ಡಿಸೆಂಬರ್ 2023 ರ ಆರಂಭದಲ್ಲಿ, ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಸರಿಯಾದ ಗ್ರಾಹಕರು ಮತ್ತು ಪಾಲಿಸಿ ಹೆಚ್ಚಿಸುವ ಗುರಿಯನ್ನು ಇಟ್ಟುಕೊಂಡು ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ವಿಶ್ವದ ನಾಲ್ಕನೇ ಅತಿ ದೊಡ್ಡ ಜೀವ ವಿಮಾ ಸಂಸ್ಥೆಯಾದ ಎಲ್ಐಸಿ ಈ ವರ್ಷ ಮಧ್ಯಮ-ಆದಾಯದ ಹಲವಾರು ಯೋಜನೆಗಳನ್ನು ಹೊಂದಿದೆ.
ಸುಮಾರು ಐದು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ವಿಮಾ ಪಾಲಿಸಿಗಳಲ್ಲಿನ ಹೂಡಿಕೆಗಳು ಕಾರ್ಮಿಕ-ವರ್ಗದವರಿಗೆ ಭವಿಷ್ಯದ ಹಣಕಾಸಿನ ಅಗತ್ಯತೆಗಳು, ವೈದ್ಯಕೀಯ ತುರ್ತುಸ್ಥಿತಿಗಳು ಅಥವಾ ಮಕ್ಕಳ ಶಿಕ್ಷಣಕ್ಕಾಗಿ ಹಣ ಉಳಿತಾಯ ಮಾಡಲು ಸಹಾಯ ಮಾಡುತ್ತದೆ. 2023ರಲ್ಲಿ ಅಧಿಕ ವರ್ಷಾಶನವನ್ನು ನೀಡಿದ ಯೋಜನೆಗಳ ಬಗ್ಗೆ ನಾವಿಲ್ಲಿ ವಿವರವನ್ನು ನೀಡಿದ್ದೇವೆ. ಮುಂದೆ ಓದಿ...

ಇತ್ತೀಚಿನ ವರ್ಷಗಳಲ್ಲಿ, ಶೇಕಡ 98.74 ರಷ್ಟು ಅತಿ ಹೆಚ್ಚು ಕ್ಲೈಮ್ ಸೆಟ್ಲ್ಮೆಂಟ್ ಹೊಂದಿರುವ ಎಲ್ಐಸಿಯು ರಾಷ್ಟ್ರೀಯವಾಗಿ ಮತ್ತು ಅಂತರಾಷ್ಟ್ರೀಯವಾಗಿ 540 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಹಾಗೆಯೇ ಇದು ಹಣ ಉಳಿತಾಯ ಮಾಡಲಾಗುವ ಸುರಕ್ಷಿತ ಯೋಜನೆಗಳಲ್ಲಿ ಒಂದಾಗಿದೆ.
ಭಾರತದ ಯುವ ಪೀಳಿಗೆಯು ವಿಮಾ ಪಾಲಿಸಿಗಳು, ಫಿಕ್ಸಿಡ್ ಡೆಪಾಸಿಟ್ಗಳು, ಮ್ಯೂಚುಯಲ್ ಫಂಡ್ ಎಸ್ಐಪಿ ಮತ್ತು ಕನಿಷ್ಠ ಸ್ಥಿರ ಉಳಿತಾಯದೊಂದಿಗೆ ಸ್ಟಾಕ್ ಹೂಡಿಕೆಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುತ್ತದೆ. ಇದು ನಿರ್ದಿಷ್ಟ ಅವಧಿಯ ನಂತರ ಉತ್ತಮ ಆದಾಯವನ್ನು ನೀಡುತ್ತದೆ. ಈ ಪ್ರಮುಖ ಅಂಶಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ಎಲ್ಐಸಿ ಉತ್ತಮ ವಿಮಾ ಯೋಜನೆಯನ್ನು 2023 ರಲ್ಲಿ ಆರಂಭಿಸಿದೆ. ಇಲ್ಲಿದೆ ವಿವರ ಮುಂದೆ ಓದಿ...
ಜೀವನ್ ಶಾಂತಿ ಯೋಜನೆ
ಎಲ್ಐಸಿಯ ಜೀವನ್ ಶಾಂತಿ ಯೋಜನೆಯು ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್, ಸಿಂಗಲ್ ಪ್ರೀಮಿಯಂ ವರ್ಷಾಶನ ಯೋಜನೆಯಾಗಿದೆ. ಇದು ಪಾಲಿಸಿದಾರರಿಗೆ ನಿವೃತ್ತಿಯಲ್ಲಿ ಆದಾಯವನ್ನು ನೀಡುತ್ತದೆ. ಮೆಚ್ಯೂರಿಟಿಯಾದ ಬಳಿಕ ಹಣವನ್ನು ಸಂಗ್ರಹಿಸಬಹುದು.
ಇದಕ್ಕೆ ಯಾವುದೇ ಗರಿಷ್ಠ ಮಿತಿಯಿಲ್ಲ. ವ್ಯಕ್ತಿಗಳು ವರ್ಷಾಶನ ಪಾವತಿಗಳ ಮೂಲಕ ಜೀವಿತಾವಧಿಯ ಆದಾಯವನ್ನು ಪಡೆಯಬಹುದಾಗಿದೆ. ಜನವರಿ 2023 ರಲ್ಲಿ, ಎಲ್ಐಸಿಯ ಜೀವನ್ ಶಾಂತಿ ಯೋಜನೆಗಳಿಗೆ (858) ವರ್ಷಾಶನ ದರಗಳನ್ನು ಹೆಚ್ಚಿಸಲಾಗಿದೆ.
ಜೀವನ್ ಆಜಾದ್ ಪಾಲಿಸಿ ವಿವರ
ಜನವರಿ 20, 2023 ರಂದು ಪ್ರಾರಂಭವಾದ ಜೀವನ್ ಆಜಾದ್ ವಿಮಾ ಪಾಲಿಸಿ (868) ಎಲ್ಐಸಿಯಿಂದ ಸೀಮಿತ ಪ್ರೀಮಿಯಂನೊಂದಿಗೆ ಪ್ರಾರಂಭಿಸಿದ ಯೋಜನೆಯಾಗಿದೆ. ರಕ್ಷಣೆಗಳು ಮತ್ತು ಹೂಡಿಕೆಗಳನ್ನು ಸುಲಭಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಜೀವನ್ ಆಜಾದ್ ತೆರಿಗೆ ಉಳಿತಾಯ, ಉತ್ತಮ ಆದಾಯ, ಮೆಚ್ಯೂರಿಟಿ ಪ್ರಯೋಜನಗಳು ಮತ್ತು ಡೆತ್ ಪ್ರಯೋಜನಗಳಂತಹ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಪಾಲಿಸಿದಾರರು 50 ವರ್ಷಗಳ ಗರಿಷ್ಠ ಮೆಚುರಿಟಿ ಅವಧಿ ಹೊಂದಿದ್ದಾರೆ.
70 ವರ್ಷ ವಯಸ್ಸಿನವರೆಗೆ ಪಾಲಿಸಿ ಅವಧಿಯ ಅಂತ್ಯಕ್ಕಿಂತ 8 ವರ್ಷಗಳ ಹಿಂದೆ ಮಾತ್ರ ಪಾವತಿಸಬೇಕಾಗುತ್ತದೆ. ಈ ನಿರ್ದಿಷ್ಟ ಎಲ್ಐಸಿ ಯೋಜನೆಗೆ ಎಲ್ಐಸಿ ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯ ಪ್ರಯೋಜನ, ಎಲ್ಐಸಿ ಪ್ರೀಮಿಯಂ ಮನ್ನಾ ಮತ್ತು ಎಲ್ಐಸಿ ಅಪಘಾತ ಪ್ರಯೋಜನದ ರೈಡರ್ಗಳಂತಹ ಹೆಚ್ಚುವರಿ ಆಯ್ಕೆಗಳನ್ನು ನೀಡುತ್ತದೆ. ಇದಲ್ಲದೆ, ಪಾಲಿಸಿಯನ್ನು ಪ್ರಾರಂಭಿಸಿದ ನಂತರ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಪ್ರೀಮಿಯಂಗಳನ್ನು ತಪ್ಪದೆ ಪಾವತಿಸಿದರೆ ಪಾಲಿಸಿದಾರರು ಸಾಲ ಸೌಲಭ್ಯವನ್ನು ಆಯ್ಕೆ ಮಾಡಬಹುದು.
ಧನ್ ವೃದ್ಧಿ ಯೋಜನೆ
ಎಲ್ಐಸಿಯ ಧನ್ ವೃದ್ಧಿ (869) ಒಂದು ನಾನ್-ಲಿಂಕ್ಡ್ ಉಳಿತಾಯ ವಿಮಾ ಯೋಜನೆಯಾಗಿದ್ದು, ಇದು ಕನಿಷ್ಟ ಅಪಾಯವನ್ನು ಹೊಂದಿದೆ. ಪಾಲಿಸಿದಾರರಿಗೆ ಮೆಚ್ಯೂರಿಟಿ ಪ್ರಯೋಜನಗಳು, ಜೀವ ವಿಮಾ ರಕ್ಷಣೆ, ಏಕ ಪ್ರೀಮಿಯಂ ಮತ್ತು ತೆರಿಗೆ ಪ್ರಯೋಜನಗಳಂತಹ ಬಹು ಪ್ರಯೋಜನ ನೀಡುತ್ತದೆ. ಜೊತೆಗೆ ಯೋಜನೆಗಳಲ್ಲಿ ಹೂಡಿಕೆ ಮಾಡಲು ಮತ್ತು ಸಂಗ್ರಹಿಸಲು ಬಯಸುವ ಅವಧಿಯನ್ನು ನಿರ್ಧರಿಸಲು ಆಯ್ಕೆಗಳು ಲಭ್ಯವಿದೆ.
ಕನಿಷ್ಠ ಮೊತ್ತವು 1,25,000 ರೂಪಾಯಿ ಆಗಿದೆ. ಆದರೆ ಗರಿಷ್ಠ ಮೊತ್ತ ಮಿತಿ ಲಭ್ಯವಿಲ್ಲ. ಈ ಯೋಜನೆ ಜೂನ್ 2023 ರಲ್ಲಿ ಪ್ರಾರಂಭಿಸಲಾಗಿದೆ. ಹೂಡಿಕೆದಾರರು ಈ ಯೋಜನೆಯ ಜೊತೆಗೆ ರೈಡರ್ ಪ್ರಯೋಜನಗಳನ್ನು ಸಹ ಆಯ್ಕೆ ಮಾಡಬಹುದು. ನಿರ್ಧರಿಸಿದ ಮೆಚ್ಯೂರಿಟಿ ಅವಧಿಯ ಅಂತ್ಯದ ವೇಳೆಗೆ ಹೆಚ್ಚಿನ ಆದಾಯವನ್ನು ಸಂಗ್ರಹ ಮಾಡಬಹುದಾಗಿದೆ.
ಜೀವನ್ ಕಿರಣ್ ಪಾಲಿಸಿ
ರಕ್ಷಣೆ ಮತ್ತು ಉಳಿತಾಯವನ್ನು ಸುಗಮಗೊಳಿಸುವ ಭಾರತದಲ್ಲಿನ ಅತಿದೊಡ್ಡ ವಿಮಾ ಕಂಪನಿಯು ಜುಲೈ 2023 ರಲ್ಲಿ ಜೀವನ್ ಕಿರಣ್ ಯೋಜನೆಯನ್ನು (870) ಪ್ರಾರಂಭಿಸಿತು. ಇತರ ಹೆಚ್ಚಿನ-ರಿಟರ್ನ್ ಪಾಲಿಸಿಗಳಂತೆಯೇ, ಏಕ ಪ್ರೀಮಿಯಂ ಪಾವತಿಗಳು ಮತ್ತು ನಿಯಮಿತ ಪ್ರೀಮಿಯಂ ಪಾಲಿಸಿ ಪಾವತಿಗಳನ್ನು ಪಾಲಿಸಿ ಮೌಲ್ಯವನ್ನು ಅವಲಂಬಿಸಿ ಮುಂದೂಡುವ ಅನುಮತಿಯಿದೆ.
ಕನಿಷ್ಠ ಮೊತ್ತ 15,00,000 ರೂಪಾಯಿ ಮತ್ತು ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಪಾಲಿಸಿಯ ವಿರುದ್ಧ ಸಾಲ ಸೌಲಭ್ಯ, ಖಾತರಿಯ ಸರೆಂಡರ್ ಮೌಲ್ಯ, ಡೆತ್ ಬೆನಿಫಿಟ್ ರೈಡರ್, ಆಕ್ಸಿಡೆಂಟ್ ಬೆನಿಫಿಟ್ ರೈಡರ್, ಮೊದಲಾದ ಪ್ರಯೋಜನಗಳನ್ನು ಎಲ್ಐಸಿ ಪಾಲಿಸಿ ನೀಡುತ್ತದೆ.
More From GoodReturns

Retirement with Savings Tips: ನಿವೃತ್ತಿ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ ಈ ಸ್ಕೀಮ್ನಲ್ಲಿ ಇನ್ವೆಸ್ಟ್ ಮಾಡಿ

International Women's Day: ಮಹಿಳೆಯರೇ ಇಲ್ಲಿ ಗಮನಿಸಿ; ಇಲ್ಲಿದೆ ಬೆಸ್ಟ್ 5 ಹೂಡಿಕೆ ಯೋಜನೆಗಳು!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications