ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬೇಕಾಗಿರುವ ಸಾಲದ ಮೊತ್ತ ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ, ಈ ಸಾಲವನ್ನು ಮರುಪಾವತಿಸಲು ವಿಫಲರಾದಲ್ಲಿ ಕಾರ್ಡ್ ಬಳಕೆದಾರರು ಕ್ರಿಮಿನಲ್ ಆರೋಪ ಎದುರಿಸಬೇಕಾಗುತ್ತದೆ ಮತ್ತು ಬ್ಯಾಂಕ್ ಖಾತೆಯಲ್ಲಿ ಅಗತ್ಯ್ ಪ್ರಮಾಣದಲ್ಲಿ ಹಣವಿಲ್ಲದೆ ಚೆಕ್ ವಾಪಸಾದರೆ ನೆಗೋಶಿಯೇಬಲ್ ಇನ್ ಸ್ಟ್ರುಮೆಂಟ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ.
ಇತ್ತೀಚೆಗೆ ಬಿಡುಗಡೆಯಾದ ಎಸ್ ಬಿಐ ಕಾರ್ಡ್ ಗಳ ಐಪಿಒ ವಿವರಣೆ ಪತ್ರದ ಮಾಹಿತಿಯ ಪ್ರಕಾರ: ಕಂಪೆನಿಯು ನೆಗೋಶಿಯೇಬಲ್ ಇನ್ ಸ್ಟ್ರುಮೆಂಟ್ ಕಾಯ್ದೆ 138ರ ಅಡಿಯಲ್ಲಿ 19,201 ಪ್ರಕರಣಗಳನ್ನು ದಾಖಲಿಸಿದೆ. ಜೊತೆಗೆ 14,174 ಪ್ರಕರಣಗಳನ್ನು ಪಾವತಿ ಮತ್ತು ಸೆಟ್ಲ್ ಮೆಂಟ್ ಕಾಯ್ದೆ 2007ರ ಅಡಿಯಲ್ಲಿ ದಾಖಲಿಸಿಕೊಂಡಿದೆ.
ಕಾಯ್ದೆ 138ರ ಅಡಿಯಲ್ಲಿ ದಾಖಲಾಗುವ ಪ್ರಕರಣಗಳು ಸಾಮಾನ್ಯವಾಗಿ, ಖಾತೆಯಲ್ಲಿ ಹಣದ ಕೊರತೆಯಿಂದಾಗಿ ಇರುವುದರಿಂದ (insufficient fund) ಇಂತಹ ಪ್ರಕರಣಗಳನ್ನು ಚೆಕ್ ಬೌನ್ಸ್ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ.

ಖಾತೆಯಲ್ಲಿ ಹಣದ ಕೊರತೆಯಿಂದಾಗಿ ಎಲೆಕ್ಟ್ರಾನಿಕ್ ಪಾವತಿಗಳು ವಾಪಸ್ ಆದ ಸಂದರ್ಭಗಳಲ್ಲಿ ಹಣ ಪಾವತಿ ಮಾಡಲು ಸಾಧ್ಯವಿಲ್ಲವೆಂದು (ಬಿಲ್ ಪಾವತಿಸಲು ಆಟೋ ಡೆಬಿಟ್ / ಇಸಿಎಸ್) ಪರಿಗಣಿಸಿ ಇಂತಹ ಪ್ರಕರಣಗಳನ್ನು ಪಾವತಿ ಮತ್ತು ಸೆಟ್ಲ್ ಮೆಂಟ್ ಕಾಯ್ದೆಯಡಿಯಲ್ಲಿ ದಾಖಲಿಸಲಾಗುತ್ತದೆ. ವಿಶೇಷವೇನೆಂದರೆ ಇಂಥ ಪ್ರಕರಣಗಳ ಒಟ್ಟು ಮೊತ್ತ ಕ್ರಮವಾಗಿ 25.52 ಮತ್ತು 72.6 ಕೋಟಿಗಳಾಗಿವೆ.
ಕ್ರೆಡಿಟ್ ಕಾರ್ಡ್ ಗೆ ಯಾವುದೂ ಸಣ್ಣ ಮೊತ್ತವಲ್ಲ
ಕ್ರೆಡಿಟ್ ಕಾರ್ಡ್ ಬಿಲ್ ಬಾಕಿ ಕೇವಲ 13,290ರಿಂದ 51,220 ರುಪಾಯಿ ತನಕ ಕೂಡ ಬಾಕಿ ಪಾವತಿಸಲು ತಪ್ಪಿದಲ್ಲಿ ಈ ಮೇಲೆ ಹೇಳಿದ ಕಾಯ್ದೆಯಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಕ್ರೆಡಿಟ್ ಕಾರ್ಡ್ ಪಡೆದವರಿಗೆ ಯಾವುದೇ ಮೊತ್ತವು ಸಣ್ಣದಾಗಿರಲು ಸಾಧ್ಯವಿಲ್ಲ. ಈ ಮೊತ್ತವನ್ನು ಮರು ಪಾವತಿ ಮಾಡದೇ ಇರುವ ಪಕ್ಷದಲ್ಲಿ ಅಂತಹ ಗ್ರಾಹಕರು ಕ್ರಿಮಿನಲ್ ಆರೋಪಗಳನ್ನು ಎದುರಿಸಬೇಕಾಗುತ್ತದೆ.
ಐಪಿಒ ವಿವರಣೆ ಪತ್ರದಲ್ಲಿರುವ ಟಿಪ್ಪಣಿಯಲ್ಲಿ ಎಸ್ ಬಿಐ ಅನುಸರಿಸುವ ಒಂದು ವಿಧಾನವನ್ನು ಹೀಗೆ ವಿವರಿಸಲಾಗುತ್ತದೆ. ಎಸ್ ಬಿಐ ಕಾರ್ಡ್ ಗಳು ಎಸ್ಸೆಮ್ಮೆಸ್ ಅಥವಾ ಬೇರೆ ಯಾವುದೇ ರೀತಿಯಲ್ಲಿ ಮಾಹಿತಿ ನೀಡಿಯೂ ನಿಗದಿತ ದಿನಗಳ ಒಳಗಾಗಿ ಪಾವತಿ ಮಾಡದೇ ಇದ್ದಲ್ಲಿ, ಗ್ರಾಹಕರ ಖಾತೆಗಳನ್ನು ನಿರ್ಬಂಧಿಸಬಹುದು (ಬ್ಲಾಕ್ ಮಾಡಬಹುದು ).
ಹೀಗೆ ಖಾತೆಯನ್ನು ಬ್ಲಾಕ್ ಮಾಡುವುದು ಬಾಕಿ ಪಾವತಿ ಮಾಡುವ ಸಂಭಾವ್ಯತೆಯನ್ನು ಅವಲಂಬಿಸಿರುತ್ತದೆ. ಇದು ತಾತ್ಕಾಲಿಕವಾಗಿ ಆಗಬಹುದು ಅಥವಾ ಶಾಶ್ವತವಾಗಿಯಾದರೂ ಆಗಬಹುದಾಗಿದೆ.
6 ತಿಂಗಳಲ್ಲಿ ಬಾಕಿ ಪಾವತಿಸಬೇಕು
ಸುಮಾರು 6 ತಿಂಗಳಲ್ಲಿ ಬಾಕಿ ಪಾವತಿಸದೇ ಇರುವ ಕ್ರೆಡಿಟ್ ಕಾರ್ಡ್ ನ ಖಾತೆಯು ರಿಕವರಿ ಶಾಖೆಗೆ ಹೋಗುತ್ತದೆ. ಪಾವತಿ ದಿನಾಂಕದಿಂದ 191 ದಿನಗಳ ನಂತರ ಚಾರ್ಜ್ ಮಾಡಿದ ಖಾತೆಗಳನ್ನು ರಿಕವರಿ ಪೂಲ್ / ಪೋಸ್ಟ್ ಚಾರ್ಜ್ -ಆಫ್ ಬಕೆಟ್ ಎಂಬ ವರ್ಗ ಮಾಡಲಾಗುತ್ತದೆ ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.
ಅಂತಹ ಸಂದರ್ಭದಲ್ಲಿ ಕಂಪೆನಿಯ ಮಧ್ಯಸ್ಥಿಕೆ ಸಂಧಾನ, ದ್ವಿಭಾಷಾ ಕಾನೂನು ಸೂಚನೆ , ಪ್ರಿವಿಲೇಜ್ ಪೊಲೀಸ್ ಲೋಕ್ ಅದಾಲತ್ ಗಳಲ್ಲಿ ಸಂದರ್ಭಕ್ಕೆ ತಕ್ಕಂತೆ ದೂರನ್ನು ದಾಖಲಿಸಲಾಗುತ್ತದೆ. ನೆಗೋಶಿಯೇಬಲ್ ಇನ್ ಸ್ಟ್ರುಮೆಂಟ್ ಕಾಯ್ದೆಯ ಸೆಕ್ಷನ್ 138ರ ಅಡಿಯಲ್ಲಿ ಕಾನೂನು ಕ್ರಮವನ್ನು ಸಹ ಬಳಸಬಹುದಾಗಿದೆ. ಮೇಲೆ ಉಲ್ಲೇಖಿಸಿದ ಎರಡೂ ವಿಭಾಗಗಳು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಬಾಕಿ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚಿನ ದಂಡವನ್ನು ವಿಧಿಸುತ್ತವೆ.
ಖಾತೆಯಲ್ಲಿ ಹಣದ ಕೊರತೆಯಿಂದಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದೆ ಅಥವಾ ಸಾಕಷ್ಟು ಹಣದ ಕೊರತೆಯ ಕಾರಣದಿಂದಾಗಿ ಎಲೆಕ್ಟ್ರಾನಿಕ್ ವರ್ಗಾವಣೆಯಿಂದ (ಇಸಿಎಸ್ ) ಚೆಕ್ ಬೌನ್ಸ್ ಆಗಿರುವ ಖಾತೆಗಳಾಗಲೀ ಕಾಯ್ದೆ ಅಥವಾ ಪಾವತಿ ಮತ್ತು ಸೆಟ್ಲ್ ಮೆಂಟ್ ಈ ಎರಡೂ ಕಾಯ್ದೆ ಗಳ ಪ್ರಕಾರ ಕ್ರೆಡಿಟ್ ಕಾರ್ಡ್ ಕಂಪೆನಿಯು ಕಾರ್ಡ್ ಬಳಕೆದಾರರಿಗೆ (ಚೆಕ್ ಬೌನ್ಸ್ ಅಥವಾ ಆಟೋ ಡೆಬಿಟ್ ಆಗಿರುವ ಬಳಕೆದಾರರಿಗೆ) 30 ದಿನಗಳ ಒಳಗಾಗಿ ಮರು ಪಾವತಿ ಮಾಡುವಂತೆ ಸುತ್ತೋಲೆಯನ್ನು ಕಳುಹಿಸಲೇಬೇಕು.
ಸುತ್ತೋಲೆ ಕಳುಹಿಸಿದ 15 ದಿನಗಳ ಒಳಗಾಗಿ ಮರು ಪಾವತಿ
ಈ ಸುತ್ತೋಲೆ ಕಳುಹಿಸಿದ 15 ದಿನಗಳ ಒಳಗಾಗಿ ಮರು ಪಾವತಿ ಮಾಡದೇ ಇದ್ದಲ್ಲಿ ಮೇಲೆ ಹೇಳಿದ ಕಾಯ್ದೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುವುದು. ಕ್ರೆಡಿಟ್ ಕಾರ್ಡ್ ಬಾಕಿ ಉಳಿಸಿಕೊಂಡವರು ಅಥವಾ ತಪ್ಪಿತಸ್ಥರು ಗಮನಿಸಬೇಕಾದ ಮುಖ್ಯ ಅಂಶವೇನೆಂದರೆ ಸುತ್ತೋಲೆಯ ನಂತರವೂ ಮರುಪಾವತಿ ಮಾಡದೇ ಇರುವ ಪಕ್ಷದಲ್ಲಿ 'ಸಿಬಿಲ್' ನಂತಹ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಕಪ್ಪು ಪಟ್ಟಿಗೆ ಸೇರಿಸಬಹುದು.
ಒಂದು ವೇಳೆ ಈ ಪಟ್ಟಿಗೆ ಸೇರಿಸಿದಲ್ಲಿ ನಂತರ ಸಾಲದ ಹಣ ತೀರಿಸಿದರೂ ಭವಿಷ್ಯದಲ್ಲಿ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ಗಳನ್ನು ಪಡೆಯುವುದು ಕಷ್ಟವಾಗಬಹುದು. ಭಾರತದಲ್ಲಿ ಸುಮಾರು 3.6 ಕೋಟಿ ಕ್ರೆಡಿಟ್ ಕಾರ್ಡ್ಗಳು ಚಾಲ್ತಿಯಲ್ಲಿವೆ ಮತ್ತು 83 ಲಕ್ಷ ಕ್ರೆಡಿಟ್ ಕಾರ್ಡ್ಗಳನ್ನು ನೀಡಿರುವ ಎಸ್ಬಿಐ ಸುಮಾರು 23% ಮಾರುಕಟ್ಟೆ ಪಾಲನ್ನು ಹೊಂದಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications