ಭಾರತೀಯ ಅಂಚೆ ಇಲಾಖೆಯು ಗ್ರಾಹಕರ ಬೇಡಿಕೆಯಂತೆ ಅನೇಕ ವಿಧದ ಹಣ ಉಳಿತಾಯ ಯೋಜನೆಗಳನ್ನು ಪರಿಚಯಿಸಿದ್ದು, ಕೆಲವೊಂದು ಬಹಳ ಆಕರ್ಷಕವಾದ ಬಡ್ಡಿ ದರವನ್ನು ನೀಡುತ್ತವೆ. ಆ ಪೈಕಿ ತೆರಿಗೆ ಉಳಿತಾಯ ಯೋಜನೆಗಳು ಕೂಡ ಇದ್ದು, ಇಲ್ಲಿ ತೆರಿಗೆದಾರರಿಗೆ ಹೂಡಿಕೆ ಮಾಡುವುದರಿಂದ ತೆರಿಗೆ ರಿಯಾಯಿತಿ ಸೌಲಭ್ಯಗಳನ್ನು ಪಡೆಯಬಹುದು.
ಅಂತಹ ಅಂಚೆ ಇಲಾಖೆಗಳ ಸ್ಕೀಮ್ಗಳಲ್ಲಿ ಪಬ್ಲಿಕ್ ಫ್ರಾವಿಡೆಂಟ್ ಫಂಡ್ ಒಂದು ಸಣ್ಣ ರೀತಿಯ ಉಳಿತಾಯ ಯೋಜನೆಯಾಗಿದ್ದು, ಇದು ಶೇ.7.1ರಷ್ಟು ಬಡ್ಡಿ ದರವನ್ನು ನೀಡುವ ಜತೆಗೆ ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 80ಸಿ ಪ್ರಕಾರ 1.5 ಲಕ್ಷ ರೂ.ವರೆಗೆ ತೆರಿಗೆ ರಿಬೇಟ್ ಅನ್ನು ಕೂಡ ಒದಗಿಸುತ್ತದೆ. ಈ ಯೋಜನೆಯಲ್ಲಿ ನೀವು 15 ವರ್ಷಗಳವರೆಗೆ ಹೂಡಿಕೆ ಮಾಡಬಹುದಾಗಿದೆ.
ಅದೇ ರೀತಿ "ನ್ಯಾಷನಲ್ ಸೇವಿಂಗ್ಸ್ ಸ್ಕೀಮ್", ಮತ್ತೊಂದು 5 ವರ್ಷಗಳ ಉಳಿತಾಯ ಕಾರ್ಯಕ್ರಮವಾಗಿದ್ದು, ಇದು 1000ರೂ.ವಿನಿಂದ ಆರಂಭಗೊಂಡು ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಷ್ಟೇ ಮೊತ್ತದ ಹಣವನ್ನು ಒಂದು ಬಾರಿಗೆ ಹೂಡಿಕೆ ಮಾಡುವ ಸ್ಕೀಮ್ ಆಗಿದೆ. ಇದು ಕೂಡ ಶೇ.7ರಷ್ಟು ಬಡ್ಡಿ ಲಾಭವನ್ನು ನೀಡುವ ಜತೆಗೆ ಆದಾಯ ತೆರಿಗೆಯ ಸೆಕ್ಷನ್ 80ಸಿ ನಡಿ 1.5 ಲಕ್ಷ ರೂ. ತೆರಿಗೆ ರಿಯಾಯಿತಿ ಸೌಲಭ್ಯವನ್ನು ಒದಗಿಸುತ್ತದೆ.

ಇನ್ನು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟಿ ಸ್ಕೀಮ್ ಕೂಡಾ ಒಂದು, ಎರಡು, ಮೂರು ಅಥವಾ ಐದು ವರ್ಷಗಳ ಮೇಲಿನ ಅವಧಿಯ ಹೂಡಿಕೆಗೆ ಅವಕಾಶ ಕಲ್ಪಿಸುವ ಮೂಲಕ 5 ವರ್ಷಗಳಲ್ಲಿ ಶೇ.7ರಷ್ಟು ಬಡ್ಡಿಯನ್ನು ಒದಗಿಸುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ
ಹಾಗೆಯೇ ಹೂಡಿಕೆದಾರರು "ಸುಕನ್ಯಾ ಸಮೃದ್ಧಿ ಯೋಜನೆ"ಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಇದು ಶೇ.7.6ರಷ್ಟು ಬಡ್ಡಿ ದರವನ್ನು ನೀಡುವ ಜತೆಗೆ ಹೆಣ್ಣು ಮಗುವಿಗೆ 21 ವರ್ಷ ವಯಸ್ಸು ಆಗುವವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿಯೂ ಆದಾಯ ತೆರಿಗೆಯ ಸೆಕ್ಷನ್ 80ಸಿನಡಿ 1.5 ಲಕ್ಷ ರೂ.ಗಳ ತೆರಿಗೆ ಕಡಿತದ ಲಾಭ ಪಡೆಯಬಹುದು.
"ಹಿರಿಯ ನಾಗರಿಕರ ಉಳಿತಾಯ ಯೋಜನೆ"(ಎಸ್ಸಿಎಸ್ಎಸ್) ಹಿರಿಯ ನಾಗರಿಕರಿಗೆ ಪರಿಚಯಿಸಿರುವ ಜನಪ್ರಿಯ ಯೋಜನೆಯಾಗಿದೆ. ಇದು ಕೂಡ ಶೇ.8ರಷ್ಟು ಬಡ್ಡಿ ದರವನ್ನು ನೀಡುವ ಜತೆಗೆ 1.5 ಲಕ್ಷ ರೂ.ಗಳ ತೆರಿಗೆ ರಿಯಾಯಿತಿ ಕೂಡ ಒದಗಿಸುತ್ತದೆ. ಗ್ರಾಹಕರು ಈ ಯೋಜನೆಯಲ್ಲಿ 1000 ರೂ.ನಿಂದ ಪ್ರಾರಂಭಗೊಂಡು 30 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications