ಎಲ್ಐಸಿ ಐಪಿಒ ಮೇ 4ರಂದು ಆರಂಭವಾಗಿದೆ. ಈ ದಿನವೇ ಆರ್ಬಿಐ ರೆಪೋ ದರವನ್ನು ಏರಿಕೆ ಕೂಡಾ ಮಾಡಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಎಲ್ಐಸಿ ಐಪಿಒ ನಡುವೆ ರೆಪೋ ದರ ಏರಿಕೆಯ ಬಗ್ಗೆ ಮೀಮ್ಸ್ಗಳು ಹರಿದಾಡುತ್ತಿದೆ. ಬಾಹುಬಲಿ ಸಿನಿಮಾದಲ್ಲಿ ಬಾಹುಬಲಿಗೆ ಕಟ್ಟಪ್ಪ ಮಾಡಿದ ಮಿತ್ರದ್ರೋಹಕ್ಕೆ ಈ ಬೆಳವಣಿಗೆಯನ್ನು ಹೋಲಿಕೆ ಮಾಡಲಾಗಿದೆ.
ಕೇಂದ್ರ ಬ್ಯಾಂಕ್ ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಗ್ರೇ ಮಾರ್ಕೆಟ್ ಪಾತಾಳಕ್ಕೆ ಕುಸಿದಿದೆ. ಆರ್ಬಿಐ ರೆಪೋ ದರದಲ್ಲಿ 40 ಮೂಲಾಂಕವನ್ನು ಹೆಚ್ಚಳ ಮಾಡಿದೆ. ಇದರಿಂದಾಗಿ ರೆಪೋ ದರವು ಶೇಕಡ 4ರಿಂದ ಶೇಕಡ 4.40ಗೆ ಏರಿಕೆ ಕಂಡಿದೆ. ಸೆಂಟ್ರಲ್ ಬ್ಯಾಂಕ್ ನಗದು ಮೀಸಲು ಅನುಪಾತವನ್ನು 50 ಬೇಸಿಸ್ ಪಾಯಿಂಟ್ಗಳಿಂದ ಹೆಚ್ಚಿಸಿದೆ.
ಈ ಎಲ್ಲಾ ಬೆಳವಣಿಗೆಯು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನವನ್ನು ಸೆಳೆದಿದೆ. ನೆಟ್ಟಿಗರು ಮೀಮ್ಸ್ಗಳ ಮೂಲಕ ಎಲ್ಐಸಿ ಐಪಿಒ ನಡುವೆ ಆರ್ಬಿಐ ರೆಪೋ ದರ ಏರಿಕೆ ಮಾಡಿದ್ದನ್ನು ಟೀಕೆ ಮಾಡುತ್ತಿದ್ದಾರೆ. ಮೀಮ್ಸ್ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅನ್ನು ಕಟ್ಟಪ್ಪ ಎಂದು ಹಾಗೂ ಜೀವ ವಿಮಾ ನಿಗಮ (ಎಲ್ಐಸಿ) ಐಪಿಒ ಅನ್ನು ಬಾಹುಬಲಿ ಎಂದು ತೋರಿಸಲಾಗಿದೆ. ಕಟ್ಟಪ್ಪ ಬಾಹುಬಲಿಗೆ ಮಿತ್ರದ್ರೋಹ ಮಾಡಿದ್ದಾನೆ ಎಂದು ಮೀಮ್ಸ್ ಹೇಳಿದೆ.

ಸಾಮಾಜಿಕ ಜಾಲತಾಣದಲ್ಲಿ ಕಂಡ ಮೀಮ್ಸ್, ಟ್ವೀಟ್ಗಳನ್ನು ನೋಡಿ!
"ಆರ್ಬಿಐ ರೆಪೋ ದರವನ್ನು ಏರಿಕೆ ಮಾಡಿದ್ದು, ಈಗ ದೊಡ್ಡ ವಿಚಾರವಲ್ಲ, ಆದರೆ ಎಲ್ಐಸಿ ಐಪಿಒ ದಿನವೇ ಆರ್ಬಿಐ ತರಾತುರಿಯಲ್ಲಿ ರೆಪೋ ದರವನ್ನು ಏರಿಕೆ ಮಾಡಿದ್ದು ಪ್ರಮುಖ ವಿಚಾರವಾಗಿದೆ," ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
ಇನ್ನು ಕೆಲವರು ಆರ್ಬಿಐ ಅನ್ನು ರಜನಿಕಾಂತ್ ಎಂಬಂತೆ ಪೋಸ್ಟ್ಗಳನ್ನು ಮಾಡಿದ್ದಾರೆ. ನಿಮ್ಮ ಬುಡವನ್ನೇ ಅಲುಗಾಡಿಸಲಿಲ್ಲವೇ ಎಂದು ಕೇಳುವಂತೆ ಉಲ್ಲೇಖಿಸಿ ಮೀಮ್ಸ್ಗಳನ್ನು ಮಾಡಿದ್ದಾರೆ. "ಇನ್ನೋರ್ವ ಟ್ವಿಟ್ಟಿಗರು, "ಇಂದು ಬೆಳಿಗ್ಗೆ ನಾನು ಎಲ್ಐಸಿ ಐಪಿಒಗೆ ಅರ್ಜಿ ಸಲ್ಲಿಕೆ ಮಾಡಿದೆ. ಆದರೆ ಮಧ್ಯಾಹ್ನದ ಒಳಗೆ ಅರ್ಜಿಯನ್ನು ಹಿಂದಕ್ಕೆ ಪಡೆದೆ. ಅದಕ್ಕೆ ಕಾರಣ ಆರ್ಬಿಐ ರೆಪೋ ದರ ಏರಿಕೆ ಮಾಡಿರುವುದು," ಎಂದು ಹೇಳಿದ್ದಾರೆ.
ಆರ್ಬಿಐ ರೆಪೋ ದರ ಏರಿಕೆ ಮಾಡುತ್ತಿದ್ದಂತೆ ಎಲ್ಐಸಿಯು ಆರ್ಬಿಐ ಬಳಿ, "ಅಣ್ಣ ನೀನು ಏನು ಮಾಡುತ್ತಿದ್ದೀಯಾ," ಎಂದು ಪ್ರಶ್ನೆ ಕೇಳುತ್ತಿರುವ ಟ್ವೀಟ್ ಕೂಡಾ ಮಾಡಲಾಗಿದೆ. ಆರ್ಬಿಐ ಗವರ್ನರ್ ರೆಪೋ ದರ ಏರಿಕೆ ಘೋಷಣೆ ಮಾಡಿದ ಬಳಿಕ ನಡೆದ ಬೆಳವಣಿಗೆಗಳನ್ನು ನೋಡಿ, "ನಾನು ಏನು ಮಾಡಿದೆ," ಎಂದು ಚಿಂತೆ ಮಾಡುವಂತಹ ಮೀಮ್ಸ್ಗಳನ್ನು ಕೂಡಾ ಮಾಡಲಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications