ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಕೇಂದ್ರ ವಿತ್ತ ಸಚಿವೆ ಐದನೇ ಬಾರಿಗೆ ಮಂಡನೆ ಮಾಡುತ್ತಿರುವ ಬಜೆಟ್ ಇದಾಗಿದೆ. ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ಕೆಲವೊಂದು ರಿಲೀಫ್ ನೀಡಿದರೆ, ಕೆಲವು ವಲಯಗಳಿಗೆ ಶಾಕ್ ನೀಡಿದ್ದಾರೆ. ಮುಖ್ಯವಾಗಿ ಕಸ್ಟಮ್ ಸುಂಕವನ್ನು ಏರಿಳಿತ ಮಾಡಲಾಗಿದೆ.
ಕಳೆದ ವರ್ಷದಲ್ಲಿ ದೇಶದಲ್ಲಿ ಮೊಬೈಲ್ ಫೋನ್ ಉತ್ಪಾದನೆ ಏರಿಕೆಯಾಗಿದೆ. ಆದ್ದರಿಂದಾಗಿ ಹಣಕಾಸು ಸಚಿವೆ ನಿರ್ದಿಷ್ಟ ಮೊಬೈಲ್ ಫೋನ್ ತಯಾರಿ ಮಾಡಲು ಬಳಸಲಾಗುವ ವಸ್ತುಗಳ ಆಮದು ಸುಂಕವನ್ನು ಕಡಿತ ಮಾಡಿದೆ. ಕ್ಯಾಮೆರಾ ಲೆನ್ಸ್, ಲಿಥಿಯನ್ ಸೆಲ್ಗಳ ಆಮದು ಸುಂಕವನ್ನು ಇಳಿಸಲಾಗಿದೆ. ಹಾಗೆಯೇ ಟೆಲಿವಿಜನ್ ವಸ್ತುಗಳ ಸುಂಕವನ್ನು ಕೂಡಾ ಇಳಿಸಲಾಗಿದೆ.
ಎಲೆಕ್ಟ್ರಾನಿಕ್ ಕಿಚನ್ ವಸ್ತುಗಳು ದುಬಾರಿಯಾಗಲಿದೆ, ಹೀಟ್ ಕಾಯಿಲ್ಗಳು ಅಗ್ಗವಾಗಲಿದೆ. ರೈತರಿಗೆ ಸಹಾಯಕವಾಗುವಂತೆ ಕೆಲವು ವಸ್ತುಗಳ ಆಮದು ಸುಂಕವನ್ನು ಕೂಡಾ ಇಳಿಸಲಾಗಿದೆ. ಹಾಗಾದರೆ ಯಾವೆಲ್ಲ ವಸ್ತುಗಳು ಬಜೆಟ್ ಬಳಿಕ ದುಬಾರಿಯಾಗಲಿದೆ, ಯಾವೆಲ್ಲ ವಸ್ತುಗಳ ಅಗ್ಗವಾಗಲಿದೆ ಎಂದು ತಿಳಿಯೋಣ ಮುಂದೆ ಓದಿ...

ಯಾವೆಲ್ಲ ವಸ್ತುಗಳು ದುಬಾರಿ?
ಸಾಮಾನ್ಯವಾಗಿ ಬಜೆಟ್ನಲ್ಲಿ ಮಾಡುವ ಯಾವುದೇ ಘೋಷಣೆಗಳು ಕೂಡಾ ಜನಸಾಮಾನ್ಯರ ಮೇಲೆ ನೇರ ಪ್ರಭಾವವನ್ನು ಉಂಟು ಮಾಡುತ್ತದೆ. ಅಗತ್ಯ-ಅನಗತ್ಯ ವಸ್ತುಗಳ ದರವು ಏರಿಕೆಯಾಗುತ್ತಿದ್ದಂತೆ ಅದು ಸಾಮಾನ್ಯ ಜನರ ಜೇಬಿನ ಮೇಲೆ ಪರಿಣಾಮ ಬೀರುತ್ತದೆ. 2023ರ ಬಜೆಟ್ನಲ್ಲಿ ಆಭರಣಗಳು, ಚಿನ್ನ, ಎಲೆಕ್ಟ್ರಾನಿಕ್ ಆಟದ ಸಾಮಾನು, ಬೆಳ್ಳಿ, ಸಿಗರೇಟ್ ಬೆಲೆ ಏರಿಕೆಯಾಗಿದೆ.
ಆಭರಣಗಳು
ಛತ್ರಿಗಳು
ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನ್ಂ
ಸಿಗರೇಟ್
ವಿದೇಶಿ ವಾಹನ
ಬ್ರಾಂಡೆಡ್ ಬಟ್ಟೆ
ಹೆಡ್ಫೋನ್, ಇಯರ್ಫೋನ್
ಸ್ಮಾಟ್ ಮೀಟರ್ಗಳು, ಸೋಲಾರ್ ಸೆಲ್ಸ್
ಎಕ್ಸ್ರೇ ಮಿಷಿನ್, ವೈದ್ಯಕೀಯ ವಸ್ತುಗಳು
ಎಲೆಕ್ಟ್ರಾನಿಕ್ ಆಟದ ಸಾಮಾನು
ಯಾವೆಲ್ಲ ವಸ್ತುಗಳ ಅಗ್ಗ?
2023ರಲ್ಲಿ ಆಹಾರ ಹಣದುಬ್ಬರವು ಕೆಟ್ಟ ಸ್ಥಿತಿಗೆ ತಲುಪುವ ಸಾಧ್ಯತೆಯಿದೆ. ಕಾಟನ್ ಮೇಲೆ ಶೇಕಡ 11ರಷ್ಟು ಆಮದು ಸುಂಕವನ್ನು ಕಡಿತಗೊಳಿಸಲಾಗಿದೆ. ಆದ್ದರಿಂದಾಗಿ ಕೇಂದ್ರ ಬಜೆಟ್ ಸಾಮಾನ್ಯ ಜನರ ಮೇಲೆ ಪ್ರಭಾವ ಉಂಟು ಮಾಡಿದೆ. ಕ್ಯಾಮೆರಾ ಲೆನ್ಸ್, ಲಿಥಿಯನ್ ಸೆಲ್ಗಳಂತಹ ಮೊಬೈಲ್ ಫೋನ್ ಉತ್ಪಾದನೆಗೆ ಬಳಸಲಾಗುವ ವಸ್ತುಗಳ ಆಮದು ಸುಂಕವನ್ನು ಇಳಿಸಲಾಗಿದೆ.
ಸಿಮೆಂಟ್ ಮತ್ತು ಉಕ್ಕು
ಮೊಬೈಲ್ ಫೋನ್ಗಳು
ಎಲೆಕ್ಟ್ರಾನಿಕ್ ವಸ್ತುಗಳು
ಟಿವಿ
ಎಲೆಕ್ಟಿಕ್ ವಾಹನ
ಎಲೆಕ್ಟ್ರಿಕ್ ಚಿಮಣಿ
ಕ್ಯಾಮರಾ ಲೆನ್ಸ್
ಚಾರ್ಜರ್
ಇಂಗು, ಕೋಕೋ ಬೀನ್ಸ್
ಮೀಥೈಲ್ ಆಲ್ಕೋಹಾಲ್,
ಕತ್ತರಿಸಿ ನಯಗೊಳಿಸಿದ ವಜ್ರಗಳು
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications