ವಂಚನೆಯನ್ನು ತಡೆಯುವ ಉದ್ದೇಶದಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ದೊಡ್ಡ ಹೆಜ್ಜೆಯನ್ನು ಇರಿಸಿದೆ. ಈ ನಿಟ್ಟಿನಲ್ಲಿ ಫೆಬ್ರವರಿ 1, 2021ರಿಂದ ನಾನ್ EMV ಆಟೋಮೆಟೆಡ್ ಟೆಲ್ಲರ್ ಮಶೀನ್ಸ್ ನಿಂದ (ATM) ಗ್ರಾಹಕರು ಹಣ ವಿಥ್ ಡ್ರಾ ಮಾಡಲು ಅವಕಾಶ ನೀಡುವುದಿಲ್ಲ. ಪಿಎನ್ ಬಿ ಈಗಾಗಲೇ ಈ ಬಗ್ಗೆ ಮಾಹಿತಿ ನೀಡಿದೆ. ಹಣಕಾಸು ಹಾಗೂ ಹಣಕಾಸು ಹೊರತಾದ ಎರಡೂ ಬಗೆಯ ನಾನ್ EMV ಎಟಿಎಂ ವಹಿವಾಟನ್ನು ಫೆಬ್ರವರಿ 1ರಿಂದ ನಿರ್ಬಂಧಿಸುವುದಾಗಿ ಬ್ಯಾಂಕ್ ತಿಳಿಸಿದೆ.
"ಎಟಿಎಂಗಳಲ್ಲಿ ವಂಚನೆ ವ್ಯವಹಾರಗಳಿಂದ ನಮ್ಮ ಗೌರವಾನ್ವಿತ ಗ್ರಾಹಕರನ್ನು ರಕ್ಷಿಸುವ ಉದ್ದೇಶದಿಂದ ನಾನ್ EMV ಎಟಿಎಂಗಳಲ್ಲಿ ಫೆಬ್ರವರಿ 1, 2021ರಿಂದ ವಹಿವಾಟು ನಿರ್ಬಂಧಿಸಲಾಗುವುದು. ಸುರಕ್ಷಿತವಾಗಿರಿ!" ಎಂದು ಬ್ಯಾಂಕ್ ನಿಂದ ಟ್ವೀಟ್ ಮಾಡಲಾಗಿದೆ.
ನಾನ್ EMV ಎಟಿಎಂ ಅಂದರೇನು?
ನಾನ್ EMV ಎಟಿಎಂಗಳು ಅಂದರೆ ಮ್ಯಾಗ್ನೆಟಿಕ್ ಸ್ಟ್ರಿಪ್ಸ್ ಮೂಲಕ ಡೇಟಾವನ್ನು ಗ್ರಹಿಸುತ್ತದೆ. ಆ ವ್ಯವಹಾರ ನಡೆಯುವ ವೇಳೆ ಎಟಿಎಂ ಕಾರ್ಡ್ ಅನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. 2020ರ ಡಿಸೆಂಬರ್ ಬ್ಯಾಂಕ್ ನಿಂದ ಎಟಿಎಂ ಹಣ ವಿಥ್ ಡ್ರಾ ನಿಯಮ ಬದಲಾಗಿದೆ. ಪಿಎನ್ ಬಿ ಖಾತೆದಾರರು ಬೆಳಗ್ಗೆ 8ರಿಂದ ರಾತ್ರಿ 8ರ ಮಧ್ಯೆ ರು. 10,000 ಮತ್ತು ಮೇಲ್ಪಟ್ಟ ವಿಥ್ ಡ್ರಾ ಮಾಡುವಂತಿದಲ್ಲಿ ಒನ್ ಟೈಮ್ ಪಾಸ್ ವರ್ಡ್ (OTP) ಬರುತ್ತದೆ.
ಒಟಿಪಿ ಬಾರದೆ ನಗದು ವಿಥ್ ಡ್ರಾ ಸಾಧ್ಯವಾಗುವುದಿಲ್ಲ. ಒಟಿಪಿ ಆಧಾರಿತ ನಗದು ವಿಥ್ ಡ್ರಾ ಪರಿಚಯಿಸುವ ಮೂಲಕ ಪಿಎನ್ ಬಿ ಎಟಿಎಂನಲ್ಲಿ ಮತ್ತೊಂದು ಸುರಕ್ಷತಾ ಕವಚ ಪರಿಚಯಿಸಿದಂತಾಗುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂನಲ್ಲಿ ಒಟಿಪಿ ಆಧಾರಿತ ವಿಥ್ ಡ್ರಾ ಹೇಗೆ?
-ಪಿಎನ್ ಬಿ ಎಟಿಎಂನಿಂದ ನಗದು ವಿಥ್ ಡ್ರಾ ಮಾಡಲು ಒಟಿಪಿ ಬೇಕಾಗುತ್ತದೆ.
-ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ.
-ಒಟಿಪಿಯು ಸಿಸ್ಟಮ್ ಜನರೇಟ್ ಮಾಡುತ್ತದೆ. ಅದನ್ನು ಒಂದು ವಹಿವಾಟಿಗೆ ಮಾತ್ರ ಬಳಸಬಹುದು.
-ಪಿಎನ್ ಬಿ ಎಟಿಎಂ ಪ್ರವೇಶಿಸಬೇಕು.
-ಡೆಬಿಟ್/ಎಟಿಎಂ ಕಾರ್ಡ್ ಒಳ ಹಾಕಬೇಕು.
- ಅಗತ್ಯ ಮಾಹಿತಿಗಳನ್ನು ನಮೂದಿಸಬೇಕು.
- 10,000 ರುಪಾಯಿಗಿಂತ ಹೆಚ್ಚು ಮೊತ್ತವನ್ನು ಒಂದು ಸಲಕ್ಕೆ ವಿಥ್ ಡ್ರಾ ಮಾಡುವಂತಿದಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
-ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಬೇಕು.
-ಒಟಿಪಿಯನ್ನು ಹಾಕಿದ ಮೇಲೆ ನಗದು ಪಡೆಯುತ್ತೀರಿ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications