ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್ಸಿಟಿಸಿ) ಹಲವಾರು ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡುತ್ತಿದೆ. ಬೆಂಗಳೂರಿನಿಂದ ನಾವು ಪ್ರಯಾಣ ಆರಂಭ ಮಾಡಲು ಬಯಸಿದರೆ, ನಮಗೂ ಹಲವಾರು ಪ್ರವಾಸ ಪ್ಯಾಕೇಜ್ಗಳನ್ನು ಐಆರ್ಸಿಟಿಸಿ ನೀಡುತ್ತದೆ. ನೀವು ಬೆಂಗಳೂರಿನಿಂದ ಕಾಶಿ ಯಾತ್ರೆಗೂ ಹೋಗಬಹುದಾಗಿದೆ.
ಈ ಪ್ರವಾಸ ಪ್ಯಾಕೇಜ್ನ ಪೂರ್ಣ ಹೆಸರು ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಪ್ರವಾಸ ಪ್ಯಾಕೇಜ್ ಎಂಬುವುದಾಗಿದೆ. 9 ರಾತ್ರಿ, 10 ದಿನಗಳ ಪ್ರವಾಸ ಪ್ಯಾಕೇಜ್ ಇದಾಗಿದ್ದು, ನಾವು ಈ ಪ್ಯಾಕೇಜ್ನಲ್ಲಿ ಅಯೋಧ್ಯೆ, ಪ್ರಯಾಗರಾಜ್, ವಾರಾಣಾಸಿ, ಗಯಾಗೆ ಭೇಟಿ ನೀಡಲು ಸಾಧ್ಯವಾಗುತ್ತದೆ. ದೀಪಾವಳಿ ಮುಗಿದ ಬಳಿಕ ಈ ಪ್ರವಾಸ ಪ್ಯಾಕೇಜ್ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.....

ಪ್ಯಾಕೇಜ್ ಬಗ್ಗೆ ಇಲ್ಲಿದೆ ಮಾಹಿತಿ
ಈ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಪ್ರವಾಸ ಪ್ಯಾಕೇಜ್ ನವೆಂಬರ್ 18ರಂದು ಆರಂಭವಾಗುತ್ತದೆ. ಪ್ರತಿ ವ್ಯಕ್ತಿಗೆ 22,500 ರೂಪಾಯಿಯ ಪ್ಯಾಕೇಜ್ ಇದಾಗಿದ್ದು, ನೀವು ಕರ್ನಾಟಕ ಸರ್ಕಾರದಿಂದ 7,500 ರೂಪಾಯಿ ಸಬ್ಸಿಡಿಯಾಗಿ ಪಡೆಯಬಹುದಾಗಿದೆ. ನೀವು ಪ್ರವಾಸದಲ್ಲಿ ಬೆಂಗಳೂರು, ವಾರಾಣಾಸಿ, ಗಯಾ, ಅಯೋಧ್ಯೆ, ಪ್ರಯಾಗ್ರಾಜ್ಗೆ ನೀವು ಹೋಗಬಹುದಾಗಿದೆ.
ದಿನ 1: ಬೆಂಗಳೂರು
* ಬೆಂಗಳೂರಿನಿಂದ ರೈಲು ಹೊರಡುವುದು
* ಬೆಳಗ್ಗಿನ ತಿಂಡಿ, ಊಟ, ಸಂಜೆ ಚಹಾ, ರಾತ್ರಿ ಭೋಜನ ರೈಲಿನಲ್ಲೇ ಇರಲಿದೆ. ರಾತ್ರಿ ರೈಲು ಪ್ರಯಾಣವಿರಲಿದೆ.
ದಿನ 2: ರೈಲಿನ ಪ್ರಯಾಣ
* ಬೆಳಗಿನ ಚಹಾ ಮತ್ತು ಉಪಹಾರ
* ರೈಲಿನಲ್ಲೇ ಊಟ, ಸಂಜೆಯ ಚಹಾ.
* ರೈಲಿನಲ್ಲೇ ಭೋಜನ, ರಾತ್ರಿಯ ಪ್ರಯಾಣ
ದಿನ 3: ಗಯಾ
* ಬೆಳಗಿನ ಚಹಾ, ಉಪಹಾರ ಮತ್ತು ಮಧ್ಯಾಹ್ನದ ಊಟ
* ಮಧ್ಯಾಹ್ನ ಗಯಾ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡುವುದು.
* ಹೊಟೇಲ್ಗೆ ಹೋಗಿ ಚೆಕ್ ಇನ್ ಆಗುವುದು, ರಾತ್ರಿ ಅಲ್ಲಿಯೇ ತಂಗುವುದು
ದಿನ 4: ಗಯಾ
* ಬೆಳಗಿನ ಚಹಾ, ಉಪಹಾರ
* ನಂತರ ಮಹಾಬೂದಿ ದೇವಾಲಯಕ್ಕೆ, ವಿಷ್ಣುಪಾದ ದೇವಾಲಯಕ್ಕೆ ಭೇಟಿ
* ಗಯಾದಿಂದ ಸಂಜೆ ಪ್ರಯಾಣ, ಪ್ರಯಾಣ ವೇಳೆ ರಾತ್ರಿ ಊಟ.
* ರಾತ್ರಿ ಬನಾರಸ್ ರೈಲ್ವೆ ನಿಲ್ದಾಣಕ್ಕೆ ಭೇಟಿ
* ಹೊಟೇಲ್ಗೆ ಚೆಕ್ಇನ್ ಆಗುವುದು
ದಿನ 5: ವಾರಣಾಸಿ
* ಉಪಹಾರದ ನಂತರ, ಊಟದ ತನಕ ವಿಶ್ರಾಂತಿ.
* ಊಟದ ನಂತರ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಗಂಗಾನದಿಯ ಪವಿತ್ರ ಸ್ನಾನಕ್ಕೆ ಭೇಟಿ
* ವಾರಣಾಸಿಯಲ್ಲಿ ಭೋಜನ ಮತ್ತು ರಾತ್ರಿ ತಂಗುವುದು.
ದಿನ 6: ವಾರಾಣಾಸಿ
* ಮುಂಜಾನೆ ತುಳಸಿ ಮಾನಸ ಮಂದಿರ ಮತ್ತು ಸಂಕಟ ಮೋಚನ ಹನುಮಾನ ಮಂದಿರಕ್ಕೆ ಭೇಟಿ.
* ಉಪಹಾರದ ನಂತರ, ಊಟದ ತನಕ ವಿಶ್ರಾಂತಿ.
* ಊಟದ ನಂತರ, ಶಾಪಿಂಗ್ ಮಾಡಲು ಬಿಡುವಿನ ಸಮಯ.
* ರಾತ್ರಿ ಊಟ ಮತ್ತು ವಾರಣಾಸಿಯಿಂದ ನಿರ್ಗಮನ.
ದಿನ 7: ಅಯೋಧ್ಯೆ
* ಅಯೋಧ್ಯೆಗೆ ಮುಂಜಾನೆ ತಲುಪುವುದು.
* ಹೊಟೇಲ್ಗೆ ಚೆಕ್ಇನ್ ಆಗುವುದು
* ಉಪಾಹಾರದ ಬಳಿಕ ನಂದಿಗ್ರಾಮಕ್ಕೆ ಭೇಟಿ
* ಊಟದ ನಂತರ ಅಯೋಧ್ಯೆಯ ರಾಮ ಜನ್ಮಭೂಮಿ ಮತ್ತು ಹನುಮಾನ್ ಗರ್ಹಿಗೆ ಭೇಟಿ
* ಸಂಜೆ ಸರಯೂ ಆರತಿ
* ರಾತ್ರಿ ಭೋಜನ, ಅಯೋಧ್ಯೆಯಲ್ಲಿಯೇ ತಂಗುವುದು.
ದಿನ 8: ಪ್ರಯಾಗ್ರಾಜ್
* ಪ್ರಯಾಗ್ರಾಜ್ಗೆ ಮುಂಜಾನೆ ಭೇಟಿ, ಪ್ರಯಾಣದಲ್ಲೇ ಉಪಾಹಾರ
* ತ್ರಿವೇಣಿ ಸಂಗಮ ಮತ್ತು ಹನುಮಾನ್ ಮಂದಿರಕ್ಕೆ ಭೇಟಿ
* ಮಧ್ಯಾಹ್ನ ಪ್ರಯಾಗ್ರಾಜ್ನಿಂದ ಹೊರಡುವುದು
* ಊಟ, ಸಂಜೆಯ ಚಹಾ, ರಾತ್ರಿಯ ಊಟ
ದಿನ 9: ರೈಲು ಪ್ರಯಾಣ
* ಬೆಳಗಿನ ಚಹಾ, ಉಪಹಾರ, ಮಧ್ಯಾಹ್ನದ ಊಟ, ಸಂಜೆ ಚಹಾ, ರಾತ್ರಿ ಪ್ರಯಾಣದಲ್ಲೇ ಊಟ, ರಾತ್ರಿಯ ರೈಲು ಪ್ರಯಾಣ.
* ಆಯಾ ರೈಲು ನಿಲ್ದಾಣದಲ್ಲಿ ಪ್ರವಾಸಿಗರು ಇಳಿಯುವುದು.
ದಿನ 10: ರೈಲು ಪ್ರಯಾಣ
* ಪ್ರಯಾಣದಲ್ಲೇ ಬೆಳಗಿನ ಚಹಾ, ಉಪಹಾರ ಮತ್ತು ಊಟ
* ಆಯಾ ಸ್ಟೇಷನ್ನಲ್ಲಿ ಪ್ರಯಾಣಿಕರು ಇಳಿಯುವುದು
* ಬೆಂಗಳೂರು ರೈಲು ನಿಲ್ದಾಣಕ್ಕೆ ಸಂಜೆ ಆಗಮನ
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications