ನವದೆಹಲಿ, ಅ. 31: ರಾತ್ರಿಯ ಹೊತ್ತು ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಐಆರ್ಸಿಟಿಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸ್ಲೀಪರ್ ಕೋಚ್ನಲ್ಲಿ ರಾತ್ರಿಯ ಹೊತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಈ ಮಾರ್ಗಸೂಚಿ ರೂಪಿಸಲಾಗಿದ್ದು, ಯಾರಾದರೂ ನಿಯಮ ಮುರಿದರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು.
ಕಳೆದ ವರ್ಷವೇ ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಈಗ ಸರ್ಕಾರ ಈ ಮಾರ್ಗಸೂಚಿಗೆ ಇನ್ನಷ್ಟು ಅಂಶಗಳನ್ನು ಸೇರಿಸಿದೆ. ರಾತ್ರಿಯ ಹೊತ್ತು ಪ್ರಯಾಣಿಕರು ಮೊಬೈಲ್ನಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡುವಂತಿಲ್ಲ. ಜೋರಾಗಿ ಸಂಗೀತ ಹಾಕುವಂತಿಲ್ಲ. ಸಹ ಪ್ರಯಾಣಿಕರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರೈಲಿನಲ್ಲಿ ಪ್ರಯಾಣಿಕರು ಜೋರಾಗಿ ಹರಟೆ ಹೊಡೆಯುವುದು, ಹಾಡು ಕೇಳುವುದು ತೀರಾ ಸಾಮಾನ್ಯ. ರಾತ್ರಿ 10 ಗಂಟೆಗೆ ಅನೇಕರು ಮಲಗಿದ ಬಳಿಕವೂ ಕೆಲವರು ಗಲಾಟೆ ನಿಲ್ಲಿಸುವುದಿಲ್ಲ. ರೈಲ್ವೆ ಸಿಬ್ಬಂದಿಯಿಂದಲೂ ರಾತ್ರಿಯ ಹೊತ್ತು ಶಬ್ದ ಆಗುತ್ತಿರುತ್ತದೆ ಎಂಬ ದೂರುಗಳು ತೀರಾ ಸಾಮಾನ್ಯ.

ಐಆರ್ಸಿಟಿಸಿಯ ಹೊಸ ಮಾರ್ಗಸೂಚಿಯಲ್ಲಿ ಇನ್ನೂ ಹಲವು ಅಂಶಗಳಿವೆ. ರಾತ್ರಿ 10 ಗಂಟೆಯ ನಂತರ ಟಿಟಿ ಪರೀಕ್ಷಕರು ಟಿಕೆಟ್ ಪರಿಶೀಲನೆ ನಡೆಸುವಂತಿಲ್ಲ. 10 ಗಂಟೆಯ ನಂತರ ಬಂದ ಪ್ರಯಾಣಿಕರ ಟಿಕೆಟ್ ಅನ್ನು ಪರೀಕ್ಷಿಸಬಹುದಷ್ಟೇ. ಒಂದು ಕೋಚ್ನ ಮಧ್ಯದ ಬರ್ತ್ನ ಪ್ರಯಾಣಿಕರು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಅವರ ಬೆಡ್ನಲ್ಲಿ ಮಲಗಲು ಅವಕಾಶ ಇರುತ್ತದೆ.
ಒಂದು ವೇಳೆ ರೈಲು ಸೀಟು ಬುಕ್ ಮಾಡಿದ ವ್ಯಕ್ತಿಗಳು ಬಂದಿಲ್ಲದೇ ಹೋದಲ್ಲಿ ಅವರ ಸೀಟಲ್ಲಿ ಬೇರೊಬ್ಬರು ತತ್ಕ್ಷಣವೇ ಕೂರಲು ಬರುವಂತಿಲ್ಲ. ಆ ವ್ಯಕ್ತಿ ಬರಬೇಕಿದ್ದ ಸಮಯದಿಂದ ಒಂದು ಗಂಟೆ ಬಳಿಕ ಅಥವಾ 2 ನಿಲ್ದಾಣಗಳ ಬಳಿಕ ಟಿಟಿಇ ಆ ಸೀಟನ್ನು ಬೇರೊಬ್ಬರಿಗೆ ಅಲಾಟ್ ಮಾಡಬಹುದು.

ರಾತ್ರಿ 10 ಗಂಟೆಯ ನಂತರ ಬೋಗಿಯಲ್ಲಿ ಲೈಟ್ ಆಫ್ ಮಾಡಬೇಕೆಂಬ ನಿಯವೂ ಇದೆ. ಬಹಳ ಜನರು ಇದನ್ನು ಪಾಲಿಸುವುದಿಲ್ಲ. ಅನೇಕ ದೂರುಗಳನ್ನು ಆಧರಿಸಿ ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಪ್ರಯಾಣಿಕರು ಈ ನಿಯಮಗಳ ಪಾಲನೆ ಮಾಡದೇ ಇದ್ದಲ್ಲಿ ಅವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗುವುದೆಂದು ಎಚ್ಚರಿಸಲಾಗಿದೆ.
ರೈಲು ಪ್ರಯಾಣಿಕರು ಹಾಡು ಕೇಳಬೇಕೆಂದರೆ ಹೆಡ್ಫೋನ್ ಬಳಸಬಹುದು. ಅದು ಬಿಟ್ಟು ಲೌಡ್ ಸ್ಪೀಕರ್ನಲ್ಲಿ ಹಾಡು ಕೇಳಿ ಇನ್ನೊಬ್ಬರಿಗೆ ತೊಂದರೆ ನೀಡುವುದು ಸರಿಯಲ್ಲ. ಮಾರ್ಗಸೂಚಿ ಸರಿಯಾಗಿ ಪಾಲನೆ ಆಗುತ್ತಿದೆಯಾ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಅಥವಾ ಪ್ರಯಾಣಿಕರು ನೀಡುವ ದೂರಿನ ಮೇಲೆ ಕ್ರಮ ಕೈಗೊಳ್ಳುವುದು ರೈಲಿನಲ್ಲಿರುವ ಸಿಬ್ಬಂದಿಯ ಹೊಣೆಗಾರಿಕೆ ಆಗಿರುತ್ತದೆ.
----
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications