ಒಟಿಪಿ ಇಲ್ಲದೆಯೇ ಸ್ವಯಂಚಾಲಿತವಾಗಿ ಪಾವತಿ ಮಾಡುವ ಮಿತಿಯನ್ನು ಆರ್ಬಿಐ ಏರಿಕೆ ಮಾಡಿದೆ. ಒಟಿಪಿ ರಹಿತ ಆಟೋ ಪೇಮೆಂಟ್ ಮಿತಿಯನ್ನು ಆರ್ಬಿಐ 15000 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಇನ್ನು ಮುಂದೆ ಬ್ಯಾಂಕ್ ಗ್ರಾಹಕರು 15000 ರೂಪಾಯಿವರೆಗಿನ ಆಟೋ ಪೇಮೆಂಟ್ಗಳನ್ನು ಒಟಿಪಿ ಇಲ್ಲದೆಯೇ ಮಾಡಬಹುದು. ಗ್ರಾಹಕರು 15000 ರೂಪಾಯಿವರೆಗಿನ ಈ ಆಟೋ ಪೇಮೆಂಟ್ ಅನ್ನು ಒಟಿಪಿ ಮೂಲಕ ದೃಢೀಕರಿಸಬೇಕಾಗಿಲ್ಲ ಎಂದು ಆರ್ಬಿಐ ಪ್ರಕಟಿಸಿದೆ.
ಈ ಬಗ್ಗೆ ಆರ್ಬಿಐ ಶೀಘ್ರವಾಗಿಯೇ ವಿವರವಾದ ಸೂಚನೆಯ್ನನು ನೀಡಲಿದೆ ಎಂದು ತಿಳಿಸಿದೆ. ಈ ಹಿಂದೆ ಆಟೋ ಪೇಮೆಂಟ್ ಎಂಬ ವ್ಯವಸ್ಥೆ ಇರಲಿಲ್ಲ. ಆದರೆ 2019ರಿಂದ ಈ ವಿಧಾನ ಜಾರಿಗೆ ಬಂದಿದೆ. ಇದರಿಂದಾಗಿ ಪ್ರತಿ ತಿಂಗಳು ನಿಮ್ಮ ಇಎಂಐ, ವಿಮೆ ಪ್ರೀಮಿಯಂ ಸ್ವಯಂಚಾಲಿತವಾಗಿ ಡೆಬಿಟ್ ಆಗುತ್ತದೆ.

ಇನ್ನು ಈ ಹಿಂದೆಯೇ ಆಟೋ ಡೆಬಿಟ್ ಮಿತಿಯನ್ನು ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಆರ್ಬಿಐ ಚರ್ಚಿಸಿ ಮಿತಿಯನ್ನು ಹೆಚ್ಚಳ ಮಾಡಿದೆ. ಚಂದಾದಾರಿಕೆಗಳು, ವಿಮಾ ಪ್ರೀಮಿಯಂ, ಶಿಕ್ಷಣ ಶುಲ್ಕ ಮೊದಲಾದ ದೊಡ್ಡ ಮೌಲ್ಯದ ಪಾವತಿಗಳನ್ನು ಸುಲಭಗೊಳಿಸಲು ಮಿತಿ ಹೆಚ್ಚಳ ಮಾಡುವಂತೆ ಹಲವಾರು ಮಂದಿ ಆರ್ಬಿಐಗೆ ಮನವಿ ಮಾಡಿದ್ದರು.
ಈ ಹಿಂದೆ ಎಷ್ಟಿತ್ತು ಮಿತಿ?
ಈ ಹಿಂದೆ ಐದು ಸಾವಿರದವರೆಗಿನ ಮೊತ್ತವು ಆಟೋ ಡೆಬಿಟ್ ಆಗುತ್ತಿತ್ತು. ಅದಕ್ಕಿಂತ ಅಧಿಕ ಮೊತ್ತ ಪೇಮೆಂಟ್ ಆಗಲು ಗ್ರಾಹಕರು ಒಟಿಪಿ ನಮೂದಿಸುವ ಅಗತ್ಯ ಇತ್ತು. ಆದರೆ ಈಗ ಮಿತಿಯನ್ನು ಹೆಚ್ಚಳ ಮಾಡಲಾಗಿದೆ.
ಇನ್ನು ನೀವು ಈ ಆಟೋ ಪೇಮೆಂಟ್ ಅನ್ನು ನಿಷ್ಕ್ರೀಯ ಕೂಡಾ ಮಾಡುವ ಆಯ್ಕೆ ನಿಮಗೆ ಇದೆ. ನಿಮ್ಮ ಬ್ಯಾಂಕ್ನಿಂದ ಸಾಲದ, ವಿಮೆ ಅಥವಾ ಚಂದಾದಾರಿಕೆಯ ಮೊತ್ತವು ಆಟೋ ಡೆಬಿಟ್ ಆಗಬಾರದೆಂದರೆ ಅದನ್ನು ಬದಲಾವಣೆ ಮಾಡುವ ಆಯ್ಕೆಯು ನಿಮಗೆ ಸಂಸ್ಥೆಗಳು ನೀಡುತ್ತದೆ.
ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಆಗುವುದಕ್ಕೂ 24 ಗಂಟೆಗಳ ಮುನ್ನವೇ ನಿಮಗೆ ಈ ಬಗ್ಗೆ ಸಂದೇಶ ಬರಲಿದೆ. ಈ ವೇಳೆ ನಿಮ್ಮ ಖಾತೆಯಲ್ಲಿ ವಹಿವಾಟಿಗೆ ಬೇಕಾದಷ್ಟು ಮೊತ್ತ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಇಲ್ಲವಾದರೆ ನಿಮಗೆ ಶುಲ್ಕ ಬೀಳುವ ಸಾಧ್ಯತೆ ಇದೆ.
ಆರ್ಬಿಐ ರುಪೇ ಕ್ರೆಡಿಟ್ ಕಾರ್ಡ್ ಬಳಸಿ ಯುಪಿಐ ಪಾವತಿ ಮಾಡಲು ಕೂಡಾ ಅವಕಾಶ ನೀಡಿದೆ. ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸುವ ಸಂದರ್ಭದಲ್ಲಿ ಇದನ್ನು ಬಳಕೆ ಮಾಡಬಹುದಾಗಿದೆ. ಗ್ರಾಮೀಣ ಹಾಗೂ ನಗರ ಸಹಕಾರಿ ಬ್ಯಾಂಕ್ಗಳಲ್ಲಿ ಗೃಹ ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ.
ಕಳೆದ ದಶಕದಿಂದ ಗೃಹ ಸಾಲದ ಬೇಡಿಕೆ ಅಧಿಕವಾದ ಕಾರಣದಿಂದಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಆರ್ಬಿಐ ವಸತಿ ವಲಯಕ್ಕೆ ಸಾಲದ ಹರಿವು ಅಧಿಕ ಮಾಡುವ ನಿಟ್ಟಿನಲ್ಲಿ ವಸತಿ ಯೋಜನೆಗೆ ಹಣಕಾಸು ವಿಸ್ತರಣೆ ಮಾಡಲು ಗ್ರಾಮೀಣ ಸಹಕಾರಿ ಬ್ಯಾಂಕ್ಗಳಿಗೆ ಅನುಮತಿ ನೀಡಿದೆ. ಗ್ರಾಮೀಣ ಬ್ಯಾಂಕ್ಗಳು ಈಗ ವಾಣಿಜ್ಯ ರಿಯಲ್ ಎಸ್ಟೇಟ್ ಅಥವಾ ಗೃಹ ಯೋಜನೆಗೆ ತಮ್ಮ ಒಟ್ಟು ಆಸ್ತಿಯ ಶೇಕಡ ಐದರಷ್ಟು ಹಣವನ್ನು ಸಾಲವಾಗಿ ನೀಡಬಹುದು.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications