ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್ಸಿಟಿಸಿ) ಹೊಸದಾಗಿ ಪ್ರವಾಸವನ್ನು ಆರಂಭ ಮಾಡಿದೆ. ಭಾರತ್ ಗೌರವ್ ರೈಲು ಪ್ರವಾಸವನ್ನು ಐಆರ್ಸಿಟಿಸಿ ಆರಂಭ ಮಾಡಿದ್ದು, ಇದು ಜುಲೈ 1ರಿಂದ ಶುರುವಾಗಲಿದೆ. ಇದಕ್ಕೆ ಮಾ ವೈಷ್ಣೋ ದೇವಿ ದರ್ಶನ್ ಯಾತ್ರಾ ಎಂದು ಐಆರ್ಸಿಟಿಸಿ ಹೆಸರಿರಿಸಿದೆ. ಹಲವಾರು ಪ್ರದೇಶಗಳಿಗೆ ಈ ರೈಲು ಪ್ರವಾಸವಿದೆ.
ಈ ಬಗ್ಗೆ ಐಆರ್ಸಿಟಿಸಿಯ ಜನರಲ್ ಮ್ಯಾನೆಜರ್ ಕೆ ರವಿಕುಮಾರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. "ಈ ಪ್ರವಾಸ ಪ್ಯಾಕೇಜ್ ಮುಖ್ಯವಾಗಿ ಹಿರಿಯ ನಾಗರಿಕರಿಗಾಗಿ ಜಾರಿ ಮಾಡಲಾಗುತ್ತಿದೆ. ಧಾರ್ಮಿಕ ಹಾಗೂ ಐತಿಹಾಸಿಕ ಎರಡೂ ಸ್ಥಳಗಳ ಪ್ರವಾಸ ಇದರಲ್ಲಿ ಒಳಗೊಂಡಿರುತ್ತದೆ," ಎಂದು ಕೆ ರವಿಕುಮಾರ್ ತಿಳಿಸಿದ್ದಾರೆ. ಹಾಗೆಯೇ ರೈಲು ಏರಬಹುದಾದ ನಿಲ್ದಾಣಗಳ ಬಗ್ಗೆ ವಿವರ ನೀಡಿದ್ದಾರೆ.

ಎಲ್ಲಿ ಈ ಪ್ರವಾಸ ರೈಲು ಹತ್ತಬಹುದು?
ರೈಲನ್ನು ಕೊಚುವೇಲಿ, ನಾಗರ್ಕೋಯಿಲ್, ತಿರುನೆಲ್ವೇಲಿ, ವಿರುದುನಗರ, ಮಧುರೈ, ದಿಂಡಿಗಲ್, ತಿರುಚಿ, ತಂಜಾವೂರು, ಕುಂಭಕೋಣಂ, ಮೈಲಾಡುತುರೈ, ಚಿದಂಬರಂ, ತ್ರಿಪಾದ್ರಿಪುಲಿಯೂರ್, ವಿಲ್ಲುಪುರಂ, ಚೆಂಗಲ್ಪೇಟ್, ತಾಂಬರಂ,ಎಗ್ಮೋರ್, ಮತ್ತು ಚೆನ್ನೈನಲ್ಲಿ ಹತ್ತಬಹುದಾಗಿದೆ.
ಯಾವೆಲ್ಲ ಪ್ರದೇಶಕ್ಕೆ ಈ ರೈಲು ಪ್ರವಾಸ?
ಹೈದಾರಾಬಾದ್, ಆಗ್ರಾ, ಮಥುರಾ, ಶ್ರೀ ಮಾತ ವೈಷ್ಣೋ ದೇವಿ, ಕತ್ರಾ, ಅಮೃತಸರ, ದೆಹಲಿಯು ಈ ಪ್ರವಾಸ ಪ್ಯಾಕೇಜ್ನಲ್ಲಿ ಒಳಗೊಂಡಿರುವ ಪ್ರದೇಶಗಳಾಗಿದೆ. ಇಕಾನಮಿಕ್ ಕ್ಲಾಸ್ಗೆ (ಎಸ್ಎಲ್) ಪ್ರತಿ ವಯಸ್ಕ ವ್ಯಕ್ತಿಗೆ ರೂಪಾಯಿ ಪ್ಯಾಕೇಜ್ ದರ ಇದ್ದರೆ, ಕನ್ಫಾರ್ಟ್ (3 ಎಸಿ) ಗೆ 40,380 ಪ್ಯಾಕೇಜ್ನಲ್ಲಿ ಒಳಗೊಂಡಿರುತ್ತದೆ. ಇನ್ನು 5ರಿಂದ 11 ವರ್ಷದ ಮಕ್ಕಳಿಗೆ ಇಕಾನಮಿಕ್ ಕ್ಲಾಸ್ನಲ್ಲಿ 21,010 ರೂಪಾಯಿ ಮತ್ತು ಕನ್ಫಾರ್ಟ್ಗೆ 38,490 ರೂಪಾಯಿ ಆಗಿದೆ.
ಪ್ಯಾಕೇಜ್ನಲ್ಲಿ ಏನೆಲ್ಲ ಇರುತ್ತದೆ?
ಪ್ಯಾಕೇಜ್ನಲ್ಲಿ ಸಸ್ಯಾಹಾರಿ ಊಟ, ವಸತಿ, ಸಾರಿಗೆ, ಪ್ರವಾಸದ ಬೆಂಗಾವಲುಗಳು, ಭದ್ರತೆ ಮತ್ತು ಪ್ರಯಾಣ ವಿಮೆಗಳು ಒಳಗೊಂಡಿರುತ್ತದೆ. ಇನ್ನು ಪ್ರವಾಸದಲ್ಲಿ ದೇವಾಲಯದ ಭೇಟಿಗಳಿಗಾಗಿ ಪ್ರಯಾಣಿಕರು ದರ್ಶನಕ್ಕಾಗಿ ತಮ್ಮದೇ ಆದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದೆ.
ಪ್ರತಿಕ್ರಿಯೆಯ ಆಧಾರದ ಮೇಲೆ, ವೈಯಕ್ತಿಕ ಪ್ರವಾಸ ಗುಂಪುಗಳಿಗೆ ಕಸ್ಟಮೈಸ್ ಮಾಡಿದ ಪ್ರವಾಸಗಳನ್ನು ಸಹ ಆಯೋಜಿಸಬಹುದು ಎಂದು ಶ್ರೀ ರವಿಕುಮಾರ್ ಹೇಳಿದರು. IRCTC ಯ ವೆಬ್ ಪೋರ್ಟಲ್ www.irctctourism.com ನಲ್ಲಿ ಇದುವರೆಗೆ ಕನಿಷ್ಠ 170 ಬುಕಿಂಗ್ಗಳನ್ನು ಮಾಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ಪ್ರವಾಸೋದ್ಯಮ ಮಾಹಿತಿ ಮತ್ತು ಸೌಲಭ್ಯ ಕೇಂದ್ರದಿಂದ ಅಥವಾ (ಜನಸಮೂಹ) 8287932070 ನಲ್ಲಿ ಪಡೆಯಬಹುದು.
ಐದು ಹೆಚ್ಚುವರಿ ಬೇಸಿಗೆ ವಿಶೇಷ ರೈಲುಗಳು
ನವದೆಹಲಿ- ವಾರಾಣಾಸಿ ವಿಶೇಷ ರೈಲು
ರೈಲು ನಂಬರ್: 04052/04051
ದಿನಾಂಕ: ಜೂನ್ 4ರಿಂದ ಜೂನ್ 25ರವರೆಗೆ ಪ್ರತಿ ಭಾನುವಾರ
ಸಮಯ: ನವದೆಹಲಿಯಲ್ಲಿ 7:20ಕ್ಕೆ ರೈಲು ಆರಂಭವಾಗಲಿದೆ.
ರಿಟರ್ನ್ ಸಮಯ: ಜೂನ್ 5ರಿಂದ ಜೂನ್ 25ರವರೆಗೆ ಪ್ರತಿ ಸೋಮವಾರ
ರಿಟರ್ನ್ ಸಮಯ: 6:35ಕ್ಕೆ ವಾರಾಣಾಸಿಯಿಂದ ರೈಲು ವಾಪಾಸ್ ಹೊರಡಲಿದೆ.
ನವದೆಹಲಿಯಿಂದ ಶ್ರೀ ಮಾತ ವೈಷ್ಣೋ
ರೈಲು ನಂಬರ್: 04071/04072
ದಿನಾಂಕ: ಜೂನ್ 2ರಿಂದ ಜೂನ್ 30ರವರೆಗೆ ಪ್ರತಿ ಶುಕ್ರವಾರ
ಸಮಯ: ನವದೆಹಲಿಯಲ್ಲಿ 11.15ಕ್ಕೆ ರೈಲು ಆರಂಭವಾಗಲಿದೆ.
ರಿಟರ್ನ್ ಸಮಯ: ಜೂನ್ 3ರಿಂದ ಜುಲೈ 01ರವರೆಗೆ ಪ್ರತಿ ಶನಿವಾರ
ರಿಟರ್ನ್ ಸಮಯ: 6:30ಕ್ಕೆ ಶ್ರೀ ಮಾತ ವೈಷ್ಣೋ ರೈಲು ವಾಪಾಸ್ ಹೊರಡಲಿದೆ.
ನವದೆಹಲಿ - ಉಧಮ್ಪುರ
ರೈಲು ನಂಬರ್: 04075/04076
ದಿನಾಂಕ: ಜೂನ್ 1ರಿಂದ ಜೂನ್ 29ರವರೆಗೆ ಪ್ರತಿ ಗುರುವಾರ
ಸಮಯ: ನವದೆಹಲಿಯಿಂದ 11.15ಕ್ಕೆ ರೈಲು ಆರಂಭವಾಗಲಿದೆ.
ರಿಟರ್ನ್ ಸಮಯ: ಜೂನ್ 2ರಿಂದ ಜೂನ್ 30ರವರೆಗೆ ಪ್ರತಿ ಶುಕ್ರವಾರ
ರಿಟರ್ನ್ ಸಮಯ: 7:00ಕ್ಕೆ ಉಧಮ್ಪುರಕ್ಕೆ ರೈಲು ವಾಪಾಸ್ ಹೊರಡಲಿದೆ.
ನವದೆಹಲಿ- ವಾರಾಣಾಸಿ
ರೈಲು ನಂಬರ್: 04080/04079
ದಿನಾಂಕ: ಜೂನ್ 3ರಿಂದ ಜೂನ್ 30ರವರೆಗೆ ಪ್ರತಿ ಸೋಮವಾರ, ಶುಕ್ರವಾರ, ಶನಿವಾರ
ಸಮಯ: ನವದೆಹಲಿಯಿಂದ 07.20ಕ್ಕೆ ರೈಲು ಆರಂಭವಾಗಲಿದೆ.
ರಿಟರ್ನ್ ಸಮಯ: ಜೂನ್ 4ರಿಂದ ಜುಲೈ 1ರವರೆಗೆ ಪ್ರತಿ ಮಂಗಳವಾರ, ಶನಿವಾರ ಮತ್ತು ಭಾನುವಾರ
ರಿಟರ್ನ್ ಸಮಯ: 6.35ಕ್ಕೆ ವಾರಾಣಾಸಿಯಿಂದ ರೈಲು ವಾಪಾಸ್ ಹೊರಡಲಿದೆ.
ನವದೆಹಲಿ - ಶ್ರೀ ಮಾತ ವೈಷ್ಣೋ ದೇವಿ ಕತ್ರಾ
ರೈಲು ನಂಬರ್: 04081/04082
ದಿನಾಂಕ: ಜೂನ್ 3ರಿಂದ ಜೂನ್ 24ರವರೆಗೆ ಪ್ರತಿ ಶನಿವಾರ
ಸಮಯ: ನವದೆಹಲಿಯಿಂದ 11:15ಕ್ಕೆ ರೈಲು ಆರಂಭವಾಗಲಿದೆ.
ರಿಟರ್ನ್ ಸಮಯ: ಜೂನ್ 4ರಿಂದ ಜೂನ್ 25ರವರೆಗೆ ಪ್ರತಿ ಭಾನುವಾರ
ರಿಟರ್ನ್ ಸಮಯ: 6:30ಕ್ಕೆ ಶ್ರೀ ಮಾತ ವೈಷ್ಣೋ ದೇವಿ ಕತ್ರಾದಿಂದ ರೈಲು ವಾಪಾಸ್ ಹೊರಡಲಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?



Click it and Unblock the Notifications