ರಾಷ್ಟ್ರೀಯ ಪಿಂಚಣಿ ಯೋಜನೆಯು ನಿವೃತ್ತಿಯ ಸಂದರ್ಭದಲ್ಲಿ ಒತ್ತಡರಹಿತವಾದ ಪರಿಹಾರವನ್ನು ನೀಡುತ್ತದೆ. ಮಾತ್ರವಲ್ಲದೇ ಮಾಸಿಕ ಪಿಂಚಣಿಗಳನ್ನು ಸುಮಾರು 1 ಲಕ್ಷ ರೂಪಾಯಿವರೆಗೂ ಒದಗಿಸುತ್ತದೆ. ಸರ್ಕಾರಿ, ಖಾಸಗಿ ವಲಯದ ಉದ್ಯೋಗಿಯಾಗಿರಲಿ ಅಥವಾ ಬೇರೆ ಯಾರೇ ಆಗಿರಲಿ ಈ ಯೋಜನೆಯಲ್ಲಿ ಮುಕ್ತವಾಗಿ ಹೂಡಿಕೆ ಮಾಡಬಹುದಾಗಿದೆ.
18 ರಿಂದ 70 ವರ್ಷ ವಯಸ್ಸಿನ ನಾಗರಿಕರು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಭಾಗಿಗಳಾಗಬಹುದು. ಉದ್ಯೋಗಸ್ಥರಿಗೆ ನಿವೃತ್ತಿಯಾಗುವುದು ಮಾನಸಿಕವಾಗಿ ಒತ್ತಡ ನೀಡುವುದರಿಂದ ಈ ಯೋಜನೆ ಮುಂದೆ ಆರ್ಥಿಕ ಸಬಲತೆಗೆ ಆದರ್ಶ ನಿವೃತ್ತಿಯ ಹೂಡಿಕೆಯ ಆಯ್ಕೆಯಾಗಿದೆ.

ಎನ್ಪಿಎಸ್ನ ಪ್ರಮುಖ ಅಂಶಗಳು :
ಎಲ್ಲರಿಗೂ ಮುಕ್ತ : ಇದು ಕೇವಲ ಸರ್ಕಾರಿ ನೌಕರರಿಗೆ ಸೀಮಿತವಾಗಿರದೆ, ಖಾಸಗಿ ವಲಯದ ಕೆಲಸಗಾರರು ಮತ್ತು ವ್ಯಕ್ತಿಗಳು ಎನ್ಪಿಎಸ್ನಲ್ಲಿ ಹೂಡಿಕೆ ಮಾಡಬಹುದಾಗಿದೆ.
ಎನ್ಪಿಎಸ್ ಯೋಜನೆಗೆ ವಯೋಮಿತಿ: 18 ರಿಂದ 70 ವರ್ಷದೊಳಗಿನ ನಾಗರಿಕರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಭಾಗವಹಿಸಬಹುದು.
ದೀರ್ಘಾವಧಿಯ ಹೂಡಿಕೆ: ಎನ್ಪಿಎಸ್ ಸ್ವಯಂಪ್ರೇರಿತವಾಗಿರುವ ಮತ್ತು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದ್ದು, ಇದು ಆರ್ಥಿಕ ಭದ್ರತೆಯನ್ನು ಖಚಿತಪಡಿಸುತ್ತದೆ.
ಗ್ಲೋಬಲ್ ಇನ್ವೆಸ್ಟ್ ಮೆಂಟ್: ಎನ್ಪಿಎಸ್ ಇನ್ನೊಂದು ಅನುಕೂಲವೆಂದರೆ ಈ ಪಿಂಚಣಿ ಯೋಜನೆಯಲ್ಲಿ ಎನ್ಆರ್ಐಗಳು ಕೂಡ ಹೂಡಿಕೆ ಮಾಡಬಹುದು.
ಅವಧಿ: ಪಿಂಚಣಿ ಯೋಜನೆಯಾಗಿ, 60 ವರ್ಷದವರೆಗೆ ಹೂಡಿಕೆಯನ್ನು ಮುಂದುವರಿಸಬೇಕು ಅಥವಾ 20 ವರ್ಷಗಳ ಮೆಚ್ಯೂರಿಟಿ ಅವಧಿ ಅಗತ್ಯವಿದೆ.
ಹೂಡಿಕೆಯ ಮೇಲಿನ ಲಾಭ: ಈ ಯೋಜನೆಯು ಶೇಕಡ 9 ರಿಂದ ಶೇಕಡ 12 ವರೆಗಿನ ಸರಾಸರಿ ಆದಾಯವನ್ನು ನೀಡುತ್ತದೆ.
ಮಾಸಿಕ ಪಿಂಚಣಿ ಲೆಕ್ಕಾಚಾರ: 30 ವರ್ಷಗಳವರೆಗೆ ಮಾಸಿಕ 10,000 ರೂಪಾಯಿ ಹೂಡಿಕೆ ಮಾಡುವುದರಿಂದ 1 ಲಕ್ಷ ರೂಪಾಯಿ ಮಾಸಿಕ ಪಿಂಚಣಿ ಸಿಗುತ್ತದೆ.
ಈಕ್ವಿಟಿ ಎಕ್ಸ್ಫೋಸರ್ (Equity exposure): ಈ ಯೋಜನೆಯು ಶೇಕಡ 50 ರಿಂದ ಶೇಕಡ 75 ರ ರೇಂಜ್ನಲ್ಲಿ ಈಕ್ವಿಟಿ ಎಕ್ಸ್ಫೋಸರ್ ಅಥವಾ Equity exposure ಒದಗಿಸುತ್ತದೆ.
ತೆರಿಗೆ ಪ್ರಯೋಜನಗಳು: ಸೆಕ್ಷನ್ 80ಸಿಸಿಡಿ (1) ಅಡಿಯಲ್ಲಿ 50,000 ರೂಪಾಯಿ ಮತ್ತು ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷ ರೂಪಾಯಿವರೆಗೆ ತೆರಿಗೆ ಉಳಿತಾಯ ಮಾಡಬಹುದು.
ಆರ್ಥಿಕ ಸ್ವಾತಂತ್ರ್ಯ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುವ ವಿಶ್ವಾಸಾರ್ಹ ಆಯ್ಕೆಯಾದ ರಾಷ್ಟ್ರೀಯ ಪಿಂಚಣಿ ಯೋಜನೆಯೊಂದಿಗೆ ನಿಮ್ಮ ನಿವೃತ್ತಿಯನ್ನು ಸುಭದ್ರಗೊಳಿಸಬಹುದು.
More From GoodReturns

Retirement with Savings Tips: ನಿವೃತ್ತಿ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ ಈ ಸ್ಕೀಮ್ನಲ್ಲಿ ಇನ್ವೆಸ್ಟ್ ಮಾಡಿ

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ



Click it and Unblock the Notifications