ಐಎಲ್ ಅಂಡ್ ಎಫ್ ಎಸ್ ಹಣ ಪಾವತಿ ಬಾಕಿ ಉಳಿಸಿಕೊಂಡ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಂಗಾಪೂರ ಮೂಲದ "ಶೆಲ್" ಅಥವಾ ನಕಲಿ ಕಂಪೆನಿಗೆ ಸೇರಿದ 452 ಕೋಟಿ ರುಪಾಯಿ ಆಸ್ತಿಯನ್ನು ಜಾರಿ ನಿರ್ದೇಶನಾಲಯವು (ಇ.ಡಿ.) ಮುಟ್ಟುಗೋಲು ಹಾಕಿಕೊಂಡಿದೆ ಎಂದು ಮಂಗಳವಾರ ತಿಳಿಸಲಾಗಿದೆ.
ಬ್ರಿಟಿಷ್ ನಾಗರಿಕ ಜೈಮಿನ್ ವ್ಯಾಸ್ ಗೆ ಸೇರಿದ ಶೆಲ್ ಕಂಪೆನಿಯಾದ ಎ.ಎಸ್. ಕೋಲ್ ಪಿಟಿಇ ಸಿಂಗಾಪೂರ್ ಗೆ ಸೇರಿದ ಷೇರುಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ಮಾಹಿತಿಯನ್ನು ನೀಡಲಾಗಿದೆ.
ಇದು 2019ನೇ ಸಾಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣ. ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗ ದಳವು ಐಎಲ್ ಅಂಡ್ ಎಫ್ ಎಸ್ ಸಮೂಹ ಕಂಪೆನಿಗೆ ಸೇರಿದ ಐಆರ್ ಎಲ್ ಮತ್ತು ಐಟಿಎನ್ ಎಲ್ ಹಾಗೂ ಅದರ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸಿತ್ತು.

ವಿಚಾರಣೆ ಮೂಲಕ ಗೊತ್ತಾಗಿರುವುದು ಏನೆಂದರೆ, ಐಎಲ್ ಅಂಡ್ ಎಫ್ ಎಸ್ ವಂಚನೆಗೆ ಯೋಜನೆ ಹಾಕಿಕೊಂಡು ವಂಚಿಸಲಾಗಿದೆ. ಜತೆಗೆ ಭಾರತದ ಬ್ಯಾಂಕ್ ಗಳಿಗೂ ಜೈಮಿನ್ ವ್ಯಾಸ್ ಎಂಬಾತ ವಂಚಿಸಿದ್ದಾನೆ ಎಂದು ಇ.ಡಿ. ಹೇಳಿದೆ.
ಈ ಹಿಂದೆ ಐಎಫ್ ಐಎನ್ ಸಮಿತಿ ನಿರ್ದೇಶಕರ 126 ಕೋಟಿ ರುಪಾಯಿಯ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ವಶಪಡಿಸಿಕೊಂಡೀದೆ. ಐಎಫ್ ಐಎನ್ ಗೆ ಸಾಲ ಬಾಕಿ ಉಳಿಸಿಕೊಂಡ SIVA ಗ್ರೂಪ್ ಮತ್ತು ABG ಗ್ರೂಪ್ ಗೆ ಸೇರಿದ 1400 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿತ್ತು.
ಇ.ಡಿ.ಯಿಂದ ಐಎಫ್ ಐಎನ್ ನಿರ್ದೇಶಕ ಅರುಣ್ ಕುಮಾರ್ ಸಹಾ ಮತ್ತು ಐಟಿಎನ್ ಎಲ್ ಮಾಜಿ ಎಂ.ಡಿ. ಕರುಣಾಕರನ್ ರಾಮ್ ಚಂದ್ ಅವರನ್ನು ಬಂಧಿಸಲಾಗಿತ್ತು. ಅದಕ್ಕೂ ಮುನ್ನ ಮುಂಬೈ ಪಿಎಂಎಲ್ ವಿಶೇಷ ಕೋರ್ಟ್ ನಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
ಐಎಲ್ ಎಫ್ ಎಸ್ ತಮಿಳುನಾಡು ಪವರ್ ಕಂಪೆನಿ ಲಿಮಿಟೆಡ್ (ಐಟಿಪಿಸಿಎಲ್) ನಲ್ಲಿನ 8.86% ಷೇರನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸದ್ಯಕ್ಕೆ ಅದರ ಮೌಲ್ಯ 452 ಕೋಟಿ ರುಪಾಯಿ ಇದೆ ಎನ್ನಲಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications