ದೇಶದ ಅತಿ ದೊಡ್ಡ ಸಾಲದಾತ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಹೆಚ್ಚುವರಿ ವೆಚ್ಚ ಸಾಲದ ದರವನ್ನು (ಎಂಸಿಎಲ್ಆರ್) ಏರಿಕೆ ಮಾಡಿದೆ.
ದೇಶದ ಅತಿ ದೊಡ್ಡ ಸಾಲದಾತ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಹೆಚ್ಚುವರಿ ವೆಚ್ಚ ಸಾಲದ ದರವನ್ನು (ಎಂಸಿಎಲ್ಆರ್) ಏರಿಕೆ ಮಾಡಿದೆ.
ಎಸ್ಬಿಐ ನಂತೆಯೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಖಾಸಗಿ ಕ್ಷೇತ್ರದ ಐಸಿಐಸಿಐ ಬ್ಯಾಂಕುಗಳು ಸಾಲಗಳ ಮೇಲಿನ ಬಡ್ಡಿ ದರವನ್ನು ಏರಿಸಿವೆ. ಎಸ್ಬಿಐ 2016ರ ಏಪ್ರಿಲ್ ನಂತರ ಇದೇ ಮೊದಲ ಬಾರಿಗೆ ಒಂದು ವರ್ಷದ ಎಂಸಿಎಲ್ಆರ್ ದರಗಳನ್ನು ಹೆಚ್ಚಿಸಿದೆ. ಅಂಬಾನಿ ಧಮಾಕಾ! ರಿಲಯನ್ಸ್ ಬಿಗ್ ಟಿವಿ ಮೂಲಕ 500 ಚಾನೆಲ್ 5 ವರ್ಷ ಸಂಪೂರ್ಣ ಉಚಿತ!!
ಬಡ್ಡಿದರ ಏರಿಕೆ ಎಷ್ಟು?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ (ಎಸ್ಬಿಐ) ಶೇ. 0.20, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಶೇ. 0.15ರಷ್ಟು ಬಡ್ಡಿದರ ಏರಿಕೆ ಮಾಡಿವೆ. ಎಸ್ಬಿಐ ಠೇವಣಿಗಳ ಮೇಲಿನ ಎಂಸಿಎಲ್ಆರ್ ಬಡ್ಡಿದರ ಇದಕ್ಕೂ ಮೊದಲು ಶೇ 7.95ರಷ್ಟಿತ್ತು. ಈಗ ಶೇ 8.15ಕ್ಕೆ ಏರಲಿದೆ. ಈ ಹೊಸ ದರಗಳು ತಕ್ಷಣದಿಂದಲೇ ಜಾರಿಯಾಗಲಿವೆ ಎಂದು ಬ್ಯಾಂಕುಗಳು ತಿಳಿಸಿವೆ.
ಪಿಎನ್ ಬಿ ಹಗರಣ
12 ಸಾವಿರ ಕೋಟಿ ಹಗರಣದಲ್ಲಿ ಸಿಲುಕಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ಒಂದು ವರ್ಷ ಅವಧಿಯ ಎಂಸಿಎಲ್ಆರ್ ಹೆಚ್ಚಿಸಿದ್ದು, ಮಾರ್ಚ್ 01, 2018ರಿಂದ ಜಾರಿಗೆ ಬಂದಿದೆ. ಎಂಸಿಎಲ್ಆರ್ ದರವನ್ನು ಶೇ. 8.15 ರಿಂದ 8.30ಕ್ಕೆ ಹೆಚ್ಚಿಸಿದೆ.
ಎಂಸಿಎಲ್ಆರ್ ಪರಿಣಾಮ
ಬ್ಯಾಂಕುಗಳು ಹೆಚ್ಚಿಸಿರುವ ಎಂಸಿಎಲ್ಆರ್ ಬಡ್ಡಿದರದಿಂದಾಗಿ ಹೊಸ ಸಾಲ ಪಡೆಯುವವರ ಇಎಂಐ ಏರಿಕೆಯಾಗಲಿದೆ. ಎಂಸಿಎಲ್ಆರ್ ಆಧಾರದ ಮೇಲೆ ಹೊಸ ಗೃಹ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ವೈಯಕ್ತಿಕ ಸಾಲ, ಆಸ್ತಿ ಮೇಲಿನ ಸಾಲಗಳ ಬಡ್ಡಿದರ ಹಾಗು ಇಎಂಐ ಅನ್ವಯವಾಗಲಿದೆ. ಈ ಹಿಂದಿನ ಸಾಲದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.
ಎಸ್ಬಿಐ ಗ್ರಾಹಕರಿಗೆ ಗಂಡಾಂತರ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಗದು ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಶೇ. 0.75ರವರೆಗೆ ಹೆಚ್ಚಿಸಿದೆ.
ಬೇರೆ ಬ್ಯಾಂಕುಗಳು ಬಡ್ಡಿದರ ಹೆಚ್ಚಿಸಬಹುದು?
2017ರ ನವೆಂಬರ್ ನಂತರದಲ್ಲಿ ಮೂರನೇ ಬಾರಿಗೆ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸಿದಂತಾಗಿದೆ. ಇದರ ಪರಿಣಾಮದಿಂದಾಗಿ ಸಾಲಗಳ ಮೇಲಿನ ಬಡ್ಡಿ ದರವನ್ನೂ ಹೆಚ್ಚಿಸಿದೆ. ದೇಶದ ಇನ್ನಿತರ ಬ್ಯಾಂಕುಗಳು ಸಹ ಎಸ್ಬಿಐ ನೀತಿಯನ್ನು ಅನುಸರಿಸುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಬ್ಯಾಂಕ್ ಲೂಟಿಕೋರ ದೇಶ ಬಿಟ್ಟು ಓಡಿ ಹೋಗಿದ್ದಾನೆ. ಗ್ರಾಹಕರು ಮಾತ್ರ ಬಲಿಪಶು ಆಗಿದ್ದಾರೆ!
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications