ಷೇರು ಮಾರುಕಟ್ಟೆಯ ಮೇಲೆ ಜಾಗತಿಕ ಹಾಗೂ ರಾಷ್ಟ್ರೀಯ ಬೆಳವಣಿಗೆಗಳು ನೇರವಾಗಿ ಪ್ರಭಾವ ಉಂಟು ಮಾಡುತ್ತದೆ. ಚುನಾವಣೆಯೂ ಕೂಡಾ ಷೇರುಪೇಟೆಯ ಮೇಲೆ ಪರಿಣಾಮ ಬೀರುತ್ತದೆ. ಚುನಾವಣೆಯೂ ಆರ್ಥಿಕ, ಸಾಮಾಜಿಕ ಪ್ರಭಾವ ಬೀರುವ ಕಾರಣದಿಂದಾಗಿ ಯಾವುದೇ ದೇಶದಲ್ಲಿ ನಡೆಯುವ ಚುನಾವಣೆಯು ಅತೀ ಮುಖ್ಯವಾಗಿದೆ.
ಅದರಲ್ಲೂ ಮುಖ್ಯವಾಗಿ ಭಾರತದ ಸ್ಟಾಕ್ ಮಾರುಕಟ್ಟೆ ಅಥವಾ ಷೇರು ಮಾರುಕಟ್ಟೆಯ ಮೇಲೆ ಚುನಾವಣೆಗಳು ಅತೀ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ. ಚುನಾವಣೆ ಫಲಿತಾಂಶಕ್ಕೆ ಅನುಗುಣವಾಗಿ ಸ್ಟಾಕ್ಗಳು ಏರಿಕೆ, ಇಳಿಕೆಯಾಗುತ್ತದೆ.
ನಿನ್ನೆ ಅಂದರೆ ಡಿಸೆಂಬರ್ 8ರಂದು ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಗುಜರಾತ್ನಲ್ಲಿ ಬಿಜೆಪಿ ದಾಖಲೆ ಸೃಷ್ಟಿ ಮಾಡಿದ್ದು, ಹಿಮಾಚಲ ಪ್ರದೇಶ ಕೈ ತೆಕ್ಕೆಗೆ ಸೇರಿದೆ. ಈ ನಡುವೆ ಈ ಚುನಾವಣೆಯ ಫಲಿತಾಂಶ ಷೇರುಪೇಟೆಯ ಮೇಲೆ ಹೇಗಿದೆ ನೋಡೋಣ ಮುಂದೆ ಓದಿ....
ತಜ್ಞರ ಅಭಿಪ್ರಾಯವೇನು?
ಚುನಾವಣೆ ಫಲಿತಾಂಶವು ಮಾರುಕಟ್ಟೆ ಮೇಲೆ ನೆಗೆಟಿವ್ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆಯಿದೆ. ಆದರೆ ಮುಂದಿನ ವಾರದಲ್ಲಿ ಫೆಡರಲ್ ಸಭೆಯಿದ್ದು ಇದು ಕೂಡಾ ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ. ಫಲಿತಾಂಶಕ್ಕೂ ಮುನ್ನ ನೆಗೆಟಿವ್ ಪರಿಣಾಮ ಬೀರಲಿದೆ ಅಂದುಕೊಂಡಿದ್ದರು, ಆದರೆ ಡಿಸೆಂಬರ್ 9ರಂದು ಆರಂಭಿಕ ವಹಿವಾಟಿನಲ್ಲಿ ಸ್ಟಾಕ್ ಏರಿಕೆಯಾಗಿದೆ.
ಆರಂಭಿಕ ವಹಿವಾಟು ಹೇಗಿತ್ತು?
ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್ಇ ಸೂಚ್ಯಂಕ 122.80 ಅಂಕ ಅಥವಾ ಶೇಕಡ 0.20ರಷ್ಟು ಏರಿಕೆಯಾಗಿ 62693.48ಕ್ಕೆ ತಲುಪಿದೆ. ಇನ್ನು ನಿಫ್ಟಿ 37.30 ಅಂಕ ಅಥವಾ ಶೇಕಡ 0.20ರಷ್ಟು ಏರಿ 18646.60ಕ್ಕೆ ವಹಿವಾಟು ಆರಂಭ ಮಾಡಿದೆ. ಇನ್ನು 1504 ಷೇರುಗಳು ಏರಿಕೆಯಾಗಿದ್ದರೆ, 454 ಸ್ಟಾಕ್ಗಳು ಇಳಿಕೆಯಾಗಿದೆ. ಇನ್ನು 119 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು. ಟಾಟಾ ಸ್ಟೀಲ್, ಎಚ್ಯುಎಲ್, ಇಂಡಸ್ಇಂಡ್ ಬ್ಯಾಂಕ್, ಗ್ರಾಸಿಮ್ ಇಂಡಸ್ಟ್ರೀಸ್, ಡಾ ರೆಡ್ಡೀಸ್ ಲ್ಯಾಬೋರೆಟರೀಸ್ಗಳು ನಿಫ್ಟಿಯಲ್ಲಿ ಪ್ರಮುಖ ಗೇನರ್ ಆಗಿದೆ. ಎಚ್ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರಾ, ಅಪೋಲೋ ಹಾಸ್ಪಿಟಲ್, ಇನ್ಫೋಸಿಸ್, ಆಕ್ಸಿಸ್ ಬ್ಯಾಂಕ್ ಟಾಪ್ ಸ್ಟಾಕ್ಗಳು ಆಗಿತ್ತು.
ವಹಿವಾಟಿನ ಅಂತ್ಯ ಹೇಗಿತ್ತು?
ಆದರೆ ಶುಕ್ರವಾರ ವಹಿವಾಟಿನ ಅಂತ್ಯದಲ್ಲಿ 30 ಷೇರುಗಳ ಬಿಎಸ್ಇ ಸೂಚ್ಯಂಕ 389.01 ಅಂಕ ಅಥವಾ ಶೇಕಡ 0.62ರಷ್ಟು ಇಳಿಕೆಯಾಗಿ 62,181.67ಕ್ಕೆ ತಲುಪಿದೆ. ಇನ್ನು ನಿಫ್ಟಿ 112.70 ಅಂಕ ಅಥವಾ ಶೇಕಡ 0.61ರಷ್ಟು ಇಳಿದು 18,496.60ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು 1199 ಷೇರುಗಳು ಏರಿಕೆಯಾಗಿದ್ದರೆ, 2220 ಸ್ಟಾಕ್ಗಳು ಇಳಿಕೆಯಾಗಿದೆ. ಇನ್ನು 113 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು. ಎಚ್ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ವಿಪ್ರೋ, ಹಿಂಡಾಲ್ಕೊ ಇಂಡಸ್ಟ್ರೀಸ್ ಟಾಪ್ನಲ್ಲಿತ್ತು. ನೆಸ್ಲೆ ಇಂಡಿಯಾ, ಸನ್ ಫಾರ್ಮಾ, ಡಾ ರೆಡ್ಡೀಸ್ ಲ್ಯಾಬೋರೆಟೀಸ್, ಟೈಟಾನ್ ಕಂಪನಿ, ಈಚರ್ ಮೋಟರ್ಸ್ ಸ್ಟಾಕ್ಗಳು ಇಳಿದಿದೆ.
More From GoodReturns

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications