ಈ ವರ್ಷದ ಕೊನೆಯಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆ ಮುಗಿದ ನಂತರ ಎಚ್ 1 ಬಿ ವೀಸಾಗಳನ್ನು ಅಮಾನತುಗೊಳಿಸುವ ಆದೇಶವನ್ನು ಅಮೆರಿಕ ಸರ್ಕಾರ ಹಿಂತೆಗೆದುಕೊಳ್ಳುತ್ತದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಹೇಳಿದ್ದಾರೆ.
ಇಂಡಿಯಾ ಟುಡೆ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ನಂದನ್ ನಿಲೇಕಣಿ, ಪ್ರತಿಭೆಯ ಮುಕ್ತ ಹರಿವು ಇರಬೇಕೆಂಬುದು ನನ್ನ ಅಭಿಪ್ರಾಯ. ಯುಎಸ್ನಲ್ಲಿ ಎಚ್ 1 ಬಿ ವೀಸಾಗಳ ಅಮಾನತು ರದ್ದುಪಡಿಸಲಾಗುವುದು ಎಂದು ನಾನು ಖಚಿತವಾಗಿ ಭಾವಿಸುತ್ತೇನೆ ಎಂದಿದ್ದಾರೆ
ಪ್ರಸ್ತುತ, ಇನ್ಫೋಸಿಸ್ನಂತಹ ಭಾರತೀಯ ಸಂಸ್ಥೆಗಳು ಟ್ರಂಪ್ ಆಡಳಿತವು ಇತ್ತೀಚೆಗೆ ಎಚ್ 1 ಬಿ ವೀಸಾಗಳನ್ನು ಅಮಾನತುಗೊಳಿಸುವ ನಿರ್ಧಾರದಿಂದ ಉಂಟಾದ ಪರಿಸ್ಥಿತಿಯನ್ನು ನಿಭಾಯಿಸಿದೆ ಮತ್ತು ಅಪಾಯಕಾರಿ ಆಗಬಹುದಾದ ಸಂಗತಿಯನ್ನು ತಗ್ಗಿಸಿದೆ. ಆದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ನಂತರ ಪರಿಸ್ಥಿತಿ ಸಾಮಾನ್ಯವಾಗಲಿದೆ ಎಂದು ಅವರು ಆಶಿಸಿದ್ದಾರೆ.
ಆತಂಕಗೊಳ್ಳುವ ಸಂಗತಿ ಇಲ್ಲ
ಟ್ರಂಪ್ ಆಡಳಿತದ ವೀಸಾ ರದ್ದಾದ ಕ್ರಮದ ಬಗ್ಗೆ ಭಾರತೀಯ ಐಟಿ ಕಂಪನಿಗಳ ಮೇಲೆ ಬೀರಿದ ಪರಿಣಾಮದ ಬಗ್ಗೆ ಮಾತನಾಡಿದ ನಂದನ್ ನಿಲೇಕಣಿ ಅಮೆರಿಕದಲ್ಲಿ, ಸುಮಾರು 10,000 ಇನ್ಫೋಸಿಸ್ ಉದ್ಯೋಗಿಗಳು ಅಲ್ಲಿನ ಸ್ಥಳೀಯರು. ಇದು ಯುಎಸ್ನಲ್ಲಿನ ನಮ್ಮ ಉದ್ಯೋಗಿಗಳ ಮಹತ್ವದ ಭಾಗವಾಗಿದೆ, ಆದ್ದರಿಂದ ಇತ್ತೀಚಿನ ನಿರ್ಧಾರದಿಂದ ನಮಗೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಇನ್ಫೋಸಿಸ್ ನಂತಹ ಭಾರತೀಯ ಸಂಸ್ಥೆಗಳು ಅಪಾಯವನ್ನು ಕಡಿಮೆ ಮಾಡಿಕೊಂಡಿವೆ. ಆತಂಕಗೊಳ್ಳುವ ಸಂಗತಿ ಇಲ್ಲ ಎಂದಿದ್ದಾರೆ.
ಹಣ್ಣುಗಾಯಿ ನೀರುಗಾಯಿ ಮಾಡಿದೆ
ಕಳೆದ ಮೂರು ತಿಂಗಳಲ್ಲಿ ಕೊರೊನಾವೈರಸ್ ಪ್ರಭಾವ ರೆಸ್ಟೋರೆಂಟ್, ಬಾರ್, ಸಲೂನ್, ಏರ್ಲೈನ್ಸ್, ಪ್ರವಾಸೋದ್ಯಮ ಮುಂತಾದ ಕ್ಷೇತ್ರಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ಆದರೆ, ಮತ್ತೊಂದೆಡೆ, ತಂತ್ರಜ್ಞಾನ-ಅವಲಂಬಿತ ಮತ್ತು ಮನೆಯಿಂದ ಕೆಲಸ ಮಾಡುವಂತಹ ವ್ಯವಹಾರಗಳು ಉತ್ತಮವಾಗಿವೆ. ಏಕೆಂದರೆ ಅವುಗಳು ಒಂದೇ ರೀತಿಯ ಅಡೆತಡೆಯನ್ನು ಎದುರಿಸಲಿಲ್ಲ. ಇನ್ಫೋಸಿಸ್ನಲ್ಲಿ, 46 ದೇಶಗಳಲ್ಲಿ 2,40,000 ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಲು ಸಾಧ್ಯವಾಯಿತು ಎಂದಿದ್ದಾರೆ.
ಪುನರ್ ವಿಮರ್ಶೆ ನಡೆಯಬೇಕಿದೆ
ಕೊರೊನಾವೈರಸ್ ಇಡೀ ಜಗತ್ತನ್ನು ಕೆಲಸ ಮಾಡುವ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು ಕಾರಣವಾಗಿದೆ ಎಂದು ನಂದನ್ ನೆಲಕಣಿ ಹೇಳಿದರು. ಸುಪ್ರೀಂ ಕೋರ್ಟ್ ಸಹ ಈಗ ಆನ್ಲೈನ್ನಲ್ಲಿ ಪ್ರಕರಣಗಳನ್ನು ಆಲಿಸುತ್ತಿದೆ. ಎಲ್ಲಾ ವ್ಯವಹಾರಗಳು ಹೆಚ್ಚು ಡಿಜಿಟಲ್ ಆಗಲು ಮತ್ತು ಉತ್ಪನ್ನ ಮತ್ತು ಸೇವೆಗಳನ್ನು ಸುರಕ್ಷಿತ ರೀತಿಯಲ್ಲಿ ತಲುಪಿಸುವ ಮಾರ್ಗಗಳನ್ನು ಹುಡುಕುತ್ತಿವೆ ಎಂದರು ಸಾಂಕ್ರಾಮಿಕವು ದುರಂತವಾಗಿ ಬಂದಿದ್ದರೂ, ಸಂಸ್ಥೆಗಳಿಗೆ ತಮ್ಮನ್ನು ತಾವು ಪರಿವರ್ತಿಸಿಕೊಳ್ಳುವ ಅವಕಾಶವೂ ಇದಾಗಿದೆ ಎಂದು ನಿಲೇಕಣಿ ಅವರು ಹೇಳಿದರು.
ಜನ ಇನ್ಮುಂದೆ ಡಿಜಿಟಲ್ ಮತ್ತು ಹೆಚ್ಚು ಹೈಬ್ರಿಡ್ ಆಗುವ ಸಾಧ್ಯತೆಯಿದೆ
ಜನ ಇನ್ಮುಂದೆ ಡಿಜಿಟಲ್ ಮತ್ತು ಹೆಚ್ಚು ಹೈಬ್ರಿಡ್ ಆಗುವ ಸಾಧ್ಯತೆಯಿದೆ. ಪ್ರಸ್ತುತ ಪರಿಸ್ಥಿತಿ ಸಾಮಾನ್ಯವಲ್ಲ. ನಾವು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ. ಮುಂದಿನ ಕಾಲವು ಹೈಬ್ರಿಡ್ ಆಗಿರುತ್ತದೆ. ಇದು ನಾವು ಎದುರಿಸುತ್ತಿರುವ ಭೀಕರ ಬಿಕ್ಕಟ್ಟಿನ ಸಂದರ್ಭದಲ್ಲಿ ಅನಿವಾರ್ಯವಾದದ್ದು ಎಂದು ಎಂದು ನಿಲೇಕಣಿ ಹೇಳಿದರು.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ



Click it and Unblock the Notifications