ಉದ್ಯೋಗ ಅರಸುತ್ತಾ ನಗರಗಳ ಕಡೆ ಹೊರಟಾಗ ಹಲವು ಸಮಸ್ಯೆಗಳು ಎದುರಾಗುತ್ತವೆ. ಅವುಗಳಲ್ಲಿ ಬಾಡಿಗೆ ಮನೆ ಹುಡುಕಿಕೊಳ್ಳುವುದೇ ದೊಡ್ಡ ಸವಾಲು. ಬಾಡಿಗೆ ಮನೆ ಪಡೆದುಕೊಳ್ಳುವಾಗ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ಉದ್ಯೋಗ ಅರಸುತ್ತಾ ನಗರಗಳ ಕಡೆ ಹೊರಟಾಗ ಹಲವು ಸಮಸ್ಯೆಗಳು ಎದುರಾಗುತ್ತವೆ. ಅವುಗಳಲ್ಲಿ ಬಾಡಿಗೆ ಮನೆ ಹುಡುಕಿಕೊಳ್ಳುವುದೇ ದೊಡ್ಡ ಸವಾಲು. ಬಾಡಿಗೆ ಮನೆ ಪಡೆದುಕೊಳ್ಳುವಾಗ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲದಕ್ಕಿಂತ ಬಾಡಿಗೆ ಕರಾರುಪತ್ರ(Rental Agreement) ಮುಖ್ಯವಾಗುತ್ತದೆ. ನಿಮ್ಮ ಬಳಿ ಒಂದು ಮನೆಯ ಮಾಲೀಕನ ಬಳಿ ಒಂದು ರೆಂಟಲ್ ಅಗ್ರಿಮೆಂಟ್ ಪ್ರತಿಗಳು ಇರುತ್ತವೆ. ಬಾಡಿಗೆ ಪಡೆಯುವ ಮುನ್ನ ನಿಮ್ಮ ಹಸ್ತಾಕ್ಷರ ಹಾಕಿ ನೀಡುವುದು ಕಡ್ಡಾಯವಾಗಿರುತ್ತದೆ.
ಹಾಗಾದರೆ ರೆಂಟಲ್ ಅಗ್ರಿಮೆಂಟ್ ನಲ್ಲಿ ಗಮನ ಹರಿಸಬೇಕಾದ ಸಂಗತಿಗಳು ಯಾವವು, ಜಾಗ್ರತೆ ವಹಿಸಬೇಕಾದ ಸಂಗತಿಗಳೇನು ನೋಡೋಣ...
1. ನೋಟಿಸ್ ಪಿರಿಯಡ್
ಬಾಡಿಗೆ ಮನೆಯನ್ನು ತೆರವು ಮಾಡುವ ಸಂಬಂಧ ನೋಟಿಸ್ ಪಿರಿಯಡ್ ನ್ನು ಹೇಳಲಾಗಿದೆಯೇ ಎಂಬುದನ್ನು ಗಮನವಿಟ್ಟು ನೋಡಿಕೊಳ್ಳಬೇಕಾಗುತ್ತದೆ. ಇದು ಮನೆ ಮಾಲೀಕ ನಿಗೂ ಅಷ್ಟೆ ಮುಖ್ಯವಾಗಿರುತ್ತದೆ. ನೀವು ಒಂದು ವೇಳೆ ನೋಟಿಸ್ ಅವಧಿ ಮುಗಿಸದೇ ಮನೆ ಖಾಲಿ ಮಾಡಿದರೆ ಅಡ್ವಾನ್ಸ್ ಹಣದಲ್ಲಿ ಕಡಿತ ಮಾಡಿಕೊಳ್ಳುವ ಆಯ್ಕೆ ಮಾಲೀಕರಿಗೆ ಇರುತ್ತದೆ.
2. ಬಾಡಿಗೆ ಏರಿಸುವುದು
ಮನೆ ಬಾಡಿಗೆ ಏರಿಯಾ, ಸೌಲಭ್ಯ, ಆದ್ಯತೆ ಮುಂತಾದವುಗಳ ಆಧಾರದ ಮೇಲೆ ಇದು ಬದಲಾಗುತ್ತಿರುತ್ತದೆ. ಸಾಮಾನ್ಯವಾಗಿ 11 ತಿಂಗಳ ಅವಧಿಗೆ ಒಂದು ಮೊತ್ತದ ಬಾಡಿಗೆ ನಿಗದಿ ಮಾಡಲಾಗಿರುತ್ತದೆ. ಕರಾರು ಪತ್ರ ಪಡೆಯುವಾಗ ಎಷ್ಟು ತಿಂಗಳ ಅವಧಿಗೆ ಬಾಡಿಗೆ ನಿರ್ಧರಿಸಲಾಗಿದೆ ಎಂಬುದನ್ನು ಗಮನವಿಟ್ಟು ನೋಡಿಕೊಳ್ಳಬೇಕಾಗುತ್ತದೆ.
3. ಡಿಪಾಸಿಟ್ ಮೊತ್ತ
ಸಾಮಾನ್ಯವಾಗಿ 11 ತಿಂಗಳ ಬಾಡಿಗೆಯ ಒಟ್ಟು ಮೊತ್ತವನ್ನು ಡಿಪಾಸಿಟ್ ಆಗಿ ಪಡೆದುಕೊಳ್ಳಲಾಗುತ್ತದೆ. ಇದು ಸಹ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ನೆನಪಿಡಿ, ನೀವು ನೀಡಿದ ಮುಂಗಡ ಹಣವನ್ನು ಬ್ಯಾಂಕಿನಲ್ಲಿ ಇಟ್ಟು ಅದಕ್ಕೆ ಮಾಲೀಕ ಬಡ್ಡಿ ಪಡೆದುಕೊಳ್ಳುತ್ತಾನೆ. ಆದಷ್ಟೂ ಕಡಿಮೆ ಡಿಪಾಸಿಟ್ ನೀಡುವುದು ಒಳಿತು.
4. ಡಿಪಾಸಿಟ್ ಹಿಂದಕ್ಕೆ ನೀಡುವುದು
ಸಾಮಾನ್ಯವಾಗಿ ಮಾಲೀಕರು ಮನೆ ಖಾಲಿ ಮಾಡಿದ ನಂತರ ಮುಂಗಡ ಹಣವನ್ನು ಹಿಂದಕ್ಕೆ ನೀಡುತ್ತಾರೆ. ಮನೆ ಬಣ್ಣ, ಡ್ಯಾಮೇಜ್, ವಿದ್ಯುತ್ ಬಾಕಿ ಸೇರಿದಂತೆ ಹಲವಾರು ಕಾರಣ ನೀಡಿ ಹಣದಲ್ಲಿ ಕಡಿತ ಮಾಡಬಹುದು.
5. ಪೀಠೋಪಕರಣಗಳು ಮತ್ತು ಉಳಿದ ವಸ್ತುಗಳು
ಬಾಡಿಗೆ ನಿಡುವ ವೇಳೆ ಮನೆಯಲ್ಲಿನ ಪೀಠೋಪಕರಣಗಳು ಮತ್ತು ಉಳಿದ ವಸ್ತುಗಳನ್ನು ಸಹ ಅಗ್ರಿಮೆಂಟ್ ನಲ್ಲಿ ಉಲ್ಲೇಖ ಮಾಡಲಾಗಿರುತ್ತದೆ. ಕರಾರು ಉಲ್ಲೇಖ ಮಾಡಿರುವಂತೆ ಎಲ್ಲ ಅಂಶ/ವಸ್ತುಗಳು ಸರಿಯಾಗಿವೆಯೇ ಎಂದು ನೋಡಿಕೊಳ್ಳಿ. ನೀವು ಮನೆ ಒಳಗೆ ಪ್ರವೇಶ ಮಾಡುವಾಗ ಒಮ್ಮೆ ಪರೀಕ್ಷೆ ಮಾಡಿಕೊಳ್ಳಿ.
ಕೊನೆ ಮಾತು
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications