ಇ-ಕಾಮರ್ಸ್ ದೈತ್ಯ ಪೇಟಿಎಂ ಸಂಸ್ಥೆಗೆ ಗ್ರಾಹಕರಿಂದ ರೂ. 6.15 ಲಕ್ಷ ವಂಚನೆಯಾಗಿದೆ ಎಂದು ಕಂಪೆನಿ ಆರೋಪಿಸಿದೆ.
ಇ-ಕಾಮರ್ಸ್ ದೈತ್ಯ ಪೇಟಿಎಂ ಸಂಸ್ಥೆಗೆ ಗ್ರಾಹಕರಿಂದ ರೂ. 6.15 ಲಕ್ಷ ವಂಚನೆಯಾಗಿದೆ ಎಂದು ಕಂಪೆನಿ ಆರೋಪಿಸಿದೆ.
ಪೇಟಿಎಂ ನೀಡಿರುವ ದೂರು ಸ್ವೀಕರಿಸಿರುವ ಸಿಬಿಐ, ವಂಚಕರ ವಿರುದ್ಧ ಎಫ್ಐಆರ್ ದಾಖಲಿಸಿದೆ. ಇದು 2015-16ರಲ್ಲಿ ನಡೆದಿರುವ ಪ್ರಕರಣ ಎಂದು ತಿಳಿದು ಬಂದಿದೆ. ಪೇಟಿಎಂ ಸಂಸ್ಥೆಯ ಕೆಲ ಅಧಿಕಾರಿಗಳು ಸೇರಿ ದೆಹಲಿಯ ಕಲ್ಕಾಜಿ, ಗೋವಿಂದಪುರಿ ಮತ್ತು ಸಾಕೇತ್ ಪ್ರದೇಶಗಳ 15 ಗ್ರಾಹಕರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಾಗಿದೆ.
ಗ್ರಾಹಕರು ಖರೀದಿಸಿರುವ ವಸ್ತುಗಳ ಗುಣಮಟ್ಟ ಸರಿ ಇಲ್ಲದಿದ್ದಾಗ ಅದನ್ನು ಹಿಂದಿರುಗಿಸಿದರೆ ಅವರಿಗೆ ಆ ವಸ್ತುವಿನ ಮೊತ್ತ ಮರು ಪಾವತಿಸಲಾಗುತ್ತದೆ. ಆದರೆ, ಈ 15 ಗ್ರಾಹಕರು ವಸ್ತುಗಳನ್ನು ಹಿಂತಿರುಗಿಸದೇ ಇದ್ದರೂ ಸಹ ಅವರ ಬ್ಯಾಂಕ್ ಖಾತೆ ಮತ್ತು ಪೇಟಿಎಂ ವಾಲೆಟ್ಗೆ ಅಕ್ರಮವಾಗಿ ಹಣ ಮರುಪಾವತಿ ಆಗಿದೆ ಎಂದು ಪೇಟಿಎಂ ದೂರಿನಲ್ಲಿ ತಿಳಿಸಿದೆ.
ಸಾಮಾನ್ಯವಾಗಿ ಗ್ರಾಹಕರಿಗೆ ನೀಡಿದ ವಸ್ತುಗಳು ಬಳಕೆಗೆ ಯೋಗ್ಯವಿಲ್ಲದಿದ್ದಾಗ ಅದನ್ನು ಮರಳಿ ಪಡೆಯುವ ಕಾರ್ಯವನ್ನು ಗ್ರಾಹಕರ ಸೇವಾ ಅಧಿಕಾರಿಗಳ ತಂಡ ಮಾಡುತ್ತದೆ. ಆದರೆ ಇಂಥ ಸಮಸ್ಯೆಗಳ ನಿರ್ವಹಣೆಗೆ ಒಂದು ನಿರ್ದಿಷ್ಟ ಗುರುತಿನ ಸಂಖ್ಯೆ ಮತ್ತು ಪಾಸ್ವರ್ಡ್ ನೀಡಲಾಗುತ್ತದೆ. ಜತೆಗೆ ಗ್ರಾಹಕರಿಂದ ಆ ವಸ್ತುಗಳನ್ನು ಪಡೆದು ಅವರಿಗೆ ಹಣ ಹಿಂತಿರುಗಿಸುವ ಕೆಲಸ ಮಾಡಲಾಗುತ್ತದೆ.
ಗ್ರಾಹಕರು ವಸ್ತುಗಳನ್ನು ಖರೀದಿಸಿದ ನಂತರ ಅದರ ಬಗ್ಗೆ ಯಾವುದೇ ದೂರುಗಳು ಬರದೆ ಇದ್ದರೆ ಹಣ ಹಿಂತಿರುಗಿಸಬೇಕಾಗಿಲ್ಲ. ಆದರೆ ವಿಚಿತ್ರವೆಂದರೆ 48 ಪ್ರಕರಣಗಳಲ್ಲಿ ಗ್ರಾಹಕರಿಗೆ ವಸ್ತುಗಳನ್ನು ವಿತರಿಸಿದ ನಂತರವೂ ಹಣ ಮರುಪಾವತಿ ಆಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications