ವಿಜಯ ಮಲ್ಯ, ನೀರವ್ ಮೋದಿ ಅಷ್ಟೇ ಅಲ್ಲ, ಇನ್ನೂ 36 ಉದ್ಯಮಿಗಳು ದೇಶ ಬಿಟ್ಟು ಪರಾರಿ!
ಕೇವಲ ವಿಜಯ ಮಲ್ಯ, ನೀರವ್ ಮೋದಿಯಂತಹ ಕೆಲವರು ಮಾತ್ರ ಆರ್ಥಿಕ ವಂಚನೆ ಮಾಡಿ ದೇಶ ಬಿಟ್ಟು ಹೋಗಿಲ್ಲ. ಬದಲಿಗೆ ಸುಮಾರು 36 ಜನ ಉದ್ಯಮಿಗಳು ದೇಶ ಬಿಟ್ಟು ಪರಾರಿಯಾಗಿದ್ದಾರೆ.
ಆಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕ್ಯಾಪ್ಟರ್ ಹಗರಣದಲ್ಲಿ ಬಂಧಿಸಿರುವ ರಕ್ಷಣಾ ದಳದ ಆರೋಪಿ ಸುಶೇನ್ ಮೋಹನ್ ಗುಪ್ತಾ ಅವರು ಸಲದಲಿಸಿರುವ ಜಾಮೀನು ಅರ್ಜಿಯನ್ನು ಜಾರಿ ನಿರ್ದೇಶನಾಲಯ ಸೋಮವಾರ ವಿರೋಧಿಸಿದೆ.
ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ 36 ಉದ್ಯಮಿಗಳು ದೇಶಬಿಟ್ಟು ಪರಾರಿಯಾಗಿರುವಂತೆ ಆಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕ್ಯಾಪ್ಟರ್ ಹಗರಣದಲ್ಲಿ ಬಂಧಿತನಾಗಿರುವ ಸುಶೇನ್ ಮೋಹನ್ ಗುಪ್ತಾ ಕೂಡ ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆಯಿದ್ದು, ಜಾಮೀನು ಅರ್ಜಿ ವಿರೋಧಿಸುತ್ತಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ.
ಕೇವಲ ವಿಜಯ ಮಲ್ಯ, ನೀರವ್ ಮೋದಿಯಂತಹ ಕೆಲವರು ಮಾತ್ರ ಆರ್ಥಿಕ ವಂಚನೆ ಮಾಡಿ ದೇಶ ಬಿಟ್ಟು ಹೋಗಿಲ್ಲ. ಬದಲಿಗೆ ಸುಮಾರು 36 ಜನ ಉದ್ಯಮಿಗಳು ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದೆ.
ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಸ್ಕಿ ಅಷ್ಟೇ ಅಲ್ಲದೇ ಕೆಲವು ವರ್ಷಗಳಲ್ಲಿ 36 ಉದ್ಯಮಿಗಳು ಆರ್ಥಿಕ ವಂಚನೆ ಹಾಗೂ ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದು, ಭಾರತದಿಂದ ಪರಾರಿಯಾಗಿದ್ದಾರೆ ಎಂಬ ಮಾಹಿತಿಯನ್ನು ಜಾರಿ ನಿರ್ದೇಶನಾಲಯ ಬಹಿರಂಗಪಡಿಸಿದೆ.
ಜಾರಿ ನಿರ್ದೇಶನಾಲಯದ ತನಿಖಾ ದಳದ ವಿಶೇಷ ನ್ಯಾಯಾಧೀಶರಾದ ಅರವಿಂದ್ ಕುಮಾರ್ ಅವರು, 36 ಉದ್ಯಮಿಗಳು ಆರ್ಥಿಕ ವಂಚನೆ ಹಾಗೂ ಕ್ರಿಮಿನಲ್ ಪ್ರಕರಣ ಅಡಿಯಲ್ಲಿ ದೇಶ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.