ಭಾರತೀಯ ಅಂಚೆ ಇಲಾಖೆಯು ಹಲವಾರು ಉಳಿತಾಯ ಯೋಜನೆಗಳನ್ನು ಪರಿಚಯಿಸಿವೆ. ಅಂಚೆ ಕಚೇರಿಗಳ ಮೂಲಕ ಸಣ್ಣ ಉಳಿತಾಯ ಖಾತೆಯನ್ನು ಪ್ರಾರಂಭಿಸಬಹುದು. ಈ ಉಳಿತಾಯ ಯೋಜನೆಗಳಡಿ ಗ್ರಾಹಕರು ತಮ್ಮ ಠೇವಣಿಗಳಿಗೆ ಉತ್ತಮ ರಿಟರ್ನ್ಸ್ ಪಡೆಯುವ ಜತೆಗೆ ತೆರಿಗೆಯನ್ನು ಕೂಡ ಉಳಿಸಬಹುದಾಗಿದೆ. ತೆರಿಗೆದಾರರು ಇದರಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದರೆ ವಿನಾಯತಿಯಡಿ ತೆರಿಗೆಯನ್ನು ಕೂಡ ಉಳಿಸಬಹುದು.
ಈ ಅಂಚೆ ಕಚೇರಿ ಉಳಿತಾಯ ಕ್ರಮವು ನಿಮಗೆ ಹೆಚ್ಚಿನ ತೆರಿಗೆಯನ್ನು ಉಳಿಸಲು ನೆರವಾಗುವ ಜತೆಗೆ ಶೇಕಡ 7ರಷ್ಟು ರಿಟರ್ನ್ ನೀಡುತ್ತದೆ. ಅಲ್ಲದೆ ಉಳಿತಾಯ ಯೋಜನೆ ಕೂಡ 5 ವರ್ಷದಲ್ಲಿ ಮೆಚ್ಯೂರಿಟಿಯಾಗುತ್ತದೆ. ಈ ಯೋಜನೆಯು ವಿವಿಧ ಅವಧಿಯ ಆಯ್ಕೆಗಳೊಂದಿಗಿನ ಅಂಚೆ ಕಚೇರಿ ಅವಧಿ ಠೇವಣಿಯಾಗಿದೆ.

ಅವಧಿ ಠೇವಣಿಗಳಿಗೆ ಬಡ್ಡಿ ದರ
ಅವಧಿಗೆ ಅನುಗುಣವಾಗಿ ಅವಧಿ ಠೇವಣಿಯು ಶೇಕಡ 6.6ರಿಂದ ಶೇಕಡ 7ರವರೆಗೆ ಬಡ್ಡಿ ದರವನ್ನು ನೀಡುತ್ತದೆ. ಒಂದು ವರ್ಷದ ಅವಧಿ ಠೇವಣಿಗೆ ಅಂಚೆ ಕಚೇರಿಯು ಶೇಕಡ 6.6ರಷ್ಟು ಬಡ್ಡಿ ನೀಡುತ್ತದೆ. ಎರಡು ಹಾಗೂ ಮೂರು ವರ್ಷಗಳ ಅವಧಿ ಠೇವಣಿಗೆ ಶೇಕಡ 6.8 ಮತ್ತು ಶೇಕಡ 6.9ರಷ್ಟು ಬಡ್ಡಿ ಒದಗಿಸುತ್ತದೆ. ಐದು ವರ್ಷಗಳ ಅವಧಿ ಠೇವಣಿಗೂ ಶೇಕಡ 7ರಷ್ಟು ಬಡ್ಡಿಯನ್ನು ಗಳಿಸಬಹುದು.
ಯಾವ ಸಮಯದಲ್ಲಿ ತೆರಿಗೆ ಉಳಿಸಬಹುದು?
ಅವಧಿ ಠೇವಣಿಗಳ ವಿಷಯಕ್ಕೆ ಬಂದಾಗ, ಅವು 1, 2, 3 ಹಾಗೂ 5 ವರ್ಷಗಳಿಗೆ ಲಭ್ಯವಿದೆ. ಈ ಅಂಚೆ ಕಚೇರಿ ಅವಧಿ ಠೇವಣಿಗಳಿಗೆ ಹಲವು ರೀತಿಯ ಬಡ್ಡಿ ದರವನ್ನು ಒದಗಿಸಲಾಗುತ್ತಿದೆ. ಐದು ವರ್ಷಗಳ ಅವಧಿ ಠೇವಣಿಗಳ ಮೇಲೆ ತೆರಿಗೆ ಉಳಿತಾಯದ ಅನುಕೂಲ ಲಭ್ಯವಿದೆ. 1961ರ ಆದಾಯ ತೆರಿಗೆ ಕಾಯ್ದೆ 80C ಸೆಕ್ಷನ್ನಡಿ ಈ ತೆರಿಗೆ ವಿನಾಯಿತಿ ದೊರೆಯುತ್ತದೆ.
ಎಷ್ಟು ತೆರಿಗೆ ಉಳಿಸಬಹುದು?
1961ರ ಆದಾಯ ತೆರಿಗೆ ಸೆಕ್ಷನ್ 80C 1.5 ಲಕ್ಷ ರೂಪಾಯಿವರೆಗೆ ತೆರಿಗೆ ಉಳಿತಾಯಕ್ಕೆ ಅವಕಾಶ ನೀಡುತ್ತದೆ. ಇದು ಸರ್ಕಾರದ ಹಲವಾರು ಕಾರ್ಯಕ್ರಮಗಳಿಂದ ಒದಗಿಸುವ ಅತ್ಯುತ್ತಮ ತೆರಿಗೆ ಉಳಿಸುವ ಪರ್ಯಾಯವಾಗಿದೆ. ಐದು ವರ್ಷಗಳ ಅವಧಿಗೆ ಮಾಡಿದ ಹೂಡಿಕೆಗಳು ಮಾತ್ರ ಈ ತೆರಿಗೆ ಉಳಿತಾಯಕ್ಕೆ ಅರ್ಹತೆಯನ್ನು ಪಡೆಯುತ್ತದೆ ಎಂಬುದು ಗಮನಾರ್ಹ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications