ಸರ್ಕಾರಿ ಸ್ವಾಮ್ಯದ ವಿಮಾ ದೈತ್ಯ ಜೀವ ವಿಮಾ ನಿಗಮದ (ಎಲ್ಐಸಿ) ಮೌಲ್ಯವು ಅದರ ವಿತರಣೆಯಿಂದ ರೂಪಾಯಿ 80,000 ಕೋಟಿಗಿಂತ ಅಧಿಕ ಕುಸಿತ ಕಂಡಿದೆ. ಸುಮಾರು ರೂಪಾಯಿ 42,500 ಕೋಟಿ ಮಾರುಕಟ್ಟೆ ಬಂಡವಾಳೀಕರಣ (ಎಂ-ಕ್ಯಾಪ್) ಮೇ 12 ರಂದು ಚೊಂಚಲ ನಷ್ಟದೊಂದಿಗೆ ಆರಂಭವಾಗಿದೆ. ಬಳಿಕ ರೂಪಾಯಿ 38,000 ಕೋಟಿಗಳನ್ನು ಕಳೆದುಕೊಂಡಿದೆ.
949 ರ ವಿತರಣೆಯ ಬೆಲೆಯಲ್ಲಿ, ಎಲ್ಐಸಿಯ ಮಾರುಕಟ್ಟೆ ಬಂಡವಾಳವು ರೂಪಾಯಿ 6,00,242 ಕೋಟಿಗಳಷ್ಟಿತ್ತು. ಬಿಎಸ್ಸಿಯಲ್ಲಿನ ಪಟ್ಟಿಯ ಬೆಲೆಯನ್ನು ಆಧರಿಸಿ, ಎಲ್ಐಸಿಯ ಮೌಲ್ಯಮಾಪನವು ರೂಪಾಯಿ 5,57,675 ಕೋಟಿಗೆ ಇಳಿದಿದೆ. ಇದರ ಪರಿಣಾಮವಾಗಿ ಸುಮಾರು ರೂಪಾಯಿ 42,500 ಕೋಟಿ ನಷ್ಟವಾಗಿದೆ.
ಶುಕ್ರವಾರದ ವಹಿವಾಟಿನ ಮುಕ್ತಾಯದ ನಂತರ ಎಲ್ಐಸಿಯ ಎಂ-ಕ್ಯಾಪ್ ಸುಮಾರು ರೂಪಾಯಿ 5,19,630 ರಷ್ಟಿದ್ದು, ಇಶ್ಯೂ ಬೆಲೆಯಿಂದ ಸುಮಾರು 80,600 ಕೋಟಿ ಮೌಲ್ಯದ ನಷ್ಟ ಕಂಡಿದೆ. ಯಾಯಿತಿ ಪಟ್ಟಿಯ ಬೆಲೆಯಿಂದ ಸುಮಾರು ರೂಪಾಯಿ 38,045 ಕೋಟಿ ನಷ್ಟವಾಗಿದೆ.

ಶುಕ್ರವಾರ, ವಿಮಾ ಸಂಸ್ಥೆಯ ಷೇರುಗಳು ರೂಪಾಯಿ 821.55 ಕ್ಕೆ ವಹಿವಾಟು ಕೊನೆ ಮಾಡಿದೆ. ಅದರ ವಿತರಣೆ ಬೆಲೆಗಿಂತ ಸುಮಾರು 13.5 ಶೇಕಡಾ ಕಡಿಮೆ ಮತ್ತು ಅದರ ಲೀಸ್ಟಿಂಗ್ ಬೆಲೆಯಿಂದ ಶೇಕಡಾ 5.2 ಕ್ಕಿಂತ ಹೆಚ್ಚು ನಷ್ಟವಾಗಿದೆ.
ಅದರ ಆರಂಭಿಕ ವಹಿವಾಟಿನಿಂದ ಸ್ಟಾಕ್ ಗರಿಷ್ಠ ರೂಪಾಯಿ 920 ಮತ್ತು ಕನಿಷ್ಠ ರೂಪಾಯಿ 801.55 ರ ನಡುವೆ ಇದೆ. ಎಲ್ಐಸಿಯ ಷೇರು ಬೆಲೆಗಳಲ್ಲಿನ ಕುಸಿತವು ದೇಶೀಯ ಷೇರುಗಳ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ.
ಆರಂಭದಲ್ಲೇ ನಷ್ಟ ಕಂಡ ಎಲ್ಐಸಿ ಷೇರು
ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಹೂಡಿಕೆದಾರರು ಮೇ 17 ರಂದು ನಡೆದ ವಹಿವಾಟಿನಲ್ಲಿ 50,000 ಕೋಟಿ ರೂಪಾಯಿಗಿಂತ ಅಧಿಕ ಷೇರುಗಳನ್ನು ಕಳೆದುಕೊಂಡಿದ್ದಾರೆ. ಎಲ್ಐಸಿ ಷೇರು ಪ್ರತಿ ಷೇರಿಗೆ ರೂ. 867.20 ರಂತೆ ಪಟ್ಟಿಯಾಗಿದೆ. ಎಲ್ಐಸಿಯ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಅಧಿಕ ಚಂದಾದಾರಿಕೆಯಾಗಿತ್ತು. ಆದರೆ ಷೇರು ಪೇಟೆಯಲ್ಲಿ ಎಲ್ಐಸಿ ಶೇಕಡ 8.5 ಪ್ರತಿಶತದಷ್ಟು ರಿಯಾಯಿತಿಯಲ್ಲಿ ವಹಿವಾಟು ಆರಂಭ ಮಾಡಿದೆ.
ಸಂಸ್ಥೆಯು ಐಪಿಒ ಮೂಲಕ ಸುಮಾರು 21,000 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. 949 ರೂ.ಗಳ ಒಂದು ಷೇರಿನ ಮೇಲಿನ ಬೆಲೆಯ ಬ್ಯಾಂಡ್ನಲ್ಲಿ 6.01 ಟ್ರಿಲಿಯನ್ ಮೌಲ್ಯವನ್ನು ಹೊಂದಿದೆ. ಮೇ 17 ರಂದು ವಹಿವಾಟಿನ ಮುಕ್ತಾಯದಲ್ಲಿ, ಷೇರುಗಳು ಬಿಎಸ್ಇಯಲ್ಲಿ ರೂ 872.70 ನಲ್ಲಿ ಸ್ಥಿರಗೊಂಡಿದೆ. ಅದರ ವಿತರಣೆಯ ಬೆಲೆಗಿಂತ 8.04 ಶೇಕಡಾ ಕಡಿಮೆಯಾಗಿದೆ.
ಇದರಿಂದಾಗಿ ಹೂಡಿಕೆದಾರರಿಗೆ ಮಾರುಕಟ್ಟೆ ಬಂಡವಾಳವು ರೂ 5.52 ಟ್ರಿಲಿಯನ್ಗೆ ತಲುಪಿತ್ತು. 867.20 ರೂ.ನಲ್ಲಿ ಪ್ರಾರಂಭವಾದ ನಂತರ, ಷೇರುಗಳು ಕ್ರಮವಾಗಿ ರೂ.920 ಗರಿಷ್ಠ ಮಟ್ಟ ಹಾಗೂ ರೂ.860.10 ರ ಕನಿಷ್ಠ ಮಟ್ಟವನ್ನು ತಲುಪಿತ್ತು.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications