ತಿರುಮಲ ತಿರುಪತಿ ದೇವಸ್ಥಾನದಲ್ಲಿ ಹುಂಡಿಗೆ ಭಕ್ತರು ಹಾಕಿದ ಒಂದು ದಿನದ ಹಣವು ಈ ಹಿಂದಿನ ದಾಖಲೆಯನ್ನು ಮುರಿದಿದೆ. ವೈಕುಂಠ ಏಕಾದಶಿ ದಿನವೇ ಸುಮಾರು 7.68 ಕೋಟಿ ರೂಪಾಯಿಯನ್ನು ಜನರು ಹುಂಡಿಗೆ ಹಾಕಿದ್ದಾರೆ. ಈ ಹಿಂದಿನ ದಾಖಲೆಯನ್ನು ಬ್ರೇಕ್ ಮಾಡಲಾಗಿದೆ.
ಈ ಹಿಂದೆ ಅಕ್ಟೋಬರ್ 23ರಂದು ಒಂದು ದಿನದಲ್ಲಿಯೇ ತಿರುಮಲ ತಿರುಪತಿ ದೇವಸ್ಥಾನದ ಹುಂಡಿಗೆ 6.31 ಕೋಟಿ ರೂಪಾಯಿ ಹುಂಡಿಗೆ ಹಾಕಿದ್ದಾರೆ. ಒಟ್ಟಾಗಿ 69,414 ಕೋಟಿ ಯಾತ್ರಿಗಳು ದೇವಾಲಯಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ 7.68 ಕೋಟಿ ರೂಪಾಯಿಯನ್ನು ಜನರು ಹುಂಡಿಗೆ ಹಾಕಿದ್ದಾರೆ.
ತಿರುಪತಿಯಲ್ಲಿ ಸ್ಥಾಪಿಸಲಾದ ಟೋಕನ್ ಕೌಂಟರ್ಗಳಿಂದ ಸಾವಿರಾರು ಭಕ್ತರು ವೈಕುಂಠ ಏಕಾದಶಿ ಮತ್ತು ವೈಕುಂಠ ದ್ವಾರ ದರ್ಶನ ತಿರುಮಲಕ್ಕೆ ಉಚಿತ ಟೋಕನ್ಗಳನ್ನು ತಿರುಪತಿಯಲ್ಲಿ ಸ್ಥಾಪಿಸಲಾದ ಟೋಕನ್ ಕೌಂಟರ್ಗಳಿಂದ ಪಡೆದಿದ್ದಾರೆ.

ಟೋಕನ್ ಕೌಂಟರ್ಗಳು
ಜನವರಿ 2 ರಿಂದ 11 ರವರೆಗೆ ತಿರುಮಲದಲ್ಲಿ ಆಚರಿಸಲಾಗುವ 10 ದಿನಗಳ ವೈಕುಂಟಾ ದ್ವಾರ ದರ್ಶನ ಉತ್ಸವಕ್ಕಾಗಿ ಭಕ್ತರಿಗೆ 4.5 ಲಕ್ಷ ಉಚಿತ ಎಸ್ಎಸ್ಡಿ ಟೋಕನ್ಗಳನ್ನು ವಿತರಣೆ ಮಾಡಲಾಗಿದೆ. ದಿನಕ್ಕೆ 45,000 ಟೋಕನ್ ವಿತರಿಸಲು ಟಿಟಿಡಿ ಒಂಬತ್ತು ಸ್ಥಳಗಳಲ್ಲಿ ಸುಮಾರು 100 ಕೌಂಟರ್ಗಳನ್ನು ಸ್ಥಾಪಿಸಿದೆ.
ವೈಕುಂಠ ದ್ವಾರ ದರ್ಶನದ ವೇಳೆ ದೂರದ ಊರುಗಳಿಂದ ಶ್ರೀ ವೆಂಕಟೇಶ್ವರನ ದರ್ಶನ ಪಡೆಯಲು ಬಂದಿದ್ದ ಭಕ್ತರು ಶನಿವಾರ ರಾತ್ರಿಯಿಂದಲೇ ಒಂಬತ್ತು ಎಸ್ಎಸ್ಡಿ ಟೋಕನ್ ವಿತರಣಾ ಕೌಂಟರ್ಗಳ ಮುಂದೆ ಜಮಾಯಿಸಿದ್ದರು. ಮಧ್ಯರಾತ್ರಿ 1 ಗಂಟೆಯಿಂದಲೇ ಟೋಕನ್ ವಿತರಣೆ ಆರಂಭಿಸುವಂತೆ ಟಿಟಿಡಿ ಅಧಿಕಾರಿಗಳಿಗೆ ಒತ್ತಾಯಿಸಿದರು.
ಭಕ್ತರು ನೂಕುನುಗ್ಗಲು ತಪ್ಪಿಸಲು, ಅಧಿಕಾರಿಗಳು ಎಲ್ಲಾ ಒಂಬತ್ತು ಕೌಂಟರ್ಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿದ್ದರೆ. ಈ ಕೌಂಟರ್ಗಳನ್ನು ತಿರುಪತಿಯ ಮೈದಾನದಲ್ಲಿ ಸ್ಥಾಪನೆ ಮಾಡಲಾಗಿದೆ.
"ಟೋಕನ್ ಕೌಂಟರ್ಗಳಲ್ಲಿ ಸರಿಯಾದ ನಿರ್ವಹಣೆಗಾಗಿ ಟಿಟಿಡಿ ಮತ್ತು ಪೊಲೀಸ್ ಇಲಾಖೆಯನ್ನು ಶ್ಲಾಘಿಸಬೇಕು. ಕೌಂಟರ್ಗಳಲ್ಲಿ ಪಂಡಲ್, ನೀರು, ಶೌಚಾಲಯಗಳು ಭಕ್ತರಿಗೆ ಯಾವುದೇ ಅನಾನುಕೂಲತೆ ಆಗದಂತೆ ನೋಡಿಕೊಂಡಿದ್ದಾರೆ," ಎಂದು ಸ್ಲಾಟ್ ಟೋಕನ್ ಪಡೆದ ಭಕ್ತ ಯಶ್ ತಿಳಿಸಿದ್ದಾರೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications