ಬಿರ್ಲಾ ಕಾರ್ಪೊರೇಷನ್ ಹಾಗೂ ಎಂಪಿ ಬಿರ್ಲಾ ಸಮೂಹ ಕಂಪೆನಿಗಳ ಮೇಲಿನ ಹತೋಟಿಗಾಗಿ ದಶಕದಿಂದ ಹೋರಾಟ ಮಾಡಿಕೊಂಡು ಬಂದಿದ್ದ ಹರ್ಷ್ ವರ್ಧನ್ ಲೋಧಾಗೆ ಹಿನ್ನಡೆಯಾಗಿದೆ. ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ನೀಡಿದ ಆದೇಶದ ಪ್ರಕಾರ, ತಕ್ಷಣದಿಂದಲೇ ಜಾರಿಯಾಗುವಂತೆ ಕಂಪೆನಿಯ ಎಲ್ಲ ಹುದ್ದೆಗಳಿಂದಲೂ ಲೋಧಾ ಅವರನ್ನು ತೆಗೆಯಲಾಗಿದೆ.
ಪ್ರಿಯಂವದಾ ಬಿರ್ಲಾ ಎಸ್ಟೇಟ್ ಆಸಕ್ತಿಗೆ ವಿರುದ್ಧವಾಗಿ ಬಿರ್ಲಾ ಕಾರ್ಪೊರೇಷನ್ ಅಧ್ಯಕ್ಷ ಲೋಧಾ ನಡೆದುಕೊಳ್ಳುತ್ತಿದ್ದಾರೆ ಎಂದು ಕೋರ್ಟ್ ಹೇಳಿರುವುದಾಗಿ, ಈ ಬಗ್ಗೆ ಮಾಹಿತಿ ಇರುವವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಬಿರ್ಲಾ ಕುಟುಂಬದವರಿಗೆ ಸಿಕ್ಕ ಮಹತ್ವದ ಜಯ ಎನ್ನಲಾಗಿದೆ. ಅವರು ಪ್ರಿಯವಂದಾ ಅವರ ಮರಣಪತ್ರದ ಕಾನೂನು ಸಿಂಧುತ್ವದ ಬಗ್ಗೆ ಪ್ರಶ್ನೆ ಮಾಡಿದ್ದರು.
25 ಸಾವಿರ ಕೋಟಿ ಎಂ.ಪಿ. ಬಿರ್ಲಾ ಸಾಮ್ರಾಜ್ಯ
ಎರಡೂ ಗುಂಪಿನ ಮಧ್ಯೆ ಹದಿನಾರು ವರ್ಷದಿಂದ ಕಾನೂನು ಸಮರ ನಡೆಯುತ್ತಿತ್ತು. ಪ್ರಿಯಂವದಾ ಮರಣಪತ್ರ (ವಿಲ್) ವಿಚಾರವಾಗಿ ಈ ವ್ಯಾಜ್ಯ ಇತ್ತು. ಪ್ರಿಯಂವದಾ ತಮ್ಮ ಆಸ್ತಿ ಹಾಗೂ ಇಪ್ಪತ್ತೈದು ಸಾವಿರ ಕೋಟಿ ರುಪಾಯಿ (ಈಗಿನ ಲೆಕ್ಕಾಚಾರ) ಎಂ.ಪಿ. ಬಿರ್ಲಾ ಸಾಮ್ರಾಜ್ಯವನ್ನು ಆಕೆಯ ಚಾರ್ಟರ್ಡ್ ಅಕೌಂಟೆಂಟ್ ಆರ್.ಎಸ್. ಲೋಧಾ ಮತ್ತು ಅವರ ಎರಡನೇ ಮಗ ಹರ್ಷ್ ವರ್ಧನ್ ಲೋಧಾ ಸುಪರ್ದಿಗೆ ವಹಿಸಿದ್ದರು. ಹೈಕೋರ್ಟ್ ನ ಈ ಆದೇಶದಂತೆ, ಲೋಧಾರನ್ನು ಬಿರ್ಲಾ ಕಾರ್ಪೊರೇಷನ್ ಸಮೂಹ ಅಧ್ಯಕ್ಷ ಹುದ್ದೆಯಿಂದ ತೆಗೆಯಲಾಗುತ್ತದೆ. ಎಂಪಿ ಬಿರ್ಲಾ ಸಮೂಹ ಕಂಪೆನಿಗಳ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನದಿಂದಲೂ ತೆಗೆಯಲಾಗುತ್ತದೆ. ಈ ಹಿಂದೆ, ಅಂದರೆ ಮೇ ತಿಂಗಳಲ್ಲಿ ಇಬ್ಬರೂ ನ್ಯಾಯಮೂರ್ತಿಗಳನ್ನು ಒಳಗೊಂಡ ವಿಭಾಗೀಯ ಪೀಠ ಆದೇಶವೊಂದನ್ನು ನೀಡಿತ್ತು.
ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ
ಅದರ ಪ್ರಕಾರ, ಸಮೂಹದ ಕೆಲವು ಸಂಸ್ಥೆಗಳಲ್ಲಿ ಸರದಿ ಮೇಲೆ ನಿರ್ದೇಶಕರಾಗಿ ಲೋಧಾರನ್ನು ಮರುನೇಮಕ ಮಾಡುವಂತೆ ತಿಳಿಸಿತ್ತು. ಈ ಸಂಸ್ಥೆಗಳಲ್ಲಿ ಲಾಭಕ್ಕೆ ಸಂಬಂಧಿಸಿದ ಕಮಿಷನ್ ಪಡೆಯಲು ನಿರ್ದಿಷ್ಟವಾಗಿ ಅರ್ಹರು ಎಂದು ಕಂಪೆನಿಯ ಸಾಮಾನ್ಯ ಸಭೆಯಲ್ಲಿ ವಿಶೇಷ ನಿರ್ಣಯ ಕೈಗೊಳ್ಳಲಾಗಿತ್ತು. ಬಿರ್ಲಾ ಕುಟುಂಬವು ಈ ಆಯ್ಕೆಯನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿತ್ತು. ಆ ಅರ್ಜಿ ತಿರಸ್ಕೃತಗೊಂಡಿತ್ತು. ಆ ನಂತರ ಪ್ರಕರಣವನ್ನು ಹೈಕೋರ್ಟ್ ಗೆ ವಹಿಸಿತ್ತು. ಕೋರ್ಟ್ ನಿಂದ ಶುಕ್ರವಾರ ನೀಡಿದ ಆದೇಶದಲ್ಲಿ, ಎಲ್ಲ ತೀರ್ಮಾನಗಳು ಲೋಧಾ ಏನು ಮಾಡಬೇಕು ಎಂಬುದನ್ನು ತಿಳಿಸಿವೆ. ಅದಕ್ಕೆ ಬದ್ಧರಾಗಬೇಕು. 2019 ಮತ್ತು 2020ರಲ್ಲಿ ಪ್ರತ್ಯೇಕ ಆದೇಶದಲ್ಲಿ ಸಮಿತಿಯು ಲೋಧಾರನ್ನು ಈ ಆಡಳಿತ ಮಂಡಳಿಯಿಂದ ತೆಗೆದುಹಾಕಲು ಸೂಚನೆ ನೀಡಿದೆ. ಯಾವುದೇ ಲಾಭಕ್ಕೆ ತಳುಕು ಹಾಕಿಕೊಂಡ ವೇತನ ಪಾವತಿಗೆ ಬೆಂಬಲಿಸಲು ಸಾಧ್ಯವಿಲ್ಲ ಎಂದಿದೆ. ಆದರೆ ಈ ಆದೇಶ ಅನುಷ್ಠಾನವಾಗಿಲ್ಲ.
ನ್ಯಾ. ಸಾಹಿದುಲ್ಲಾ ಮುನ್ಷಿ ತೀರ್ಪು ಕಾನೂನು ಸಮ್ಮತವಲ್ಲ
ಈ ನಿರ್ದೇಶನದ ಅರ್ಥ ಏನೆಂದರೆ, ಹರ್ಷ್ ವರ್ಧನ್ ಈಗಿನಿಂದಲೇ ಎಂ.ಪಿ. ಬಿರ್ಲಾ ಸಮೂಹವೂ ಸೇರಿ ಅದರ ಒಡೆತನದ ಎಲ್ಲ ಕಂಪೆನಿ, ಟ್ರಸ್ಟ್ ಗಳು ಮತ್ತು ಎಂಪಿ ಬಿರ್ಲಾ ಸೊಸೈಟಿಯ ನಿರ್ದೇಶಕ ಹುದ್ದೆಯನ್ನು ತ್ಯಜಿಸಬೇಕು ಎಂಉ ಬಿರ್ಲಾ ಕುಟುಂಬ ಹೇಳಿದೆ. ಈ ಪ್ರಕರಣದಲ್ಲಿ ಕಂಪೆನಿಗಳು ಕಕ್ಷೀದಾರ ಅಲ್ಲವಾದ್ದರಿಂದ ಅವುಗಳ ವಿರುದ್ಧ ನಿರ್ದೇಶನ ನೀಡಲು ಆಗಲ್ಲ. ಆದರೆ ಸಮಿತಿ ಆಡಳಿತಗಾರರ ತೀರ್ಮಾನವನ್ನು ಲೋಧಾ ಪೂರ್ತಿ ಮಾಡಬಹುದು ಎಂದು ಕೋರ್ಟ್ ಹೇಳಿದೆ. ಹರ್ಷ್ ವರ್ಧನ್ ಲೋಧಾರನ್ನು ವಿಂಧ್ಯಾ ಟೆಲಿಲಿಂಕ್ಸ್ ಲಿಮಿಟೆಡ್ ಹಾಗೂ ಬಿರ್ಲಾ ಕೇಬಲ್ ಲಿಮಿಟೆಡ್ ಗೆ ನಿರ್ದೇಶಕರಾಗಿ ಪುನರಾಯ್ಕೆ ವಿಚಾರವಾಗಿ ನ್ಯಾ. ಸಾಹಿದುಲ್ಲಾ ಮುನ್ಷಿ ತೀರ್ಪು ಕಾನೂನು ಸಮ್ಮತವಲ್ಲ ಎಂದು ಹರ್ಷ್ ವರ್ಧನ್ ಪರ ವಕೀಲರು ಹೇಳಿದ್ದಾರೆ. ನಮ್ಮ ಕಕ್ಷೀದಾರರಿಗೆ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆಯಿಂದ ಈಗಿನ ತೀರ್ಪನ್ನು ಪ್ರಶ್ನಿಸಲಾಗುವುದು ಹಾಗೂ ದೀರ್ಘಾವಧಿ ಪರಿಹಾರಕ್ಕೆ ಕೇಳಲಾಗುವುದು ಎಂದಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications