ಕೊರೊನಾವೈರಸ್ ಪಿಡುಗು ಜಗತ್ತಿನಲ್ಲಿ ವ್ಯಾಪಕ ಬದಲಾವಣೆ ತಂದಿದೆ. ಸದ್ಯ ಜನಸಾಮಾನ್ಯರು ಇದರಿಂದ ತೀವ್ರ ತೊಂದರೆಗೊಳಗಾಗಿದ್ದಾರೆ. ಲಾಕ್ಡೌನ್ ನಿಂದ ದೇಶಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.
ಆದರೆ, ಮನುಷ್ಯ ಕುಲಕ್ಕೆ ಹೊಸ ಬದಲಾವಣೆಗೆ ಅಂಟಿಕೊಳ್ಳಲು ಇದೊಂದು ಪಾಠವಾಗುತ್ತದೆ ಎನ್ನಲಾಗುತ್ತಿದೆ. ಸದಾ ಚಟುವಟಿಕೆಯಿಂದ ಇರುತ್ತಿದ್ದ ಶಿಕ್ಷಣ ವಲಯ ಇದೀಗ ಕೊರೊನಾ ಸೃಷ್ಠಿಸಿದ ಅವಾಂತರದಿಂದ ನಿಂತ ನೀರಾಗಿದೆ. ಈ ಹಿನ್ನೆಲೆಯಲ್ಲಿ ಆನ್ಲೈನ್ ಶಿಕ್ಷಣದ ಬಗ್ಗೆ ಚರ್ಚೆಗಳು ನಡೆದಿವೆ. ಕೆಲವರು ಬೇಕು ಎಂದರೆ ಇನ್ನು ಕೆಲವರು ಬೇಡ ಎನ್ನುತ್ತಿದ್ದಾರೆ.
ಆದರೆ, ಬಡ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಎಂಬುದು ಗಗನ ಕುಸುಮವೇ ಸರಿ. ಉಳ್ಳವರು ಮಕ್ಕಳು ಆನ್ಲೈನ್ ಶಿಕ್ಷಣ ಪಡೆದುಕೊಳ್ಳಲು ತಯಾರಿದ್ದಾರೆ. ಆದರೆ ಬಡವರ ಮಕ್ಕಳು ಇದನ್ನು ಹೇಗೆ ಪಡೆದಾರೂ ಎಂಬುದು ಸದ್ಯದ ಪ್ರಶ್ನೆ. ತಂದೆಯೊಬ್ಬ ತನ್ನ ಮಕ್ಕಳಿಗೆ ಆನ್ಲೈನ್ ಪಾಠಗಳನ್ನು ಕಲಿಸಲು ಮನೆಯಲ್ಲಿ ಜೀವನಧಾರಕ್ಕೆ ಇದ್ದ ಹಸುವನ್ನು ಮಾರಿ ಮೊಬೈಲ್ ಕೊಂಡು ಸುದ್ದಿಯಾಗಿದ್ದಾರೆ.
ಜ್ವಾಲಾಮುಖಿ ಎಂಬ ಗ್ರಾಮದ ಕುಲದೀಪ್ ಕುಮಾರ್
ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಜ್ವಾಲಾಮುಖಿ ಎಂಬ ಗ್ರಾಮದ ಕುಲದೀಪ್ ಕುಮಾರ್ ಎನ್ನುವರು ತಮ್ಮ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಕೊಡಿಸಬೇಕು ಎಂದು ತಮ್ಮ ಬಳಿ ಜೀವನಾಧಾರಕ್ಕೆ ಇದ್ದ ಏಕೈಕ ಹಸುವನ್ನು ಮಾರಿ ಸ್ಮಾರ್ಟ್ ಫೋನ್ ತಂದು ಕೊಟ್ಟಿದ್ದಾರೆ.
ಸ್ಮಾರ್ಟ್ಫೋನ್ ಇಲ್ಲದೇ ಕಷ್ಟಪಡುತ್ತಿದ್ದರು
2 ಮತ್ತು 4 ನೇ ತರಗತಿ ಓದುತ್ತಿರುವ ಕುಲದೀಪ್ ಕುಮಾರ್ ಮಕ್ಕಳು ಆನ್ಲೈನ್ ಪಾಠಗಳನ್ನು ಕಲಿಯಲು ಸ್ಮಾರ್ಟ್ಫೋನ್ ಇಲ್ಲದೇ ಕಷ್ಟಪಡುತ್ತಿದ್ದರು. ಕುಲದೀಪ್ ಮೊಬೈಲ್ ಕೊಳ್ಳಲು ಸಾಲಗಾರರ ಮೊರೆ ಹೋಗಿದ್ದರೂ ಸ್ಮಾರ್ಟ್ ಫೋನ್ ಕೊಳ್ಳಲು ಆಗಿರಲಿಲ್ಲ.
6 ಸಾವಿರ ರುಪಾಯಿಗೆ ಹಸು ಮಾರಾಟ
ಶಾಲೆಯ ಇತರ ಮಕ್ಕಳಂತೆ ತಮ್ಮ ಮಕ್ಕಳು ಪಾಠ ಕಲಿಯಲು ಆಗಲಿಲ್ಲವಲ್ಲ ಎಂದು ನೊಂದ ಕುಲದೀಪ್ ಕುಮಾರ್ ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಡಿಸಲೇಬೇಕು ಎಂದು ನಿರ್ಧಾರ ಮಾಡಿ ತಮ್ಮ ಬಳಿ ಇದ್ದ ಹಸುವನ್ನು 6 ಸಾವಿರ ರುಪಾಯಿಗೆ ಮಾರಿ ಸ್ಮಾರ್ಟ್ ಫೋನ್ ತಂದು ಕೊಟ್ಟಿದ್ದಾರೆ.
ಬಡ ಮಕ್ಕಳಿಗೆ ಇದು ತೊಂದರೆಯಾಗಲಿದೆ
ಸದ್ಯ ದೇಶದಲ್ಲಿ ಎದ್ದಿರುವ ಆನ್ಲೈನ್ ಶಿಕ್ಷಣ ಎಂಬ ಕೂಗು ಎಬ್ಬಿಸಿರುವ ಅವಾಂತರ ಇದು. ಕೊರೊನಾದಿಂದಾಗಿ ಶಾಲೆಗಳು ಪ್ರಾರಂಭವಾಗಿಲ್ಲ. ಇತ್ತ ಆನ್ಲೈನ್ ಶಿಕ್ಷಣವಾದರೂ ನೀಡಬೇಕು ಎಂದು ಶಾಲೆಗಳು ಮುಂದೆ ಬರುತ್ತಿವೆ. ಆದರೆ ಸ್ಮಾರ್ಟ್ ಫೋನ್ಗಳನ್ನು ಕೊಂಡುಕೊಳ್ಳಲು ಆಗದೇ ಇರುವಂತ ಬಡ ಮಕ್ಕಳಿಗೆ ಇದು ತೊಂದರೆಯಾಗಲಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications