ಕೊಯಮತ್ತೂರು-ಬೆಂಗಳೂರು ವಂದೇ ಭಾರತ್ ರೈಲು ಸೇವೆ ಡಿಸೆಂಬರ್ 30 ರಂದು ಪ್ರಾರಂಭವಾಗಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಹೇಳಿದ್ದಾರೆ.
ಈ ಸೇವೆಯು ಆರು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಕೊಯಮತ್ತೂರಿನ ಜನರು ಬೆಂಗಳೂರನ್ನು ತಲುಪಲು ಅವಕಾಶ ಮಾಡಿಕೊಡುತ್ತದೆ ಎಂದು ಭಾನುವಾರ ಕೊಯಮತ್ತೂರಿನಲ್ಲಿ ಹೇಳಿದರು.

ರೈಲಿನ ದರವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಕೋಚ್ಗಳ ಸಂಯೋಜನೆ ಮತ್ತು ಅದು ಯಾವೆಲ್ಲ ನಿಲುಗಡೆಯಲ್ಲಿ ತಂಗಲಿದೆ ಎಂಬ ಮಾಹಿತಿಯನ್ನು ಕೂಡಾ ಬಹಿರಂಗಪಡಿಸಲಾಗಿಲ್ಲ. ರೈಲು ಬೆಳಿಗ್ಗೆ ಕೊಯಮತ್ತೂರಿನಿಂದ ಹೊರಟು ಮಧ್ಯಾಹ್ನ ಬೆಂಗಳೂರು ತಲುಪುವ ಮೊದಲು ಹಿಂದಿರುಗುವ ನಿರೀಕ್ಷೆಯಿದೆ.
ಹೊಸ ದೈನಂದಿನ ರೈಲು ಆರಂಭ
ಇಂತಹ ವಂದೇ ಭಾರತ್ ರೈಲು ಸೇವೆಗಳು ತಮಿಳುನಾಡಿಗೆ ಕೇಂದ್ರ ನೀಡಿದ ಪ್ರಾಮುಖ್ಯತೆಯ ಸಂಕೇತವಾಗಿದೆ ಎಂದು ಮುರುಗನ್ ಹೇಳಿದರು. ಮುರುಗನ್ ಈ ಸಂದರ್ಭದಲ್ಲೇ ಕೊಯಮತ್ತೂರು ಮತ್ತು ಪೊಲ್ಲಾಚಿ ನಡುವೆ ಹೊಸ ದೈನಂದಿನ ನಾನ್ ರಿಸರ್ವ್ಡ್ ಎಕ್ಸ್ಪ್ರೆಸ್ ವಿಶೇಷ ರೈಲಿಗೆ ಚಾಲನೆ ನೀಡಿದರು.
ಕೊಯಮತ್ತೂರು ಸಂಸದ ಪಿ ಆರ್ ನಟರಾಜನ್ ಸಹ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ರೈಲು ಕೊಯಮತ್ತೂರು ಜಂಕ್ಷನ್ನಿಂದ ಬೆಳಗ್ಗೆ 5.20ಕ್ಕೆ ಹೊರಟು ಪೊದನೂರು ಮತ್ತು ಕಿನಾತುಕಡವು ಮೂಲಕ ಪೊಲ್ಲಾಚಿಗೆ ಬೆಳಗ್ಗೆ 6.25ಕ್ಕೆ ತಲುಪಲಿದೆ. ಪೊಲ್ಲಾಚಿಯಿಂದ ರಾತ್ರಿ 8.55 ಕ್ಕೆ ಹೊರಟು ರಾತ್ರಿ 10.15 ಕ್ಕೆ ಕೊಯಮತ್ತೂರು ತಲುಪುತ್ತದೆ.
ಈ ರೈಲು ಪೊಲ್ಲಾಚಿ ನಿಲ್ದಾಣದಿಂದ ಸಂಪರ್ಕ ರೈಲಿನ ಮೂಲಕ ದಕ್ಷಿಣದ ಜಿಲ್ಲೆಗಳಿಗೆ ಪ್ರಯಾಣ ಮಾಡಲು ಅವಕಾಶವಿರುತ್ತದೆ. ತಿರುಚೆಂದೂರಿಗೆ ಹೋಗುವ ರೈಲು ಬೆಳಿಗ್ಗೆ 7.10 ಕ್ಕೆ ಪೊಲ್ಲಾಚಿಯಿಂದ ಹೊರಡುವುದರಿಂದ, ಕೊಯಮತ್ತೂರಿನಿಂದ ಪಳನಿ, ಮಧುರೈ, ತಿರುನೆಲ್ವೇಲಿ ಮತ್ತು ತಿರುಚೆಂದೂರ್ನಂತಹ ಸ್ಥಳಗಳಿಗೆ ಹೋಗುವ ಪ್ರಯಾಣಿಕರು ಈ ಹೊಸ ರೈಲನ್ನು ಬಳಸಿಕೊಳ್ಳಬಹುದು.
ರೈಲಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುರುಗನ್, ರಾಜ್ಯ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರು ತಮಿಳುನಾಡಿಗೆ ಕೇಂದ್ರದಿಂದ ಹಣ ನೀಡದಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. "ಉದಯನಿಧಿ ರಾಜಕೀಯದಲ್ಲಿ ಅನನುಭವಿ. ರಾಜಕೀಯ ಸೌಹಾರ್ದತೆಯ ಬಗ್ಗೆ ಅವರು ಸಾಕಷ್ಟು ಕಲಿಯಬೇಕು," ಎಂದು ಹೇಳಿದರು.
ಕೊಯಮತ್ತೂರು-ಪೊಲ್ಲಾಚಿ-ಕೊಯಮತ್ತೂರಿನಿಂದ ಪ್ರತಿದಿನ ಕಾಯ್ದಿರಿಸದ ವಿಶೇಷ ಎಕ್ಸ್ಪ್ರೆಸ್ ರೈಲು ಸಂಖ್ಯೆ 06421/06422 ಅನ್ನು ಪರಿಚಯಿಸಲು ರೈಲ್ವೆ ಮಂಡಳಿಯು ಅನುಮೋದಿಸಿದೆ. ಈ ರೈಲಿಗೆ ಡಿಸೆಂಬರ್ 24 ರಂದು ಡಾ ಎಲ್ ಮುರುಗನ್ ಚಾಲನೆ ನೀಡಿದ್ದಾರೆ.
ಇದು 12 ಸ್ಲೀಪರ್ ಕ್ಲಾಸ್ ಕೋಚ್ಗಳು, ನಾಲ್ಕು ಜನರಲ್ ಸೆಕೆಂಡ್ ಕ್ಲಾಸ್ ಕೋಚ್ಗಳು ಮತ್ತು ಎರಡು ಸೆಕೆಂಡ್ ಕ್ಲಾಸ್ ಕೋಚ್ಗಳನ್ನು ಹೊಂದಿದ್ದು, ಇವು ಅಂಗವಿಕಲ ಸ್ನೇಹಿಯಾಗಿರುತ್ತವೆ. ರೈಲು ಸಂಖ್ಯೆ 06421 ಕೊಯಮತ್ತೂರಿನಿಂದ 05.20ಗಂಟೆಗೆ ಹೊರಟು 06.25ಗಂಟೆಗೆ ಪೊಲ್ಲಾಚಿ ತಲುಪಲಿದೆ. ಹಿಂದಿರುಗುವಾಗ ರೈಲು ಸಂಖ್ಯೆ 06422 ಪೊಲ್ಲಾಚಿಯಿಂದ 20.55 ಕ್ಕೆ ಹೊರಟು 22.15 ಗಂಟೆಗೆ ಕೊಯಮತ್ತೂರು ತಲುಪುತ್ತದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications