For Quick Alerts
For Daily Alerts
ಚಿಲ್ಲರೆ ಹೂಡಿಕೆದಾರರಿಗೆ ತೆರಿಗೆ ವಿನಾಯಿತಿ!
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 5ರಂದು ಬಜೆಟ್ ಮಂಡನೆ ಮಾಡಲಿದ್ದು, ಹಲವಾರು ನಿರೀಕ್ಷೆಗಳಿರುವುದು ಸಹಜ. ಜುಲೈ 5 ಕ್ಕೆ ಮಂಡನೆಯಾಗಲಿರುವ ಬಜೆಟ್ ನಲ್ಲಿ ಚಿಲ್ಲರೆ ಹೂಡಿಕೆ ಮೇಲೆ ತೆರಿಗೆ ವಿನಾಯಿತಿ ಸಿಗುವ ನಿರೀಕ್ಷೆ ಇದೆ.
|
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 5ರಂದು ಬಜೆಟ್ ಮಂಡನೆ ಮಾಡಲಿದ್ದು, ಹಲವಾರು ನಿರೀಕ್ಷೆಗಳಿರುವುದು ಸಹಜ. ಜುಲೈ 5 ಕ್ಕೆ ಮಂಡನೆಯಾಗಲಿರುವ ಬಜೆಟ್ ನಲ್ಲಿ ಚಿಲ್ಲರೆ ಹೂಡಿಕೆ ಮೇಲೆ ತೆರಿಗೆ ವಿನಾಯಿತಿ ಸಿಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಚಿಲ್ಲರೆ ಹೂಡಿಕೆದಾರರಿಗೆ ನೀಡುತ್ತಿರುವ ತೆರಿಗೆ ವಿನಾಯಿತಿಯನ್ನು ಮುಂದುವರೆಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಮೂರು ವರ್ಷಗಳ ಅವಧಿಯವರೆಗೆ ಚಿಲ್ಲರೆ ಹೂಡಿಕೆದಾರರು ತೆರಿಗೆ ವಿನಾಯಿತಿಯ ಲಾಭ ಪಡೆದುಕೊಳ್ಳುತ್ತಿದ್ದಾರೆ.
ಸಿಪಿಎಸ್ಇ ಮತ್ತು ಭಾರತ್ -22 ಇಟಿಎಫ್ ವಿನಿಮಯ ವಹಿವಾಟು ಫಂಡ್ ಗಳ ಮೇಲೆ ಚಿಲ್ಲರೆ ಹೂಡಿಕೆದಾರರಿಗೆ ತೆರಿಗೆ ವಿನಾಯಿತಿ ನೀಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ.
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಚಿಲ್ಲರೆ ಹೂಡಿಕೆದಾರರಿಗೆ ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್(ಇಎಲ್ಎಸ್ಎಸ್)ಯೋಜನೆಗೆ ತೆರಿಗೆ ವಿನಾಯಿತಿ ನೀಡಬಹುದೇ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯು (ಡಿಪಿಎಎಂ) ಕೇಂದ್ರ ನೇರ ತೆರಿಗೆ ಮಂಡಳಿಗೆ (ಸಿಬಿಡಿಟಿ) ಪತ್ರ ಬರೆದಿದೆ.
ಡಿಪಿಎಎಂ, ಸಿಪಿಎಸ್ಇ ಮತ್ತು ಭಾರತ್ -22 ಇಟಿಎಫ್ನ ಚಿಲ್ಲರೆ ಹೂಡಿಕೆದಾರರಿಗೆ ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ತೆರಿಗೆ ವಿನಾಯಿತಿ ಪಡೆಯುವ ಆಯ್ಕೆಯನ್ನು ನೀಡಲಾಗುವುದು. ಆದಾಗ್ಯೂ, ಅವರ ಹೂಡಿಕೆಗಳನ್ನು ಮೂರು ವರ್ಷಗಳವರೆಗೆ ಲಾಕ್-ಇನ್ ಮಾಡಲಾಗುತ್ತದೆ.
ಹೂಡಿಕೆದಾರರು ಇಎಲ್ಎಸ್ಎಸ್ ಕೆಟಗರಿಯಿಂದ ಹೊರಗುಳಿಯುವುದನ್ನು ಆಯ್ಕೆ ಮಾಡಬಹುದು ಮತ್ತು ತಮ್ಮ ಘಟಕಗಳಲ್ಲಿ ಮುಕ್ತವಾಗಿ ವ್ಯಾಪಾರವನ್ನು ಮುಂದುವರಿಸಬಹುದು. ಇನ್ನು ಬಜೆಟ್ ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಮಾಡುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗಿದೆ.
English summary