ಸ್ಥಿರತೆ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಹಾಗೂ ಸ್ವಾವಲಂಬಿಯಾಗುವುದು ಇಂದು ಮಹಿಳೆಯರಿಗೆ ಬಹಳ ಅವಶ್ಯಕವಾಗಿದೆ. ಮಾರ್ಚ್ 8ರಂದು ವಿಶ್ವ ಮಹಿಳಾ ದಿನಾಚರಣೆಯ ದಿನವಾಗಿದೆ. ಈ ದಿನದಂದು ಜಗತ್ತಿನೆಲ್ಲೆಡೆ ಸಾಧನೆ ಮಾಡಿದ, ಮಹತ್ವದ ಕೆಲಸ ಮಾಡಿದ ಮಹಿಳಾ ಸಾಧಕರನ್ನು ಗುರುತಿಸಲಾಗುತ್ತದೆ. ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಮತ್ತು ಆರ್ಥಿಕವಾಗಿ ಸಬಲರನ್ನಾಗಿಸುವುದು ವಿಶ್ವ ಮಹಿಳಾ ದಿನಾಚರಣೆಯ ಉದ್ಧೇಶವಾಗಿದೆ.
ದೀರ್ಘಾವಧಿಯ ಪ್ರಯೋಜನವನ್ನು ನೀಡುವ ಹಲವಾರು ಯೋಜನೆಗಳು ಹೆಣ್ಣುಮಕ್ಕಳಿಗಾಗಿಯೇ ಇವೆ. ಅವುಗಳಲ್ಲಿ ಸುಕನ್ಯಾ ಸಮೃದ್ದಿ ಯೋಜನೆಯು ಒಂದಾಗಿದೆ. ಸುಕನ್ಯಾ ಸಮೃದ್ದಿ ಯೋಜನೆ ಎಂದರೇನು ಎಂದು ನಾವು ತಿಳಿಯೋಣ. ಸುಕನ್ಯಾ ಸಮೃದ್ದಿ ಯೋಜನೆ (SSY)ಯನ್ನು 2015ರಲ್ಲಿ ಪ್ರಾರಂಭಿಸಲಾಯಿತು. ಇದು ಬೇಟಿ ಬಚಾವೋ, ಬೇಟಿ ಪಡವೋಅಭಿಯಾನದ ಅಡಿಯಲ್ಲಿ ಪ್ರಾರಂಭಿಸಲಾದ ಉಳಿತಾಯ ಯೋಜನೆಯಾಗಿದೆ.

ಈ ಯೋಜನೆಯ ಸಹಾಯದಿಂದ ಪೋಷಕರು ತಮ್ಮ ಹೆಣ್ಣು ಮಗುವಿಗೆ ಅಧಿಕೃತವಾಗಿರುವ ವಾಣಿಜ್ಯ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲೂ ಉಳಿತಾಯ ಖಾತೆ ತೆರೆಯಬಹುದು. ಸುಕನ್ಯಾ ಸಮೃದ್ದಿ ಯೋಜನೆಯು ಶೇಕಡ 7.6ರಷ್ಟು ಬಡ್ಡಿದರ ಹೊಂದಿದೆ. ಅಲ್ಲದೆ ನಿಮ್ಮ ಹೂಡಿಕೆ ಮತ್ತು ಅವಧಿಯನ್ನು ಆಧರಿಸಿ ಎಷ್ಟು ಆದಾಯ ಪಡೆಯಬಹುದು ಎಂದು ಲೆಕ್ಕಾಚಾರ ಹಾಕಲು ಸುಕನ್ಯಾ ಸಮೃದ್ದಿ ಯೋಜನೆ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು.
ಸುಕನ್ಯಾ ಸಮೃದ್ದಿ ಯೋಜನೆ ಬೇಕಾದ ಅರ್ಹತೆ:
ಹೆಣ್ಣು ಮಗು/ಬಾಲಕಿ ಭಾರತೀಯ ಪ್ರಜೆಯಾಗಿರಬೇಕು.
ವಯೋಮಿತಿಯ ಹತ್ತು ವರ್ಷಕ್ಕಿಂತ ಹೆಚ್ಚಿರಬಾರದು.
ಒಂದು ಕುಟುಂಬದ ಎರಡು ಹೆಣ್ಣು ಮಕ್ಕಳು ಮಾತ್ರ ಪಡೆಯಲು ಅರ್ಹರಾಗಿರುತ್ತಾರೆ.
ಸುಕನ್ಯಾ ಸಮೃದ್ದಿ ಯೋಜನೆ ಕ್ಯಾಲ್ಕುಲೇಟರ್ :
ಸುಕನ್ಯಾ ಸಮೃದ್ದಿ ಯೋಜನೆ ಅರ್ಹತೆ ಪಡೆದ ನಂತರ ಹೆಣ್ಣು ಮಗುವಿನ ವಯಸ್ಸು ಮತ್ತು ಅವಶ್ಯವಿರುವ ಹೂಡಿಕೆಯ ಮೊತ್ತವನ್ನು ಕ್ಯಾಲ್ಕುಲೇಟರ್ ನಲ್ಲಿ ನಮೂದಿಸಬೇಕು. ಯೋಜನೆಯಲ್ಲಿ ಹೂಡಿಕೆಯ ಕನಿಷ್ಟ ಮೊತ್ತ 250 ರೂ. ಆಗಿದ್ದು ಗರಿಷ್ಟ ಮೊತ್ತ 1.5 ಲಕ್ಷ ರೂ. ಆಗಿದೆ. ಉದಾಹರಣೆಗೆ ನೀವು ಮಾಸಿಕವಾಗಿ ಹೂಡಿಕೆ 8,333 ರೂ. (ಅಂದಾಜು)ಗಳು 7.6% ಬಡ್ಡಿದರದೊಂದಿಗೆ ಹೂಡಿಕೆ ಮಾಡಿ 10 ವರ್ಷಗಳವರೆಗೆ ಮುಂದುವರಿದರೆ ಅದು 1,00,000 ರೂ. ಆಗಿರುತ್ತದೆ. ಕೊನೆಗೆ ನೀವು ಬಡ್ಡಿಯೊಂದಿಗೆ 15,29,458 ರೂ.ಗಳನ್ನು ಪಡೆಯುತ್ತೀರಿ.
More From GoodReturns

Savings Tips: ವಯಸ್ಸು 30 ಆದ್ರೂ, ಹಣ ಉಳಿತಾಯ ಇನ್ನೂ ಮಾಡಿಲ್ವಾ? ಹಾಗಿದ್ರೆ ಇಲ್ಲಿದೆ ಟಿಪ್ಸ್

Retirement with Savings Tips: ನಿವೃತ್ತಿ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ ಈ ಸ್ಕೀಮ್ನಲ್ಲಿ ಇನ್ವೆಸ್ಟ್ ಮಾಡಿ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!



Click it and Unblock the Notifications