಟಿಕೆಟ್ ದರ ಯಾವ ದಿನ ಎಷ್ಟಿದೆ?
ಟಿಕೆಟಿಂಗ್ ಏಜೆನ್ಸಿಗಳ ಪ್ರಕಾರ, ಬೆಂಗಳೂರು-ಅಯೋಧ್ಯೆ ವಿಮಾನ ಟಿಕೆಟ್ಗಳು ಶನಿವಾರ, ಜನವರಿ 20, ನಂತರ ಶುಕ್ರವಾರ, ಜನವರಿ 19 ಮತ್ತು ಜನವರಿ 21 ರ ಭಾನುವಾರದಂದು ಅತ್ಯಂತ ದುಬಾರಿಯಾಗಿದೆ. ಜನವರಿ 19 ಕ್ಕೆ, ವಿಮಾನ ಟಿಕೆಟ್ ದರ 21,500 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಜನವರಿ 21ಕ್ಕೆ ಟಿಕೆಟ್ ದರಗಳು 10,000 ರೂಪಾಯಿಯಿಂದ ಪ್ರಾರಂಭವಾಗುತ್ತದೆ.
ಈ ಹಿಂದೆ ಟಿಕೆಟ್ ದರ ಎಷ್ಟಿತ್ತು?
ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ತಿಂಗಳು ವಿಮಾನ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಏಕಮುಖ ವಿಮಾನ ಟಿಕೆಟ್ಗಳ ಬೆಲೆ ಸುಮಾರು 6,000 ರೂಪಾಯಿ ಆಗಿತ್ತು. ದೇವಸ್ಥಾನ ತೆರೆದ ನಂತರವೂ ಒಂದು ತಿಂಗಳವರೆಗೆ ವಿಮಾನ ಟಿಕೆಟ್ ದರ ಸುಮಾರು 6,000 ರೂಪಾಯಿ ಆಗಿದೆ. ಆದರೆ ಜನವರಿ 19-21 ರಿಂದ ಪ್ರಾರಂಭವಾಗುವ ವಾರಾಂತ್ಯದ ಟಿಕೆಟ್ ದರಗಳು ಭಾರೀ ಏರಿಕೆಯನ್ನು ಕಂಡಿದೆ.
ಪ್ರಸ್ತುತ ಬೆಂಗಳೂರು ಮತ್ತು ಅಯೋಧ್ಯೆ ನಡುವೆ ಯಾವುದೇ ನೇರ ವಿಮಾನಗಳಿಲ್ಲದಿದ್ದರೂ, ಏರ್ ಇಂಡಿಯಾ ಎಕ್ಸ್ಪ್ರೆಸ್ ಜನವರಿ 17 ರಿಂದ ಪ್ರತಿ ಸೋಮವಾರ, ಬುಧವಾರ ಮತ್ತು ಗುರುವಾರದಂದು ಮೂರು ಬಾರಿ ವಾರಕ್ಕೊಮ್ಮೆ ನೇರ ವಿಮಾನಗಳನ್ನು ನಿರ್ವಹಿಸಲಿದೆ.
ಹೆಚ್ಚಿನ ಪ್ರಯಾಣಿಕರು ಅಯೋಧ್ಯೆಯನ್ನು ತಲುಪುವ ಮಾರ್ಗದಲ್ಲಿ ಕನಿಷ್ಠ ಆರು-ಎಂಟು ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಕನಿಷ್ಠ ಒಂದು ನಿಲುಗಡೆ ಹೊಸ ದೆಹಲಿ, ಅಥವಾ ಗ್ವಾಲಿಯರ್, ಅಥವಾ ಮುಂಬೈ, ಅಥವಾ ಅಹಮದಾಬಾದ್ನಲ್ಲಿ ಇರುತ್ತದೆ.
ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಬೆಂಗಳೂರಿನಿಂದ ಅಯೋಧ್ಯೆಗೆ ಸಂಪರ್ಕವನ್ನು ಒದಗಿಸುವ ವಿಮಾನಯಾನ ಸಂಸ್ಥೆಗಳಾಗಿವೆ. ಏರ್ ಇಂಡಿಯಾ ಎಕ್ಸ್ಪ್ರೆಸ್ನ ಮುಖ್ಯ ವಾಣಿಜ್ಯ ಅಧಿಕಾರಿ ಅಂಕುರ್ ಗಾರ್ಗ್, "ನಮ್ಮ ನೆಟ್ವರ್ಕ್ನಲ್ಲಿ ಪ್ರಮುಖ ಕೇಂದ್ರಗಳಾಗಿ, ಬೆಂಗಳೂರು ಅಯೋಧ್ಯೆಗೆ ಸಂಪರ್ಕ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ. ದಕ್ಷಿಣ ಭಾರತದ ಯಾತ್ರಾರ್ಥಿಗಳಿಗೆ ಅನುಕೂಲಕರ ಏಕ ನಿಲುಗಡೆ ಪ್ರವಾಸವನ್ನು ಒದಗಿಸುತ್ತದೆ," ಎಂದು ಹೇಳಿದರು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications