ಇಪಿಎಫ್ಒ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಉದ್ಯೋಗಿಗಳ ಪಿಂಚಣಿ ಯೋಜನೆಯ ಸದಸ್ಯರಾಗಿರುವ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಸದಸ್ಯರು ಕೆಲವು ಷರತ್ತುಗಳನ್ನು ಪೂರೈಸಿದರೆ ಪಿಂಚಣಿಗೆ ಹೆಚ್ಚಿನ ಕೊಡುಗೆ ನೀಡಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಈ ನಿಟ್ಟಿನಲ್ಲಿ ಆಗಸ್ಟ್ 22, 2014 ರ ಇಪಿಎಫ್ಒ ಅಧಿಸೂಚನೆಯನ್ನು ರದ್ದುಗೊಳಿಸಿದ ವಿವಿಧ ಉಚ್ಚ ನ್ಯಾಯಾಲಯಗಳು ನೀಡಿದ ತೀರ್ಪುಗಳಿಂದ ಉಂಟಾದ ಹಲವಾರು ಗೊಂದಲಗಳನ್ನು ಸುಪ್ರೀಂ ಕೋರ್ಟ್ ನಿವಾರಿಸಿದೆ. ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪು ಅಂದರೆ ನವೆಂಬರ್ 4 ರಂದು ಕೆಲವು ವಿಚಾರಗಳನ್ನು ದೃಢಪಡಿಸಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

ಸುಪ್ರೀಂ ತೀರ್ಪು ಏನು ಹೇಳುತ್ತದೆ.
ಎ) ಸೆಪ್ಟೆಂಬರ್ 1, 2014 ರಂದು ಅಥವಾ ನಂತರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆಗೆ ಸೇರಿದ ಯಾವುದೇ ವ್ಯಕ್ತಿ, ಅವರ ಮೂಲ ವೇತನವು ತಿಂಗಳಿಗೆ 15,000 ರೂಪಾಯಿ ಮೀರಿದರೆ ನೌಕರರ ಪಿಂಚಣಿ ಯೋಜನೆಗೆ (ಇಪಿಎಸ್) ಸೇರಲು ಅರ್ಹರಾಗಿರುವುದಿಲ್ಲ.
ಇಪಿಎಫ್ಒ ಪೋರ್ಟಲ್ನಲ್ಲಿ ಪಿಎಫ್ ಕುರಿತ ದೂರು ನೀಡುವುದು ಹೇಗೆ? ಇಲ್ಲಿದೆ ಮಾರ್ಗದರ್ಶಿ
ಬಿ) 2014 ರಲ್ಲಿ ಇಪಿಎಫ್ಒ ಸೂಚಿಸಿದಂತೆ ಪಿಂಚಣಿಯನ್ನು ಲೆಕ್ಕಾಚಾರ ಮಾಡುವ ಉದ್ದೇಶಗಳಿಗಾಗಿ ಗರಿಷ್ಠ ಪಿಂಚಣಿ ವೇತನವು ತಿಂಗಳಿಗೆ 15,000 ರೂಪಾಯಿ ಆಗಿದೆ. ಇದರರ್ಥ ಮೂಲ ವೇತನವು 15,000 ರೂಪಾಯಿಗಿಂತ ಅಧಿಕವಾಗಿದ್ದರೂ ಕೂಡಾ ಪಿಂಚಣಿಗೆ ಉದ್ಯೋಗದಾತರ ಮೂಲ ವೇತನ 15,000 ರೂಪಾಯಿ ಎಂದೆ ಲೆಕ್ಕಹಾಕಲಾಗುತ್ತದೆ.
ಈ ತೀರ್ಪು ಅಂತಿಮವಾಗಿ 2014 ರ ಉದ್ಯೋಗಿಗಳ ಪಿಂಚಣಿ ತಿದ್ದುಪಡಿಯ ಸಮಸ್ಯೆಯನ್ನು ನಿವಾರಿಸಿದೆ ಎಂದು ಕಾನೂನು ತಜ್ಞ ಸಂಜೀವ್ ಕುಮಾರ್ ಹೇಳುತ್ತಾರೆ. ಇಪಿಎಫ್ಒನ 2014 ರ ಅಧಿಸೂಚನೆಯನ್ನು ಎತ್ತಿಹಿಡಿದ ಮತ್ತು ದೆಹಲಿ, ರಾಜಸ್ಥಾನ ಮತ್ತು ಕೇರಳ ಹೈಕೋರ್ಟ್ಗಳ ತೀರ್ಪನ್ನು ಬದಿಗಿಟ್ಟ ಸುಪ್ರೀಂ ಕೋರ್ಟ್ ಕೆಲವು ಉದ್ಯೋಗಿಗಳಿಗೆ ಒಂದು ಬಾರಿ ಪರಿಹಾರವನ್ನು ನೀಡಿದೆ.
EPFO: ವೇತನದಿಂದ ಪಿಎಫ್ ಕಡಿತ, ಆದರೆ ಇಪಿಎಫ್ಒಗೆ ಜಮೆಯಾಗಿಲ್ವ? ಏನು ಮಾಡುವುದು?
ಪಿಂಚಣಿದಾರರು/ಸದಸ್ಯರು ಹೆಚ್ಚಿನ ವೇತನದ ಮೇಲೆ ಪಿಂಚಣಿ ಪಡೆಯಲು ಅರ್ಹರಾಗಿದ್ದರೆ, 04.11.2022 ರ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿ, ಪಿಂಚಣಿದಾರರು/ಸದಸ್ಯರಿಗೆ ಡಿಮ್ಯಾಂಡ್ ನೋಟಿಸ್ಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಸಂಬಳದ ಮೇಲೆ ಪಾವತಿಸಬೇಕಾದ ಪಿಂಚಣಿ ಮೊತ್ತವು ಪ್ರಕರಣದಿಂದ ಪ್ರಕರಣಕ್ಕೆ ಬದಲಾಗುತ್ತದೆ.
ಇಪಿಎಸ್, 1995 ರ ಅಡಿಯಲ್ಲಿ ಪಿಂಚಣಿ ನಿಧಿಯು ಒಂದು ಸಂಯೋಜಿತ ನಿಧಿಯಾಗಿದೆ. ಪಿಂಚಣಿ ನಿಧಿಯಲ್ಲಿ, ವೈಯಕ್ತಿಕ ಖಾತೆಗಳನ್ನು ನಿರ್ವಹಿಸುವುದಿಲ್ಲ. ಇಪಿಎಸ್, 1995 ರ ಸದಸ್ಯರು ಸೇವೆಯ ವರ್ಷಗಳ ಸಂಖ್ಯೆಯನ್ನು ಆಧರಿಸಿ ಅವರ ಅರ್ಹತೆಯ ಆಧಾರದ ಮೇಲೆ ಹಿಂತೆಗೆದುಕೊಳ್ಳುವ ಪ್ರಯೋಜನಗಳು ಅಥವಾ ಪಿಂಚಣಿಗೆ ಅರ್ಹರಾಗಿರುತ್ತಾರೆ. 31.03.2019 ರಂತೆ ನಿಧಿಯ ವಾಸ್ತವಿಕ ಮೌಲ್ಯಮಾಪನದ ಪ್ರಕಾರ, ಪಿಂಚಣಿ ನಿಧಿಯು ಕಡಿಮೆಯಾಗಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications