ಬರುವ ಜುಲೈ 1ರಿಂದ 7ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬರಲಿದ್ದು, ಕೇಂದ್ರ ನೌಕರರು ತಮ್ಮ ನಗರಗಳ ಆಧಾರದ ಮೇಲೆ ಶೇ. 45ರ ವರೆಗೆ ಹೆಚ್ಚಿನ ವೇತನ ಪಡೆಯಲಿದ್ದಾರೆ.
ಕೇಂದ್ರ ಸರ್ಕಾರಿ ನೌಕರರ ಭಾರೀ ನಿರೀಕ್ಷೆಯ 7ನೇ ವೇತನ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ಬರುವ ಜುಲೈ 1ರಿಂದ 7ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬರಲಿದ್ದು, ಕೇಂದ್ರ ನೌಕರರು ತಮ್ಮ ನಗರಗಳ ಆಧಾರದ ಮೇಲೆ ಶೇ. 45ರ ವರೆಗೆ ಹೆಚ್ಚಿನ ವೇತನ ಪಡೆಯಲಿದ್ದಾರೆ. 34 ಲಕ್ಷ ಕೇಂದ್ರ ನೌಕರರು, ಸೇನಾ ವಲಯದ 14 ಲಕ್ಷ ನೌಕರರು ಪ್ರಯೋಜನ ಪಡೆಯಲಿದ್ದು, ವಾರ್ಷಿಕವಾಗಿ ಕೇಂದ್ರದ ಬೊಕ್ಕಸಕ್ಕೆ ರೂ. 30,748 ಕೋಟಿ ಹೊರೆ ಬೀಳಲಿದೆ.
ಅರುಣ್ ಜೇಟ್ಲಿ ಏನಂತಾರೆ?
7ನೇ ವೇತನ ಆಯೋಗದ ನಿರ್ಧಾರದಿಂದ ಕೇಂದ್ರ ಸರ್ಕಾರಿ ನೌಕರರ ವೇತನದ ವಿವಿಧ ಭತ್ಯೆಗಳು ಕೂಡ ಹೆಚ್ಚಾಗಲಿವೆ. ವೇತನ ಆಯೋಗದ ಶಿಫಾರಸುಗಳಲ್ಲಿ ಮನೆ ಬಾಡಿಗೆ ಭತ್ಯೆ(HRA) ಅತಿ ಹೆಚ್ಚು ಚರ್ಚೆಯಾಗಿದೆ. ಪಿಂಚಣಿದಾರರಿಗೆ ವೈದ್ಯಕೀಯ ಭತ್ಯೆ ಹಾಗೂ ಉನ್ನತ ಅಧಿಕಾರಿಗಳ ಭತ್ಯೆ ಕೂಡ ಹೆಚ್ಚಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಸೈನಿಕರ ಭತ್ಯೆ
ಸೈನಿಕರ ಸಿಯಾಚಿನ್ ಭತ್ಯೆ ರೂ. 14-30 ಸಾವಿರಕ್ಕೆ ಏರಿಕೆಯಾಗಲಿದೆ. ಸೇನಾಧಿಕಾರಿಗಳ ಭತ್ಯೆ ರೂ. 21 ಸಾವಿರದಿಂದ ರೂ. 42,500ಕ್ಕೆ ಹೆಚ್ಚಳ ಆಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಎಚ್ಆರ್ ಎ(HRA) ಭತ್ಯೆ
ಕೇಂದ್ರ ಸರ್ಕಾರಿ ನೌಕರರು ವಾಸವಾಗಿರುವ ನಗರಗಳನ್ನು X, Y, Z ಕೆಟಗರಿಗಳಲ್ಲಿ ವಿಂಗಡಿಸಲಾಗಿದೆ. ಪ್ರಸ್ತುತ ಮನೆ ಬಾಡಿಗೆ ಭತ್ಯೆ(ಎಚ್ಆರ್ಎ) ಭತ್ಯೆಯನ್ನು X ಕೆಟಗರಿಗೆ ಶೇ. 30ರಷ್ಟು( 50 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆ), Y ಕೆಟಗರಿಗೆ ಶೇ. 20ರಷ್ಟು (5-50 ಲಕ್ಷ), Z ಕೆಟಗರಿಗೆ ಶೇ. 10ರಷ್ಟು (5 ಲಕ್ಷಕ್ಕಿಂತ ಕಡಿಮೆ) ಪಾವತಿಸಲಾಗುತ್ತದೆ. X,Y,Z ಆಯಾ ವಿಭಾಗಗಳಿಗೆ ಅನುಗುಣವಾಗಿ ಶೇ. 24, ಶೇ. 16, ಶೇ. 8ರಷ್ಟು ಕಡಿತ ಮಾಡಲಾಗಿದೆ.
ಹಿರಿಯ ನಾಗರಿಕರ ಭತ್ಯೆ
ಕೇಂದ್ರ ಸರ್ಕಾರದ ಮಾಜಿ ನೌಕರರಿಗೆ ಇದು ಖುಷಿಯ ವಿಚಾರವಾಗಿದ್ದು, ಪಿಂಚಣಿಯಲ್ಲಿ ನೀಡಲಾಗುತ್ತಿದ್ದ ವೈದ್ಯಕೀಯ ಭತ್ಯೆಯನ್ನು ಮಾಸಿಕ ರೂ. 500-1,000ಕ್ಕೆ ಹೆಚ್ಚಿಸಲಾಗಿದೆ. ರೋಗಿಗಳ ಶುಶ್ರೂಷಾ ಭತ್ಯೆಯನ್ನು ಮಾಸಿಕವಾಗಿ ರೂ. 2,100-5,300ವರೆಗೆ ಏರಿಸಲಾಗಿದೆ. ಅಂದರೆ ಹಿರಿಯ ನಾಗರಿಕರಿಗೆ ವೈದ್ಯಕೀಯ ಚಿಕಿತ್ಸೆ ಭತ್ಯೆ ರೂಪದಲ್ಲಿ ರೂ. 6,300 ಹೆಚ್ಚುವರಿ ಮೊತ್ತ ಸಿಗಲಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications