ಸರ್ಕಾರದ ಪರಿಷ್ಕೃತ ಇ-ಕಾಮರ್ಸ್ ನೀತಿಗೆ ಬಾಬಾ ರಾಮದೇವ ಬೆಂಬಲ
ಕೇಂದ್ರ ಸರ್ಕಾರ ವಿದೇಶಿ ನೇರ ಹೂಡಿಕೆ ಮೇಲಿನ ಇ-ಕಾಮರ್ಸ್ ನೀತಿಯನ್ನು ಪರಿಷ್ಕರಿಸಿ ಫೆಬ್ರವರಿ ೧ರಿಂದ ಜಾರಿ ತಂದಿರುವುದು ಇ-ಕಾಮರ್ಸ್ ಕ್ಷೇತ್ರಕ್ಕೆ ಅನುಕೂಲಕರವಾಗಿರಲಿದೆ ಎಂದು ಬಾಬಾ ರಾಮದೇವ ಹೇಳಿದ್ದಾರೆ.
ಕೇಂದ್ರ ಸರ್ಕಾರ ವಿದೇಶಿ ನೇರ ಹೂಡಿಕೆ ಮೇಲಿನ ಇ-ಕಾಮರ್ಸ್ ನೀತಿಯನ್ನು ಪರಿಷ್ಕರಿಸಿ ಫೆಬ್ರವರಿ ೧ರಿಂದ ಜಾರಿ ತಂದಿರುವುದು ಇ-ಕಾಮರ್ಸ್ ಕ್ಷೇತ್ರಕ್ಕೆ ಅನುಕೂಲಕರವಾಗಿರಲಿದೆ ಎಂದು ಬಾಬಾ ರಾಮದೇವ ಹೇಳಿದ್ದಾರೆ.
ಹೊಸ ಇ-ಕಾಮರ್ಸ್ ನೀತಿ ನ್ಯಾಯಯೋಚಿತ ಮತ್ತು ಆರೋಗ್ಯಕರ ಸ್ಪರ್ಧೆಯನ್ನು ಪ್ರೋತ್ಸಾಹಿಸಲಿದ್ದು, ಎಲ್ಲಾ ಚಿಲ್ಲರೆ ವಹಿವಾಟುದಾರರಿಗೆ ಉತ್ತಮ ವೇದಿಕೆಯಾಗಲಿದೆ ಎಂದಿದ್ದಾರೆ.
ನಮ್ಮ ದೃಷ್ಟಿಯಲ್ಲಿ ಭಾರತದಲ್ಲಿ ಆರಂಭಿಕ ಹಂತದಲ್ಲಿರುವ ಎಲ್ಲಾ ವ್ಯಾಪಾರಸ್ಥರಿಗೆ ಹಾಗು ರಿಟೇಲ್ ವ್ಯಾಪಾರಸ್ಥರಿಗೆ ಸಮಾನ ಅವಕಾಶವಿರುವ ಪರಿಸರದ ಅಗತ್ಯವಿರುತ್ತದೆ ಎಂದುಪತಂಜಲಿ ವಕ್ತಾರ ಎಸ್ಕೆ ತಿಜರ್ವಾಲಾ ಹೇಳಿದ್ದಾರೆ.
ಇ-ಕಾಮರ್ಸ್ ಕಂಪನಿಗಳು ನೀಡುವ ಆಫರ್ ಮತ್ತು ಹಬ್ಬದ ಮಾರಾಟ ಹೆಸರಿನಲ್ಲಿ ನೀಡುತ್ತಿರುವ ದರ ಕಡಿತ ಮಾರಾಟ ಮತ್ತು ಕಾಂಬಿ ಆಫರ್, ಕ್ಯಾಶ್ ಬ್ಯಾಕ್ ನಿಂದಾಗಿ ಇತರ ವ್ಯಾಪಾರಿಗಳು/ಮಳಿಗೆಗಳಿಗೆ ಭಾರೀ ನಷ್ಟ ಉಂಟಾಗುತ್ತಿತ್ತು. ಆದರೆ ಇ-ಕಾಮರ್ಸ್ ನೀತಿಯಿಂದಾಗಿ ಇನ್ನುಮುಂದೆ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಂತಹ ಸಂಸ್ಥೆಗಳು ನೀಡುವ ಭರ್ಜರಿ ರಿಯಾಯಿತಿ ಮತ್ತು ವಿವಿಧ ಕೊಡುಗೆಗಳಿಗೆ ತಡೆ ಬೀಳಲಿದೆ. ಇ-ಕಾಮರ್ಸ್ ವಲಯದಲ್ಲಿ ಅಮೆಜಾನ್, ಫ್ಲಿಪ್ಕಾರ್ಟ್, ಪೇಟಿಎಂ ಮಾಲ್ ನಂತಹ ಪ್ರಮುಖ ಕಂಪನಿಗಳು ಹೆಚ್ಚಿನ ಮಾರುಕಟ್ಟೆಯನ್ನು ಹೊಂದಿದ್ದವು.