ಪಿಂಚಣಿ ಯಾರಿಗೆ ಬೇಡ ಹೇಳಿ?, ನಮ್ಮ ವೃದ್ಧಾಪ್ಯದಲ್ಲಿ ನಮಗೆ ಆರ್ಥಿಕವಾಗಿ ಸಹಾಯಕವಾಗುವುದೇ ಪಿಂಚಣಿ. ನಮಗೆ ದುಡಿಯಲು ಸಾಧ್ಯವಾಗದ ಕಾಲದಲ್ಲಿ ನಮ್ಮ ಕೈಹಿಡಿಯುವುದೇ ಪಿಂಚಣಿ. ಆದರೆ ನಾವು ಈ ಪಿಂಚಣಿಯನ್ನು ಪ್ರತಿ ತಿಂಗಳು ಪಡೆಯಬೇಕಾದರೆ ನಾವು ಜೀವಂತವಾಗಿ ಇದ್ದೇವೆ ಎಂಬುವುದನ್ನು ವರ್ಷಕ್ಕೆ ಒಂದು ಬಾರಿ ಸಾಬೀತುಪಡಿಸಬೇಕಾಗುತ್ತದೆ.
ಹೌದು, ಕೇಂದ್ರ ಸರ್ಕಾರದಿಂದ ಮಾಸಿಕವಾಗಿ ಪಿಂಚಣಿಯನ್ನು ಪಡೆಯುವವರು ಜೀವನ ಪ್ರಮಾಣ ಪತ್ರ ಅಥವಾ ವಾರ್ಷಿಕ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡುವುದು ಮುಖ್ಯವಾಗಿದೆ. ಇದಕ್ಕೆ ಜೀವನ ಪ್ರಮಾಣ ಎಂದು ಕೂಡಾ ಕರೆಯಲಾಗುತ್ತದೆ. ಸಾಮಾನ್ಯವಾಗಿ ನಾವು ಜೀವನ ಪ್ರಮಾಣ ಪತ್ರವನ್ನು ಪಿಂಚಣಿ ವಿತರಣಾ ಸಂಸ್ಥೆಗೆ ಸಲ್ಲಿಕೆ ಮಾಡಬೇಕಾಗುತ್ತದೆ. ಇದು ನಾವು ಬದುಕುಳಿದಿದ್ದೇವೆ ಎಂಬುವುದಕ್ಕೆ ಸಾಕ್ಷಿಯಾಗಿದ್ದು, ಇದನ್ನು ಸಲ್ಲಿಕೆ ಮಾಡದಿದ್ದರೆ ನಮ್ಮ ಪಿಂಚಣಿ ಸ್ಥಗಿತವಾಗಬಹುದು.
ಪ್ರತಿ ವರ್ಷವು ಪಿಂಚಣಿದಾರರು ನವೆಂಬರ್ 1ರಿಂದ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡುವುದನ್ನು ಆರಂಭ ಮಾಡಬೇಕು. ಸರ್ಕಾರವು 80 ವರ್ಷಕ್ಕಿಂತ ಮೇಲ್ಪಟ್ಟವರು ಜೀವನ ಪ್ರಮಾಣಪತ್ರವನ್ನು ಬ್ಯಾಂಕ್ಗೆ ಬಂದು ಸಲ್ಲಿಕೆ ಮಾಡುವುದು ಕಷ್ಟವೆಂದು ಬೇರೆ ವಿಧಾನವನ್ನು ಕೂಡಾ ಜಾರಿ ಮಾಡಿದೆ. 80 ವರ್ಷಕ್ಕಿಂತ ಮೇಲ್ಪಟ್ಟವರು ಅಕ್ಟೋಬರ್ 1ರಿಂದಲೇ ಲೈಫ್ ಸರ್ಟಿಫಿಕೇಟ್ ಅನ್ನು ಸಲ್ಲಿಕೆ ಮಾಡಬಹುದು. ಹಾಗೆಯೇ ಸರ್ಕಾರ ಈ ಪತ್ರ ಸಲ್ಲಿಕೆಗೆ ಹಲವಾರು ಆಯ್ಕೆಗಳನ್ನು ನೀಡಿದೆ. ಇಲ್ಲಿ ನಾವು ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡುವ ಐದು ಸುಲಭ ವಿಧಾನವನ್ನು ವಿವರಿಸಿದ್ದೇವೆ. ಮುಂದೆ ಓದಿ...
ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಇರುವ ಆಯ್ಕೆಗಳು
ನೀವು ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡುವ ಮೊದಲ ವಿಧಾನ ನೇರವಾಗಿ ಪಿಂಚಣಿ ವಿತರಣಾ ಸಂಸ್ಥೆಗಳಿಗೆ ಭೇಟಿ ನೀಡುವುದು. ಅಂದರೆ ಬ್ಯಾಂಕ್ಗೆ, ಅಂಚೆ ಕಚೇರಿಗೆ, ರಾಜ್ಯ/ಕೇಂದ್ರಾಡಳಿತ ಕಚೇರಿಗೆ ಭೇಟಿ ನೀಡುವುದು. ನೀವು ಡಿಜಿಟಲ್ ಆಗಿಯೂ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಬಹುದು. ಒಂದು ವೇಳೆ ಪಿಂಚಣಿದಾರರು ತಾವಾಗಿಯೇ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಿಗೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ ಎಂದಾದರೆ, ಲಿಖಿತವಾಗಿ ನಿರ್ಧಿಷ್ಟ ಅಧಿಕಾರಿಗಳ ಸಹಿಯುಲ್ಲ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಬಹುದು. ಅಂಚೆ ಕಚೇರಿ ಸಿಬ್ಬಂದಿಗಳು ಕೂಡಾ ಈ ಕಾರ್ಯವನ್ನು ಮಾಡುತ್ತಾರೆ.
ಜೀವನ ಪ್ರಮಾಣ ಪೋರ್ಟಲ್
ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು ಆನ್ಲೈನ್ ಮೂಲಕವೂ ಸಲ್ಲಿಕೆ ಮಾಡಬಹುದು. ಜೀವನ ಪ್ರಮಾಣ ಪೋರ್ಟಲ್ ಮೂಲಕ ಸರ್ಟಿಫಿಕೇಟ್ ಸಲ್ಲಿಕೆ ಮಾಡಬಹುದು. ಇಲ್ಲಿ ನೀವು ಜೀವನ ಪ್ರಮಾಣ ಅರ್ಜಿಯನ್ನು ಡೌನ್ಲೋಡ್ ಮಾಡಬೇಕಾಗುತ್ತದೆ. ಅರ್ಜಿ ಭರ್ತಿ ಮಾಡಬೇಕಾಗುತ್ತದೆ. ಇಲ್ಲಿ ಬಯೋಮೆಟ್ರಿಲ್ ಡೇಟಾವನ್ನು ಕೂಡಾ ಸಲ್ಲಿಕೆ ಮಾಡಬೇಕಾಗುತ್ತದೆ.
ಗೂಗಲ್ ಪ್ಲೇಸ್ಟೋರ್ನಲ್ಲಿರುವ ಆಪ್ ಮೂಲಕ
ಕೇಂದ್ರ ಸಚಿವಾಲಯ ಹಾಗೂ ಭಾರತದ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) 2020ರಲ್ಲಿ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಮನೆ ಮನೆಗೆ ಹೋಗಿ ಸಹಾಯ ಮಾಡುವ ಯೋಜನೆ ಆರಂಭ ಮಾಡಿದೆ. ಇದರಲ್ಲಿ ಅಂಚೆ ಕಚೇರಿ ಸಿಬ್ಬಂದಿಗಳು ಪಿಂಚಣಿದಾರರ ಮನೆಗೆ ಹೋಗಿ ಗೂಗಲ್ ಪ್ಲೇಸ್ಟೋರ್ನಲ್ಲಿರುವ ಪೋಸ್ಟ್ಇನ್ಫೋ ಆಪ್ ಮೂಲಕ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡುತ್ತಾರೆ. ಪಿಂಚಣಿದಾರರು ಕೂಡಾ ಈ ಆಪ್ನ ಸದುಪಯೋಗ ಮಾಡಬಹುದು.
ಮನೆಮನೆಗೆ ತೆರಳಿ ಸೇವೆ
ಜೀವನ ಪ್ರಮಾಣಪತ್ರ ಸಲ್ಲಿಕೆಗಾಗಿ ಸರ್ಕಾರವು ಮನೆ ಮನೆಗೆ ಬ್ಯಾಂಕಿಂಗ್ ಸೇವೆಯನ್ನು ನೀಡುವುದನ್ನು ಕೂಡಾ ಆರಂಭ ಮಾಡಿದೆ. ಈ ಸೇವೆ ನೀಡುವ ಬ್ಯಾಂಕುಗಳ ಪಟ್ಟಿಯಲ್ಲಿ 12 ಸಾರ್ವಜನಿಕ ಬ್ಯಾಂಕುಗಳು ಇದೆ. ಸುಮಾರು 100 ನಗರಗಳಲ್ಲಿ ಈ ಸೇವೆಯನ್ನು ನೀಡಲಾಗುತ್ತದೆ. ಪಿಂಚಣಿದಾರರು ಮೊಬೈಲ್ ಅಪ್ಲಿಕೇಷನ್ ಮೂಲಕ ಮನೆ ಬಾಗಿಲಿಗೆ ಸೇವೆಯನ್ನು ಪಡೆಯಲು ಬುಕ್ಕಿಂಗ್ ಮಾಡಬಹುದು. ಅಧಿಕೃತ ವೆಬ್ಸೈಟ್ ಮೂಲಕವು ಸೇವೆಗಾಗಿ ಬುಕ್ಕಿಂಗ್ ಮಾಡಬಹುದು. ಟೋಲ್ಫ್ರೀ ಸಂಖ್ಯೆ 18001213721 ಹಾಗೂ 18001037188ಕ್ಕೆ ಕರೆ ಮಾಡಿಯೂ ಸೇವೆಗೆ ಬುಕ್ಕಿಂಗ್ ಮಾಡಬಹುದು.
ಫೇಸ್ ಅಥಾಂಟಿಫಿಕೇಷನ್ ಟೆಕ್ನಾಲಜಿ
ಫೇಸ್ ಅಥಾಂಟಿಫಿಕೇಷನ್ ಟೆಕ್ನಾಲಜಿಯನ್ನು ಬಳಸಿಕೊಂಡು ಕೂಡಾ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಲು ಸಾಧ್ಯವಾಗಲಿದೆ. ಯುಐಡಿಎಐ ಆಧಾರ್ ಸಾಫ್ಟ್ವೇರ್ ಅನ್ನು ಬಳಸಿಕೊಂಡು ಈ ಕಾರ್ಯವನ್ನು ಮಾಡಬಹುದು. ಇದು ಪಿಂಚಣಿದಾರರು ತಮ್ಮ ಅಂಡ್ರಾಯ್ಡ್ ಮೊಬೈಲ್ನಲ್ಲೇ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಜನರೇಟ್ ಮಾಡಲು ಅನುವುಮಾಡುತ್ತದೆ. ಸ್ಮಾರ್ಟ್ಫೋನ್ನಲ್ಲಿ ಪಿಂಚಣಿದಾರರ ಲೈವ್ ಫೋಟೋವನ್ನು ಕ್ಲಿಕ್ ಮಾಡಬಹುದು. ಅದನ್ನು ಜೀವನ ಪ್ರಮಾಣ ಪತ್ರ ಆಪ್ನಲ್ಲಿ ಅಪ್ಲೋಡ್ ಮಾಡಿ ಡಿಜಿಟಲ್ ಜೀವನ ಪ್ರಮಾಣಪತ್ರ ಪಡೆಯಬಹುದು.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!



Click it and Unblock the Notifications