ಆದಾಯ ತೆರಿಗೆ ಪಾವತಿ ಮಾಡಲು ಅನೇಕ ವಿಧಾನಗಳಿದ್ದರೂ ರಿಟರ್ನ್ಸ್ ಫೈಲ್ ಮಾಡುವ ವೇಳೆ ಸ್ವಲ್ಪ ಎಚ್ಚರಿಕೆ ತಪ್ಪಿದ್ದರೂ ಪ್ರಮಾದವಾಗುತ್ತದೆ. ಗೊತ್ತಿಲ್ಲದೆ ತಪ್ಪು ಮಾಹಿತಿ ಹಾಕಿ ಅರ್ಜಿ ತುಂಬಿ ರಿಟರ್ನ್ಸ್ ಸಲ್ಲಿಸಿದ್ದರೆ ಭಯಪಡಬೇಡಿ. ಇಂಥ ಸಂದರ್ಭದಲ್ಲೂ ಮತ್ತೊಮ್ಮೆ ಇ ರಿಟರ್ನ್ಸ್ ಸಲ್ಲಿಸುವ ಅವಕಾಶವನ್ನು ಇಲಾಖೆ ನೀಡುತ್ತದೆ.
ಅದರೆ, ನೆನಪಿಡಿ, ಕೊನೆ ದಿನಾಂಕ (ಈ ಬಾರಿ ಆಗಸ್ಟ್ 31, 2015) ಕ್ಕೂ ಮುನ್ನ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ. ಮತ್ತೆ ಮತ್ತೆ ತಪ್ಪು ಮಾಡಿದರೂ ಚಿಂತೆ ಇಲ್ಲ, ಕೊನೆ ದಿನಾಂಕಕ್ಕೂ ಮೊದಲು ಸರಿಯಾದ ಮಾಹಿತಿಯೊಂದಿಗೆ ರಿಟರ್ನ್ಸ್ ಮರು ಸಲ್ಲಿಕೆ ಮಾಡಬಹುದು. [ರಗಳೆ ಇಲ್ಲದೆ ತೆರಿಗೆ ಮರುಪಾವತಿ ಮಾಡುವ ವಿಧಾನ]
ಒಂದು ವೇಳೆ ಕೊನೆ ದಿನಾಂಕದ ನಂತರ ರಿಟರ್ನ್ಸ್ ಸಲ್ಲಿಕೆ ಮಾಡಲು ಯತ್ನಿಸಿದರೆ, ದಂಡ ಕಟ್ಟಬೇಕಾಗುತ್ತದೆ. ಜೊತೆಗೆ ರಿಟರ್ನ್ಸ್ ಸಲ್ಲಿಕೆ ವಿಧಾನವೂ ಕಷ್ಟಕರವಾಗುತ್ತದೆ. ಈ ವರ್ಷ ಬೇಡ ಮುಂದಿನ ವರ್ಷ ದಂಡ ಸೇರಿಸಿ ಕಟ್ಟುತ್ತೇನೆ ಎಂದರೆ ಲೆಕ್ಕಾಚಾರ ಇನ್ನೂ ಕ್ಲಿಷ್ಟ.

ತಪ್ಪು ಮಾಡಬೇಡಿ: ಗೊತ್ತಿದ್ದು ಗೊತ್ತಿದ್ದು ತಪ್ಪು ಮಾಡಿ ಸುಳ್ಳು ಮಾಹಿತಿ ನೀಡಿದರೆ ಆದಾಯ ತೆರಿಗೆ ಇಲಾಖೆಯಿಂದ ಭಾರಿ ಮೊತ್ತದ ದಂಡ (ಮೂರು ಪಟ್ಟು ಅಧಿಕ) ಜೊತೆಗೆ ಸೆರೆಮನೆ ವಾಸ ಕೂಡಾ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಆದಾಯದ ಬಗ್ಗೆ ಅರಿವಿದ್ದು ಅರ್ಜಿ ತುಂಬುವುದು ಗೊತ್ತಿದ್ದರೆ ಸರಿಯಾದ ಮಾಹಿತಿ ನೀಡಿ ರಿಟರ್ನ್ಸ್ ಸಲ್ಲಿಸಿ.[ರಿಫಂಡ್ ಚೆಕ್ ಹಿಂದಕ್ಕೆ ಪಡೆಯುವುದು ಹೇಗೆ?]
ಉದಾಹರಣೆಗೆ 2014-15ರ ಆರ್ಥಿಕ ವರ್ಷ ಐಟಿ ರಿಟರ್ನ್ಸ್ ಪರಿಷ್ಕೃತವಾದ ಮೇಲೂ ಆಗಸ್ಟ್ 31, 2015ರೊಳಗೆ ಕಟ್ಟಬಹುದು. ಕೊನೆ ದಿನಾಂಕ ಮುಗಿದ ಮೇಲೆ ಪ್ರಸಕ್ತ ಆರ್ಥಿಕ ವರ್ಷದ ರಿಟರ್ನ್ಸ್ ಫೈಲ್ (ದಂಡ ಸಹಿತ) ಮಾಡಲು ಬರುವುದಿಲ್ಲ.[ವಿಳಂಬವಾಗಿದ್ದಲ್ಲಿ ತೆರಿಗೆ ರಿಟರ್ನ್ಸ್ ಪಾವತಿ ಹೇಗೆ?]
ಒಂದು ವೇಳೆ ನೀವು ನೀಡಿದ ಮಾಹಿತಿಯಲ್ಲಿ ಲೋಪ ಕಂಡು ಬಂದರೆ, ಉದ್ದೇಶ ಪೂರ್ವಕವಾಗಿ ಕೆಲ ಮಾಹಿತಿ ದೋಷ ಮಾಡಿದ್ದರೆ, ಅಂಕಿ ಅಂಶಗಳನ್ನು ಬಚ್ಚಿಟ್ಟಿದ್ದೀರಿ ಎಂದು ಐಟಿ ಇಲಾಖೆಗೆ ಕಂಡು ಬಂದರೆ ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗುತ್ತದೆ.[ಆದಾಯ ತೆರಿಗೆ ಪಾವತಿ ಮಾರ್ಗದರ್ಶಿ]
ಆದ್ದರಿಂದ ಮೊದಲ ಯತ್ನದಲ್ಲೇ ಸರಿಯಾದ ಮಾಹಿತಿ ನೀಡುವುದು ಒಳ್ಳೆಯದು, ಪರಿಷ್ಕೃತ ರಿಟರ್ನ್ಸ್ ದಾಖಲೆಯಲ್ಲಿ ಮೂಲ ದಾಖಲೆಗಿಂತ ಅಧಿಕ ಪ್ರಮಾಣದ ಮೊತ್ತವನ್ನು ದಾಖಲಿಸಿದ್ದರೆ ಐಟಿ ಇಲಾಖೆ ಮಾಫಿ ಮಾಡಬಹುದು ಸಾಧ್ಯತೆ ಇರುತ್ತದೆ. (ಗುಡ್ ರಿಟರ್ನ್ಸ್.ಇನ್)
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications