ಪಿಎಂ ಕಿಸಾನ್ ಯೋಜನೆ: ರೈತರು ಪ್ರತಿ ತಿಂಗಳು 3,000 ರೂ. ಪಿಂಚಣಿ ಪಡೆಯಬಹುದು!

ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆ (ಪಿಎಂ-ಕಿಸಾನ್ ಯೋಜನೆ) ಅಡಿಯಲ್ಲಿ ಭಾರತ ಸರ್ಕಾರವು ಎಲ್ಲಾ ಸಣ್ಣ ಮತ್ತು ಅಲ್ಪ ರೈತರಿಗೆ ಮೂಲ ಆದಾಯದ ಸಹಾಯಕ್ಕಾಗಿ ವರ್ಷಕ್ಕೆ 6,000 ರೂ. ನೀಡುತ್ತದೆ.

ಈ ಯೋಜನೆ ಪ್ರಾರಂಭವಾದಾಗಿನಿಂದ ಒಂಬತ್ತನೇ ಕಂತನ್ನು ರೈತರಿಗೆ ಕಳುಹಿಸಲಾಗಿದೆ. ಇದರಲ್ಲಿ ವರ್ಷಕ್ಕೆ ಮೂರು ಬಾರಿ 2,000 ರೂಪಾಯಿಗಳನ್ನು ನೇರವಾಗಿ ರೈತರಿಗೆ ಅವರ ಖಾತೆಗಳಲ್ಲಿ ವರ್ಗಾಯಿಸಲಾಗಿದೆ.

ಮೊದಲ ಕಂತು 2000 ರೂ. ಮಾರ್ಚ್‌ 1 ರಿಂದ ಜುಲೈ 31 ರವರೆಗೆ, ಎರಡನೇ ಕಂತು ಆಗಸ್ಟ್ 1 ಮತ್ತು ನವೆಂಬರ್ 30 ರ ನಡುವೆ ಪಾವತಿಸಲಾಗುವುದು ಮತ್ತು ಮೂರನೇ ಕಂತು ಡಿಸೆಂಬರ್ 1 ಮತ್ತು ಮಾರ್ಚ್ 31 ರ ನಡುವೆ ಪಾವತಿಸಲಾಗುವುದು. ಆದರೆ ಇದರ ಜೊತೆಗೆ ರೈತರು 60 ನೇ ವಯಸ್ಸಿನಲ್ಲಿ 3000 ರೂ. ಮಾಸಿಕ ಪಿಂಚಣಿ ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ? ಹೇಗೆ ಎಂಬುದು ಮುಂದೆ ತಿಳಿಯಿರಿ.

ಪಿಎಂ ಕಿಸಾನ್ ಯೋಜನೆ ಪಿಂಚಣಿ ನಿಯಮಗಳು

ಪಿಎಂ ಕಿಸಾನ್ ಯೋಜನೆ ಪಿಂಚಣಿ ನಿಯಮಗಳು

ಎಲ್ಲಾ ಅರ್ಹ ಸಣ್ಣ ಮತ್ತು ಅಲ್ಪ ರೈತರಿಗೆ ಈ ಉಪಕ್ರಮದ ಅಡಿಯಲ್ಲಿ 3,000 ರೂ. ನಿಶ್ಚಿತ ಪಿಂಚಣಿ ಸಿಗುತ್ತದೆ. ಇದು ಸ್ವಯಂಪ್ರೇರಿತ ಮತ್ತು ಕೊಡುಗೆ ಆಧಾರಿತ ಪಿಂಚಣಿ ಯೋಜನೆಯಾಗಿರುವುದರಿಂದ ಭಾರತದ ಜೀವ ವಿಮಾ ನಿಗಮದ ಆಡಳಿತದಲ್ಲಿರುವ ಪಿಂಚಣಿ ನಿಧಿಯ ಮೂಲಕ ರೈತರಿಗೆ ಪಿಂಚಣಿ ನೀಡಲಾಗುವುದು.

ಪ್ರತಿ ತಿಂಗಳು 50 ರೂಪಾಯಿನಿಂದ 200 ರೂಪಾಯಿ ಪಾವತಿ ಕೊಡುಗೆ

ಪ್ರತಿ ತಿಂಗಳು 50 ರೂಪಾಯಿನಿಂದ 200 ರೂಪಾಯಿ ಪಾವತಿ ಕೊಡುಗೆ

60 ವರ್ಷ ನಿವೃತ್ತಿ ವಯಸ್ಸನ್ನು ತಲುಪುವವರೆಗೆ ರೈತರು ಪ್ರತಿ ತಿಂಗಳು ರೂ .55 ರಿಂದ 200 ರೂ. ಪಿಂಚಣಿ ನಿಧಿಗೆ ಕೊಡುಗೆ ನೀಡಬೇಕಾಗುತ್ತದೆ. ಇದಲ್ಲದೆ, ಕೇಂದ್ರ ಸರ್ಕಾರವು ಪಿಂಚಣಿ ನಿಧಿಗೆ ಸಮಾನ ಮೊತ್ತವನ್ನು ಸಹ ನೀಡುತ್ತದೆ. ಅಂದರೆ ನೀವು 55 ರೂಪಾಯಿ ಪಾವತಿಸಿದರೆ, ಕೇಂದ್ರ ಸರ್ಕಾರವು ಪಿಂಚಣಿ ನಿಧಿಗೆ 55 ರೂ. ಪಾವತಿಸುತ್ತದೆ.

ಪಿಂಚಣಿ ಯೋಜನೆಗೆ ಅರ್ಹತೆ ಏನು?

ಪಿಂಚಣಿ ಯೋಜನೆಗೆ ಅರ್ಹತೆ ಏನು?

18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮತ್ತು 40 ವರ್ಷ ವಯಸ್ಸಿನ ಒಳಗಿನ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಸಣ್ಣ ಮತ್ತು ಅತಿಸಣ್ಣ ರೈತರ ಪತ್ನಿ ಈ ಯೋಜನೆಗೆ ಪ್ರತ್ಯೇಕವಾಗಿ ಸೇರಲು ಅರ್ಹರಾಗಿದ್ದಾರೆ. ಈ ಯೋಜನೆಯಲ್ಲಿ ಭಾಗಿಯಾದವರು 60 ವರ್ಷ ದಾಟಿದಾಗ ಅವರಿಗೆ 3000 ರೂಪಾಯಿ ಪ್ರತ್ಯೇಕ ಪಿಂಚಣಿ ಸಿಗುತ್ತದೆ.

ಯೋಜನೆಗೆ ಚಂದಾದಾರರಾಗಿರುವ ರೈತರು ಯಾವುದೇ ಕಾರಣಕ್ಕೂ ತಮ್ಮ ಖಾತೆಗಳನ್ನು ನಿರ್ವಹಿಸಲು ಬಯಸದಿದ್ದರೆ ಯಾವುದೇ ಸಮಯದಲ್ಲಿ ನಿರ್ಗಮಿಸಬಹುದು. ಯೋಜನೆಯನ್ನು ತೊರೆದ ನಂತರ, ಪ್ರಧಾನ್ ಮಂತ್ರಿ ಕಿಸಾನ್ ಮಾನ್-ಧನ್ ಯೋಜನೆ (ಪಿಎಂ-ಕೆಎಂವೈ) ಯ ಮಾರ್ಗಸೂಚಿಗಳ ಪ್ರಕಾರ, ಒಬ್ಬ ರೈತನಿಗೆ ಪಿಂಚಣಿ ನಿಧಿಗೆ ನೀಡಿದ ಕೊಡುಗೆ ಮೊತ್ತವನ್ನು ಬಡ್ಡಿಯೊಂದಿಗೆ ಹಿಂದಿರುಗಿಸಲಾಗುತ್ತದೆ.

 

ರೈತನ ಸಾವಿನ ಪ್ರಕರಣದಲ್ಲಿ ಪಿಎಂ ಕಿಸಾನ್ ಯೋಜನೆ ಪಿಂಚಣಿ ನಿಯಮಗಳು

ರೈತನ ಸಾವಿನ ಪ್ರಕರಣದಲ್ಲಿ ಪಿಎಂ ಕಿಸಾನ್ ಯೋಜನೆ ಪಿಂಚಣಿ ನಿಯಮಗಳು

ಒಂದು ವೇಳೆ ರೈತನು ತನ್ನ ಯೋಜನೆಯ ಅವಧಿ ದಿನಾಂಕಕ್ಕಿಂತ ಮುಂಚಿತವಾಗಿ ಮರಣಹೊಂದಿದಲ್ಲಿ, ಸತ್ತ ರೈತ ನಿವೃತ್ತಿಯ ವಯಸ್ಸನ್ನು ತಲುಪುವವರೆಗೆ ಉಳಿದ ಕೊಡುಗೆಗಳನ್ನು ನೀಡುವ ಮೂಲಕ ಸಂಗಾತಿಯು ಯೋಜನೆಯಲ್ಲಿ ಮುಂದುವರಿಯಬಹುದು. ನಿವೃತ್ತಿಯ ದಿನಾಂಕಕ್ಕಿಂತ ಮೊದಲು ರೈತ ಸತ್ತರೆ ಮತ್ತು ಅವನ ಸಂಗಾತಿಯು ಮುಂದುವರಿಯಲು ಆಯ್ಕೆ ಮಾಡದಿದ್ದರೆ, ರೈತನ ಸಂಪೂರ್ಣ ಕೊಡುಗೆ, ಜೊತೆಗೆ ಬಡ್ಡಿ ಸಂಗಾತಿಗೆ ಹಸ್ತಾಂತರಿಸಲಾಗುತ್ತದೆ.

ಇನ್ನು ರೈತ ಯೋಜನೆಯ ದಿನಾಂಕಕ್ಕಿಂತ ಮುಂಚಿತವಾಗಿ ಸತ್ತರೆ ಮತ್ತು ಸಂಗಾತಿಯಿಲ್ಲದಿದ್ದರೆ, ಸಂಪೂರ್ಣ ಕೊಡುಗೆ, ಜೊತೆಗೆ ಬಡ್ಡಿಯನ್ನು ನಾಮಿನಿಗೆ ಹಸ್ತಾಂತರಿಸಲಾಗುತ್ತದೆ. ನಿವೃತ್ತಿ ದಿನಾಂಕದ ನಂತರ ರೈತ ಸತ್ತರೆ ಸಂಗಾತಿಗೆ ಕುಟುಂಬ ಪಿಂಚಣಿಯಾಗಿ ಶೇಕಡಾ 50ರಷ್ಟು ಪಿಂಚಣಿಗೆ ಅಥವಾ ತಿಂಗಳಿಗೆ 1500 ರೂಪಾಯಿಗೆ ಅರ್ಹರಾಗಿರುತ್ತಾರೆ. ಪಿಎಂ-ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದರೆ ಪಿಎಂ-ಕಿಸಾನ್ ಪ್ರಯೋಜನವನ್ನು ಪಡೆಯುವ ಅದೇ ಬ್ಯಾಂಕ್ ಖಾತೆಯಿಂದ ನೇರವಾಗಿ ರೈತರಿಗೆ ಕೊಡುಗೆ ನೀಡಲು ಅವಕಾಶ ನೀಡಬಹುದು.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+