ಬ್ಯಾಂಕಿಂಗ್ ಎಂದರೆ ಹಣಕಾಸಿನ ಶಿಸ್ತು ಇರುವ ಒಂದು ಸಾಂಸ್ಥಿಕ ರಚನೆ. ಅಲ್ಲಿ ದುಡಿಯವವರಿಗೆ ನೀಡುವ ಸಂಬಳವನ್ನು ಹ್ಯಾಂಡ್ಸಮ್ ಸಾಲರಿ ಎಂದೇ ರೂಡಿಗತವಾಗಿ ಮಾತನಾಡುತ್ತಾರೆ.
ಸಾರ್ವಜನಿಕ ವಲಯದ ಬ್ಯಾಂಕುಗಳಿಗಿಂತ ಸಂಬಳ ಸೌಲಭ್ಯಗಳನ್ನು ನೀಡಲು ದೇಶದ ಪ್ರಮುಖ ಖಾಸಗಿ ಬ್ಯಾಂಕುಗಳು ಮುಂಚೂಣಿಯಲ್ಲಿವೆ. ಹೀಗಾಗಿಯೇ ಎಚ್ಡಿಎಫ್ಸಿ, ಐಸಿಐಸಿಐ, ಕೊಟ್ಯಾಕ್ ಮಹಿಂದ್ರ, ಆಕ್ಸಿಸ್ ಬ್ಯಾಂಕುಗಳು ತ್ವರಿತವಾಗಿ ಬೆಳೆದು ಗ್ರಾಹಕರ ವಿಶ್ವಾಸ ವೃದ್ಧಿಸಿಕೊಳ್ಳುತ್ತಿವೆ.
ಅದರಲ್ಲೂ ಈ ಖಾಸಗಿ ಬ್ಯಾಂಕುಗಳ ಸಿಇಓಗಳ ಸಂಬಳ ಕೋಟಿಗಟ್ಟಲೇ ಇರುತ್ತದೆ. ಭಾರತದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಬ್ಯಾಂಕ್ ಸಿಇಓಗಳ ಬಗ್ಗೆ ಮಾಹಿತಿ ಇಲ್ಲಿದೆ...
ಆದಿತ್ಯ ಪುರಿ
ಆದಿತ್ಯ ಪುರಿ, ಬ್ಯಾಂಕ್: ಎಚ್ಡಿಎಫ್ಸಿ, ಸಿಇಒ ಆದಿತ್ಯ ಪುರಿ ಮತ್ತೊಮ್ಮೆ ೨೦20ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಆಗಿ ಹೊರಹೊಮ್ಮಿದ್ದಾರೆ. ಬ್ಯಾಂಕ್ ಬಿಡುಗಡೆ ಮಾಡಿದ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಅವರ ವೇತನ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 38 ಏರಿಕೆಯಾಗಿದೆ. ಅವರು ವಾರ್ಷಿಕವಾಗಿ 18.92 ಕೋಟಿ ರೂ. ವೇತನ ಪಡೆಯುತ್ತಾರೆ.
ಸಂದೀಪ್ ಬಕ್ಷಿ
ಸಂದೀಪ್ ಬಕ್ಷಿ, ಬ್ಯಾಂಕ್: ಐಸಿಐಸಿಐ, ಭಾರತದ ಎರಡನೇ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಐಸಿಐಸಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಂದೀಪ್ ಬಕ್ಷಿ ಅವರ ವಾರ್ಷಿಕವಾಗಿ ಒಟ್ಟು ಗಳಿಕೆ 6.31 ಕೋಟಿ ರೂ. ಬ್ಯಾಂಕ್ ವಾರ್ಷಿಕ ವರದಿಯ ಪ್ರಕಾರ, ಅಕ್ಟೋಬರ್ 2018 ರಲ್ಲಿ ಅಧಿಕಾರ ವಹಿಸಿಕೊಂಡ ಬಕ್ಷಿ ಅವರು 4.90 ಕೋಟಿ ರೂ. ಗಳಿಸಿದ್ದಾರೆ.
ಅಮಿತಾಬ್ ಚೌಧರಿ
ಅಮಿತಾಬ್ ಚೌಧರಿ, ಬ್ಯಾಂಕ್: ಅಕ್ಸಿಸ್ ಬ್ಯಾಂಕ್, ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಮಿತಾಭ್ ಚೌಧರಿ ಅವರ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ೨೦20 ಕ್ಕೆ 6.01 ಕೋಟಿ ರೂ ವಾರ್ಷಿಕ ವೇತನ ಪಡೆಯುತ್ತಾರೆ.
ಉದಯ್ ಕೊಟಕ್
ಉದಯ್ ಕೊಟಕ್, ಬ್ಯಾಂಕ್: ಕೋಟಕ್ ಮಹೀಂದ್ರಾ, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಉದಯ್ ಕೊಟಕ್ ಕಳೆದ ಹಣಕಾಸು ವರ್ಷದಲ್ಲಿ ಅವರ ವೇತನದಲ್ಲಿ ಇಳಿಕೆ ಕಂಡಿದ್ದಾರೆ. ಅವರು ವಾರ್ಷಿಕ ಒಟ್ಟು ಸಂಬಳ 2.97 ಕೋಟಿ ರೂ.ಗಳನ್ನು ಗಳಿಸಿದ್ದಾರೆ, ಇದು ಅದರ ಹಿಂದಿನ ವಾರ್ಷಿಕ ವರದಿಯ ಪ್ರಕಾರ ವರ್ಷದ ಹಿಂದಿನ ಅವಧಿಯ 3.52 ಕೋಟಿ ರೂ.ಗಳಿಂದ 18 ಪ್ರತಿಶತದಷ್ಟು ಕಡಿಮೆಯಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications